ಅಲ್ಲು ಅರ್ಜುನ್-ರಶ್ಮಿಕಾ 
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಪುಷ್ಪ’: ಆರೇ ದಿನದಲ್ಲಿ 200 ಕೋಟಿ ರೂ. ಗಳಿಕೆ!

ಟಾಲಿವುಡ್ ಸೂಪರ್‍ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಇತ್ತೀಚಿನ ಚಿತ್ರ 'ಪುಷ್ಪ' ದಿ ರೈಸ್ ಕಳೆದ ಆರೇ ದಿನಗಳಲ್ಲಿ ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ ಮುನ್ನುಗುತ್ತಿದೆ.

ಹೈದರಾಬಾದ್: ಟಾಲಿವುಡ್ ಸೂಪರ್‍ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಇತ್ತೀಚಿನ ಚಿತ್ರ 'ಪುಷ್ಪ' ದಿ ರೈಸ್ ಕಳೆದ ಆರೇ ದಿನಗಳಲ್ಲಿ ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ ಮುನ್ನುಗುತ್ತಿದೆ.

ಪುಷ್ಪ ಚಿತ್ರ ಕೇವಲ ಆರು ದಿನಗಳಲ್ಲೇ 200 ಕೋಟಿ ರೂ. ಗಳಿಸುವ ಮೂಲಕ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವಾರ ಬಿಡುಗಡೆಯಾದಾಗಿನಿಂದ ಈ ಚಿತ್ರವು ಸದ್ದು ಮಾಡುತ್ತಲೇ ಇದೆ.

ದೇಶಾದ್ಯಂತ ಟ್ರೆಂಡ್‍ನಾದ್ಯಂತ ಬಾಕ್ಸ್ ಆಫೀಸ್‍ನಲ್ಲಿ ಬುಲಿಶ್ ಅನ್ನು ಕಾಯ್ದುಕೊಂಡಿದೆ. ಥಿಯೇಟರ್‍ ಗಳಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಹಲವಾರು ಚಿತ್ರಗಳ ಕಾರಣದಿಂದಾಗಿ ಚಿತ್ರದ ಗಳಿಕೆಯು ನಿಧಾನವಾಗಬಹುದು.

ಆದಾಗ್ಯೂ, ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 173 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಪುಷ್ಪ ಈಗಾಗಲೇ ಕೊರೋನಾ ಸಮಯದಲ್ಲೂ ಹೊಸ ದಾಖಲೆಯನ್ನು ನಿರ್ಮಿಸಿದೆ. ಆಂಧ್ರ ಪ್ರದೇಶದಲ್ಲಿ ಕಟ್ಟುನಿಟ್ಟಾದ ಟಿಕೆಟ್ ದರದ ನಿಯಮಗಳು ಇಲ್ಲದಿದ್ದರೆ ಚಿತ್ರದ ಗಳಿಕೆಯು ಇನ್ನಷ್ಟು ಹೆಚ್ಚುವ ಸಾಧ್ಯತೆ ಇತ್ತು. ಆಂಧ್ರಪ್ರದೇಶದ ಕೆಲವು ಥಿಯೇಟರ್‍ ಗಳಲ್ಲಿ ಟಿಕೆಟ್‍ಗಳು 10 ರೂಪಾಯಿಗಿಂತ ಕಡಿಮೆ ಮೌಲ್ಯದಲ್ಲಿ ಮಾರಾಟವಾಗುತ್ತಿವೆ. ಇದು ಇನ್ನಷ್ಟು ಗಳಿಕೆಗೆ ಹೊಡೆತ ತಂದಿದೆ ಎಂದು ಉದ್ಯಮದ ತಜ್ಞರು ವಿವರಿಸುತ್ತಾರೆ.

ಚಿತ್ರದ ನಿರ್ಮಾಪಕರು, ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರು ದಕ್ಷಿಣದ ರಾಜ್ಯಗಳಾದ್ಯಂತ ಪ್ರವಾಸ ಕೈಗೊಳ್ಳುವ ಮೂಲಕ ಚಿತ್ರದ ಯಶಸ್ಸಿಗೆ ಸಹಕರಿಸಬೇಕೆಂದು ಅಭಿಮಾನಿಗಳಲ್ಲಿ ವಿನಂತಿಸುತ್ತಿದ್ದಾರೆ.

ಆದರೆ ಈ ವಾರ ನಾನಿ ಅಭಿನಯದ ಶ್ಯಾಮ್ ಸಿಂಘ ರಾಯ್, ರಣಬೀರ್ ಸಿಂಗ್ ಅಭಿನಯದ 83 ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಗಳಿಕೆ ಕಡಿಮೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT