ಜಗ್ಗೇಶ್ 
ಸಿನಿಮಾ ಸುದ್ದಿ

ಸಿನಿಮಾ ನಂಬಿ ಹಾಳಾಗದಿರಿ, ಓದಿ ದಡ ಸೇರಿ: ನವರಸ ನಾಯಕ ಜಗ್ಗೇಶ್

ಚಿತ್ರರಂಗಕ್ಕೆ ಬರಬೇಕು, ಹೆಸರು, ಹಣ ಸಂಪಾದಿಸಬೇಕು ಎಂಬುದು ಹಲವರ ಕನಸು. ಅನೇಕ ಮಂದಿ ಅದಕ್ಕಾಗಿ ಮನೆ ಬಿಟ್ಟು ಬಂದವರೂ ಇದ್ದಾರೆ.

ಬೆಂಗಳೂರು: ಚಿತ್ರರಂಗಕ್ಕೆ ಬರಬೇಕು, ಹೆಸರು, ಹಣ ಸಂಪಾದಿಸಬೇಕು ಎಂಬುದು ಹಲವರ ಕನಸು. ಅನೇಕ ಮಂದಿ ಅದಕ್ಕಾಗಿ ಮನೆ ಬಿಟ್ಟು ಬಂದವರೂ ಇದ್ದಾರೆ.

ಎಷ್ಟೋ ಮಂದಿ ಯಶಸ್ಸು ಕಂಡಿದ್ದರೆ, ಕೆಲವರು ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದ್ದರೆ, ಇನ್ನೂ ಹಲವರು ತಲೆಕೆಡಿಸಿಕೊಂಡು ಹಾಳಾಗಿದ್ದಾರೆ. ಇಂತಹ ಸಂದರ್ಭದಲ್ಲಿ “ಸಿನಿಮಾ ನಂಬಿ ಹಾಳಾಗಬೇಡಿ” ಎಂದು ನಟ ಜಗ್ಗೇಶ್‍ ಸಲಹೆ ನೀಡಿದ್ದಾರೆ.

ಪ್ರಸ್ತುತ ಚಿತ್ರರಂಗ ಬದಲಾಗಿದೆ. ಸಿನಿಮಾ ಇಂಡಸ್ಟ್ರಿ ಅಂದ್ರೆ ಅನುಮಾನದಿಂದ ನೋಡುವಂತಾಗಿದೆ. ಭವಿಷ್ಯ ರೂಪಿಸಿಕೊಳ್ಳಲು ಬರುವ ಯುವಕರು ಎಲ್ಲಿ ಜೀವನ ಹಾಳು ಮಾಡಿಕೊಂಡು ಬಿಡುತ್ತಾರೆ ಎಂಬ ಆತಂಕ ಹೆಚ್ಚು. ಹೀಗಾಗಿ ನಿರ್ದೇಶಕನಾಗಬೇಕೆಂದು ಬಯಸಿರುವ ಯುವಕನಿಗೆ ಜಗ್ಗೇಶ್ ಕಿವಿಮಾತು ಹೇಳಿದ್ದಾರೆ.

“ಜಗ್ಗೇಶ್ ಸರ್....ನನಗೆ ಡೈರೆಕ್ಟರ್ ಆಗಬೇಕು ಎಂಬ ಕನಸು. ನಾನು ಈಗ ಎರಡು ವರ್ಷ ಡಿಪ್ಲೋಮಾ ಮಾಡ್ತಿದ್ದೀನಿ. ಆಮೇಲೆ ಇಂಜಿನಿಯರಿಂಗ್ ಹೋಗ್ಲಾ ಅಥವಾ ಸಿನಿಮಾ ಇಂಡಸ್ಟ್ರಿಗೆ ಬರ್ಲಾ? ನಿರ್ದೇಶಕ ಆಗಬೇಕು ಎನ್ನುವುದು ನನಗೆ ದೊಡ್ಡ ಕನಸು'' ಎಂದು ಟ್ವಿಟ್ಟರ್ ಮೂಲಕ ಕೇಳಿದ್ದಾನೆ. ಅದಕ್ಕೆ ಜಗ್ಗೇಶ್ ಅವರು ಪ್ರತಿಕ್ರಿಯಿಸಿ ''ದಯಮಾಡಿ ಓದಿ ದಡ ಸೇರಿ! ಇಂದಿನ ಸಿನಿಮಾ ನಂಬಿ ತಂದೆ ತಾಯಿ ಕನಸು ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ! ನೀವೆಲ್ಲಾ ಅಂದುಕೊಂಡಷ್ಟು ಸುಲಭವಿಲ್ಲಾ ಇಂದಿನ ಸಿನಿಮಾ! ಬೇಕಾದರೆ ಸಂತೋಷಕ್ಕೆ ಹವ್ಯಾಸ ಆಗಿ ಬಳಸಿ ವೃತ್ತಿಯಾಗಿ ಅಲ್ಲ! ಬೆರಳೆಣಿಸುವ ಕೆಲವರ ಬಿಟ್ಟು ಶೇ. 98ರಷ್ಟು ಸಿನಿಮಾ ಜನ ಸಂಕಷ್ಟದಲ್ಲಿ ಇದ್ದಾರೆ ಎಂದು ವಾಸ್ತವ ತೆರೆದಿಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT