ರವಿಚಂದ್ರನ್ 
ಸಿನಿಮಾ ಸುದ್ದಿ

'ದೃಶ್ಯಂ 2' ಕನ್ನಡ ರಿಮೇಕ್ ಗಾಗಿ ಮತ್ತೆ ಒಂದಾದ ರವಿಚಂದ್ರನ್, ಪಿ.ವಾಸು ಜೋಡಿ

"ದೃಶ್ಯ" ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ  ನಿರ್ದೇಶಕ ಪಿ. ವಾಸು ಜೋಡಿ ಇದೀಗ "ದೃಶ್ಯ 2" ಮೂಲಕ ಮತ್ತೆ ಒಂದಾಗುತ್ತಿದೆ. ಇತ್ತೀಚೆಗೆ ಮಲಯಾಳಂನಲ್ಲಿ ತೆರೆಕಂಡು ಯಶಸ್ವಿಯಾಗಿದ್ದ "ದೃಶ್ಯಂ 2" ರಿಮೇಕ್ ನಲ್ಲಿ ಈ ಇಬ್ಬರೂ ಮತ್ತೆ ಸೇರುತ್ತಿದ್ದಾರೆ.

"ದೃಶ್ಯ" ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ  ನಿರ್ದೇಶಕ ಪಿ. ವಾಸು ಜೋಡಿ ಇದೀಗ "ದೃಶ್ಯ 2" ಮೂಲಕ ಮತ್ತೆ ಒಂದಾಗುತ್ತಿದೆ. ಇತ್ತೀಚೆಗೆ ಮಲಯಾಳಂನಲ್ಲಿ ತೆರೆಕಂಡು ಯಶಸ್ವಿಯಾಗಿದ್ದ "ದೃಶ್ಯಂ 2" ರಿಮೇಕ್ ನಲ್ಲಿ ಈ ಇಬ್ಬರೂ ಮತ್ತೆ ಸೇರುತ್ತಿದ್ದಾರೆ.

ಜಿತು ಜೋಸೆಫ್ ನಿರ್ದೇಶನದ ಮತ್ತು ಮೋಹನ್ ಲಾಲ್ ಅಭಿನಯದ "ದೃಶ್ಯಂ 2" ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಅದ್ಭುತ ಪ್ರತಿಕ್ರಿಯೆ ಪಡೆದಿದೆ.

ಕನ್ನಡದಲ್ಲಿ  E4 ಎಂಟರ್‌ಟೈನ್‌ಮೆಂಟ್ ಸಂಸ್ಥೆ ಯುಗಾದಿಯ ಶುಭ ಸಮಯದಂದು ರಿಮೇಕ್ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

"ದೃಶ್ಯ" ಚಿತ್ರದಲ್ಲಿ ಅಭಿನಯಿಸಿದ್ದ ನವ್ಯ ನಾಯರ್, ಆರೋಹಿ ನಾರಾಯಣ್, ಪ್ರಭು, ಆಶಾ ಶರತ್ ಮತ್ತು ಉನ್ನತಿ ಈ ಚಿತ್ರದ ಮುಂದಿನ ಭಾಗದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಅದೇ ವೇಳೆ ನಟ ಪ್ರಮೋದ್ ಶೆಟ್ಟಿ ಈ ಸಿನಿಮಾ ಸೆಟ್ ಗೆ ಹೊಸದಾಗಿ ಸೇರಲಿದ್ದಾರೆ. ಉಳಿದ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.

 ಜಿ.ಎಸ್.ವಿ. ಸೀತಾರಾಂ ಚಿತ್ರಕ್ಕೆ ಕ್ಯಾಮರಾ ಕೆಲಸ ನಿರ್ವಹಿಸಲಿದ್ದು ಹಿನ್ನೆಲೆ ಸಂಗೀತಗಾರರನ್ನು ಇನ್ನೂ ಅಂತಿಮಗೊಳಿಸಿಲ್ಲ. ಚಿತ್ರವನ್ನು ಮುಖೇಶ್ ಆರ್ ಮೆಹ್ತಾ ಮತ್ತು ಸಿ.ವಿ.ಸಾರಥಿ ನಿರ್ಮಿಸಲಿದ್ದಾರೆ. ಈ ಯೋಜನೆಯು ಮೇ ತಿಂಗಳಲ್ಲಿ ಪ್ರೊಡಕ್ಷನ್ ಪ್ರಾರಂಭ ಮಾಡಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT