ಸಿನಿಮಾ ಸುದ್ದಿ

ವಿಷ್ಣುವರ್ಧನ್ ಅರ್ಹತೆಗೆ ತಕ್ಕ ಮನ್ನಣೆ ದೊರಕಿಲ್ಲವೆಂಬ ಕೊರಗಿದೆ: ರಮೇಶ್ ಭಟ್

Raghavendra Adiga

ಸಾಹಸ ಸಿಂಹ ವಿಷ್ಣುವರ್ಧನ್ ಹೆಸರು ಚಿರಸ್ಥಾಯಿ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರ ಹೃದಯದಲ್ಲಿ ನೆಲೆಸಿರುವ ಹೃದಯವಂತ. ಆದಾಗ್ಯೂ, ಅವರ ಅರ್ಹತೆಗೆ ತಕ್ಕ ಮನ್ನಣೆ ಸಿಕ್ಕಿಲ್ಲವೆಂಬ ಕೊರಗಿದೆ ಎಂದು ಹಿರಿಯ ನಟ ರಮೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

ವಿಷ್ಣುವರ್ಧನ್ ಅವರ 70ನೇ ಜನ್ಮದಿನಕ್ಕೆ ಮುನ್ನಾದಿನ ಯುಎನ್‍ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, “ಕೆಲಸದ ಬಗೆಗಿನ ಅವರ ನಿಷ್ಠೆ, ಬದ್ಧತೆ ಅನನ್ಯ. ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುತ್ತಿದ್ದ ಸಹೃದಯಿ. ಕರುಣಾಮಯಿ, ಹೃದಯವಂತ, ಕರ್ಣ,ಸಾಹಸ ಸಿಂಹ, ಆಪ್ತರಕ್ಷಕ ಮುಂತಾದವು ಕೇವಲ ಚಿತ್ರಗಳ ಹೆಸರಲ್ಲ. ಅನ್ವರ್ಥ ನಾಮ” ಎಂದರು.

SCROLL FOR NEXT