ಲಾಸ್ಯ ನಾಗರಾಜ್ 
ಸಿನಿಮಾ ಸುದ್ದಿ

ದೃಶ್ಯ-2 ಸಿನಿಮಾದಲ್ಲಿ ರವಿಚಂದ್ರನ್ ಜೊತೆ ಲಾಸ್ಯ ನಾಗರಾಜ್!

ಇದುವರೆಗೂ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿ ಜನಪ್ರಿಯವಾಗಿದ್ದ ಲಾಸ್ಯ ನಾಗರಾಜ್ ರವಿಚಂದ್ರನ್ ಅವರ ಜೊತೆ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಇದುವರೆಗೂ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿ ಜನಪ್ರಿಯವಾಗಿದ್ದ ಲಾಸ್ಯ ನಾಗರಾಜ್ ರವಿಚಂದ್ರನ್ ಅವರ ಜೊತೆ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಮೋಹನ್ ಲಾಲ್ ನಟನೆಯ ಮಲಯಾಳಂ ದೃಶ್ಯಂ2 ಸಿನಿಮಾ ರಿಮೇಕ್ ಸಿನಿಮಾ ದೃಶ್ಯ 2 ಚಿತ್ರವನ್ನು ಪಿ ವಾಸು ನಿರ್ದೇಶಿಸುತ್ತಿದ್ದಾರೆ. 

ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸುತ್ತಿರುವುದಕ್ಕೆ ನಾನು ತುಂಬಾ ಎಕ್ಸೈಟ್ ಆಗಿದ್ದೇನೆ, ಸ್ಯಾಂಡಲ್ ವುಡ್ ಗೆ ಎಂಟ್ರಿಯಾದಾಗಿನಿಂದ ನಾನು ಪ್ರತಿಭೆ ಆಧಾರಿತ ಪಾತ್ರದಲ್ಲಿ ನಟಿಸಲು ಕಾಯುತ್ತಿದ್ದೆ ಎಂದು ಲಾಸ್ಯ ತಿಳಿಸಿದ್ದಾರೆ.

ನಾನು ಯಾವಾಗಲೂ ನನ್ನಿಂದ ದೂರವಿರುವ ಒಂದು ರೋಚಕ ಪಾತ್ರದಲ್ಲಿರಲು ಬಯಸುತ್ತೇನೆ. ಈ ಪಾತ್ರವನ್ನು ನಿರ್ವಹಿಸುವಾಗ ನನಗೆ ಇದು ಅನುಭವಕ್ಕೆ ಬಂದಿತು, ಎಂದು ಕೂರ್ಗ್‌ನಲ್ಲಿ 15 ದಿನಗಳ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಲಾಸ್ಯಾ ಹೇಳಿದ್ದಾರೆ. 

ಬಬ್ಲಿ ಪಾತ್ರಗಳನ್ನು  ನಿರ್ವಹಿಸಿದ ನಂತರ, ಇಂತಹ ಪ್ರತಿಭಾನ್ವಿತ ಪಾತ್ರವನ್ನು ನಿರ್ವಹಿಸುವುದು ಸವಾಲಾಗಿತ್ತು ಎಂದು ಲಾಸ್ಯ ಹೇಳುತ್ತಾರೆ. ಪುನೀತ್ ರಾಜ್ ಕುಮಾರ್ ಅವರೊಂದಿಗಿನ ಜಾಹೀರಾತು ನಿರ್ದೇಶಕ ವಾಸು ಅವರ ಗಮನ ಸೆಳೆಯಿತು ಎಂದು ಲಾಸ್ಯಾ ಬಹಿರಂಗಪಡಿಸಿದ್ದಾರೆ.

ನಾನು ನನ್ನ ಬಗ್ಗೆ ನೀಡಿದ ಮಾಹಿತಿಯಿಂದ ಆರಂಭದಲ್ಲಿ ನಿರ್ದೇಶಕರು ಕೂಡ ಸಂಶಯ ಹೊಂದಿದ್ದರು, ಏಕೆಂದರೆ ನಾನು ಹೆಚ್ಚಾಗಿ ಮನಮೋಹಕ ಪಾತ್ರಗಳನ್ನು ಮಾತ್ರ ಮಾಡಿದ್ದೇನೆ. ಆದರೆ  ಜಾಹೀರಾತನ್ನು ವೀಕ್ಷಿಸಿದ ನಂತರ  ಚಿತ್ರೀಕರಣದ ಸಮಯದಲ್ಲಿ ನನ್ನ ಪ್ರದರ್ಶನವನ್ನು ನೋಡಿದ ನಂತರ, ನನ್ನ ಆಯ್ಕೆ ಸರಿಯಾಗಿದೆ ಎಂಬ ನಿರ್ಧಾರಕ್ಕೆ ಬಂದರು.

ಹಿರಿಯ ನಿರ್ದೇಶಕರಿಂದ ಮೆಚ್ಚುಗೆ ಪಡೆದಿರುವುದು ನನಗೆ ಸಂತೋಷವಾಗಿದೆ. ದೃಶ್ಯ 2ಸಿನಿಮಾ ಜೊತೆಗೆ ಪೃಥ್ವಿ ಅಂಬರ್ ಅವರ ಲೈಫ್ ಈಸ್ ಬ್ಯೂಟಿಫುಲ್, ಪೈಪ್ ಲೈನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದರ ಜೊತೆಗೆ ಇನ್ನೂ ಎರಡು ಸಿನಿಮಾಗಳಲ್ಲಿ ಲಾಸ್ಯ ಬ್ಯುಸಿಯಾಗಿದ್ದಾರೆ, ತಂದೆ-ಮಗಳ ಕಥೆಯುಳ್ಳ ಚಿತ್ರ ಇದಾಗಿದೆ.
ಹಿರಿಯ ನಟ ಶರತ್ ಲೋಹಿತಾಶ್ವ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮತ್ತೊಂದು ಮಹಿಳಾ ಪ್ರಧಾನ ಸಿನಿಮಾದಲ್ಲಿಯೂ ನಟಿಸುತ್ತಿದ್ದು, ಸೆಪ್ಟಂಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT