ನಟ ಜಗ್ಗೇಶ್ 
ಸಿನಿಮಾ ಸುದ್ದಿ

ನೆಗೆಟಿವ್ ಕಮೆಂಟ್ ಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಅಭಿಪ್ರಾಯ ಭಯವಿಲ್ಲದೆ ಮುಂದುವರೆಯುತ್ತದೆ: ನಟ ಜಗ್ಗೇಶ್ 

ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ತಮ್ಮ ಸಿನಿಪಯಣದ ಆರಂಭದ ದಿನಗಳು, ನಂತರ ಚಿತ್ರರಂಗದಲ್ಲಿ ಬೆಳೆದದ್ದು, ಸಹಾಯ, ಸಹಕಾರ ನೀಡಿದ ಕಲಾವಿದರು, ವೈಯಕ್ತಿಕ ಜೀವನ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು.

ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ತಮ್ಮ ಸಿನಿಪಯಣದ ಆರಂಭದ ದಿನಗಳು, ನಂತರ ಚಿತ್ರರಂಗದಲ್ಲಿ ಬೆಳೆದದ್ದು, ಸಹಾಯ, ಸಹಕಾರ ನೀಡಿದ ಕಲಾವಿದರು, ವೈಯಕ್ತಿಕ ಜೀವನ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು.

ಪ್ಯಾನ್ ಇಂಡಿಯಾ ಸಿನೆಮಾ ಕನ್ನಡ ಚಿತ್ರರಂಗಕ್ಕೆ, ಇಲ್ಲಿನ ಕಲಾವಿದರ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಜಗ್ಗೇಶ್ ಹೇಳಿದ್ದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಬಂದಿದ್ದವು. ಅದರಲ್ಲಿ ಸಾಕಷ್ಟು ನೆಗೆಟಿವ್ ಕಮೆಂಟ್ ಗಳು ಬಂದಿದ್ದವು. ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿರುವ ಜಗ್ಗೇಶ್, ನನ್ನ ನೇರಮಾತುಗಳನ್ನು ಹಿಂದಿನಿಂದಲೂ ಹಲವರು ವಿರೋಧಿಸಿಕೊಂಡು ಬಂದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸುಮ್ಮಸುಮ್ಮನೆ ಕಮೆಂಟ್ ಮಾಡುತ್ತಾ ಹೋಗುತ್ತಾರೆ. ಅಂತೂ ನಾನು ಜನರ ಬಾಯಲ್ಲಿ, ಮನದಲ್ಲಿ ಮಾತನಾಡಿಕೊಳ್ಳುವಂತವನಾದೆನಲ್ಲಾ, ಒಂದು ದಿನದ ಮಟ್ಟಿಗಾದರೂ ಬಳಕೆಯಾದೆನಲ್ಲಾ ಅದೇ ಸಂತೋಷ ಎಂದಿದ್ದಾರೆ.

ನನ್ನ ಬಗ್ಗೆ ಬಂದಿರುವ ನೆಗೆಟಿವ್ ಮಾತುಗಳಿಂದ ನಾನು ಕುಗ್ಗುವುದಿಲ್ಲ. ಅವರು ಅವರ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಭಯವಿಲ್ಲದೆ ಮುಂದುವರಿಸುತ್ತೇನೆ, ಸೋಷಿಯಲ್ ಮೀಡಿಯಾ, ಟಿವಿ ಹುಟ್ಟೋಕ್ ಮುಂಚೆ ಬಂದವನು ನಾನು, ಈಗ ಸಿನಿಮಾನಟ ಆಗುತ್ತಿದ್ದಂತೆ ಮೀಡಿಯಾ ನಿರ್ವಹಣೆ ತಂಡ ಎಂದು ಇಟ್ಟುಕೊಳ್ಳುತ್ತಾರೆ, ಅವರವರ ಬಗ್ಗೆ ಅವರೇ ಬರೆದುಕೊಳ್ಳುತ್ತಾರೆ, ಯುವಜನತೆ ಅದನ್ನೇ ನಂಬುತ್ತಾರೆ, ಅದರಲ್ಲೇ ಜೀವಿಸುತ್ತಾರೆ, ಒಳಗಿರುವ ನಮಗೆ ಗೊತ್ತು, ಹೊರಗಿರುವ ಅಮಾಯಕರಿಗೆ ಇದು ಗೊತ್ತಾಗುವುದಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 469ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು; ಮಾರಕಾಸ್ತ್ರ ಹಿಡಿದು ಅಬ್ಬರಿಸುತ್ತಿದ್ದ ರೌಡಿಶೀಟರ್ ಹೆಡೆಮುರಿ ಕಟ್ಟಿದ ಬೆಂಗಳೂರಿನ ಪೊಲೀಸರು

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!