ಸಿತಾರ್ ಮಾಂತ್ರಿಕ ಪಂ.ದೆಬು ಚೌಧರಿ 
ಸಿನಿಮಾ ಸುದ್ದಿ

ದೆಹಲಿ: ಖ್ಯಾತ ಸಿತಾರ್ ಮಾಂತ್ರಿಕ ಪಂಡಿತ್ ದೆಬು ಚೌಧರಿ ಕೋವಿಡ್ ಸೋಂಕಿನಿಂದ ನಿಧನ

ಸಿತಾರ್ ಮಾಂತ್ರಿಕ ಪಂಡಿತ್ ದೆಬು ಚೌಧರಿ ದೆಹಲಿಯ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಕೋವಿಡ್ ಸಂಬಂಧಿ ಸಮಸ್ಯೆಗಳಿಂದ ನಿಧನರಾಗಿದ್ದಾರೆ ಎಂದು ಅವರ ಪುತ್ರ ಪ್ರತೀಕ್ ಚೌಧರಿ ತಿಳಿಸಿದ್ದಾರೆ.

ನವದೆಹಲಿ: ಸಿತಾರ್ ಮಾಂತ್ರಿಕ ಪಂಡಿತ್ ದೆಬು ಚೌಧರಿ ದೆಹಲಿಯ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಕೋವಿಡ್ ಸಂಬಂಧಿ ಸಮಸ್ಯೆಗಳಿಂದ ನಿಧನರಾಗಿದ್ದಾರೆ ಎಂದು ಅವರ ಪುತ್ರ ಪ್ರತೀಕ್ ಚೌಧರಿ ತಿಳಿಸಿದ್ದಾರೆ.

ಪಂಡಿತ್ ದೆಬು ಚೌಧರಿಯವರಿಗೆ 85 ವರ್ಷ ವಯಸ್ಸಾಗಿತ್ತು. ತಮ್ಮ ಫೇಸ್ ಬುಕ್ ಪುಟದಲ್ಲಿ ತಂದೆಯ ನಿಧನ ಸುದ್ದಿಯನ್ನು ಖಚಿತಪಡಿಸಿರುವ ಪುತ್ರ ಪ್ರತೀಕ್ ಚೌಧರಿ, ನನ್ನ ತಂದೆ ಸಿತಾರ್ ಮಾಂತ್ರಿಕ ಪಂಡಿತ್ ದೆಬು ಚೌಧರಿ ಇನ್ನಿಲ್ಲ, ಅವರನ್ನು ಕಳೆದ ಮಧ್ಯರಾತ್ರಿ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಐಸಿಯುಗೆ ವರ್ಗಾಯಿಸಿದ್ದರು. ಅಲ್ಲಿ ಕಳೆದ ಮಧ್ಯರಾತ್ರಿ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದಾರೆ, ಎಷ್ಟೇ ಪ್ರಾರ್ಥನೆ, ಪ್ರಯತ್ನ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ಖ್ಯಾತ ಸಂಗೀತ ಕಲಾವಿದ ಪುತ್ರ ಪ್ರತೀಕ್, ಸೊಸೆ ರುನಾ, ಮೊಮ್ಮಕ್ಕಳಾದ ರಯಾನ ಮತ್ತು ಅಧಿರಾಜ್ ರನ್ನು ಅಗಲಿದ್ದಾರೆ. ದೆಹಲಿಯ ಗುರು ತೇಗ್ ಬಹದ್ದೂರು ಆಸ್ಪತ್ರೆಗೆ ಅವರು ದಾಖಲಾಗಿದ್ದರು, ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಕಂಡುಬಂದ ಕಾರಣ ಐಸಿಯುಗೆ ದಾಖಲಾಗಿದ್ದರು.

ಖ್ಯಾತ ಸಿತಾರ್ ವಾದಕರಾದ ಉಸ್ತಾದ್ ವಿನಾಯತ್ ಖಾನ್, ಪಂಡಿತ್ ರವಿ ಶಂಕರ್, ನಿಖಿಲ್ ಬ್ಯಾನರ್ಜಿ ಅವರ ಸಮಕಾಲೀನರಾಗಿದ್ದ ಪಂಡಿತ್ ಚೌಧರಿ, ಜೈಪುರ ಸಿನಿಯಾ ಘರಾನ ಸಂಗೀತ ಪರಂಪರೆಗೆ ಸೇರಿದವರಾಗಿದ್ದರು.

ಭಾರತ ಸರ್ಕಾರದ ಪದ್ಮಭೂಷಣ ಮತ್ತು ಪದ್ಮ ಶ್ರೀ ಗೌರವಗಳು ಅವರಿಗೆ ಒಲಿದು ಬಂದಿತ್ತು.

ಶಿಕ್ಷಕ ಮತ್ತು ಬರಹಗಾರರೂ ಆಗಿದ್ದ ಚೌಧರಿಯವರು 6 ಪುಸ್ತಕಗಳನ್ನು ಹಲವು ಪದ್ಯಗಳನ್ನು ಬರೆದಿದ್ದರು. ಮುಶ್ತಾಖ್ ಆಲಿ ಖಾನ್ ಅವರ ಶಿಷ್ಯರಾಗಿದ್ದ ಪಂಡಿತ್ ಚೌಧರಿ 1935ರಲ್ಲಿ ಮೈಮನ್ ಸಿಂಗ್ ಇಂದಿನ ಬಾಂಗ್ಲಾದೇಶದಲ್ಲಿ ಜನಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜಸ್ಥಾನ: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಏಳು ಮಂದಿ ಸಜೀವ ದಹನ

ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ: ಡಿಕೆಶಿ ಬಂಡೆ ಅಲ್ಲ ರೈಲ್ವೆ ಎಂಜಿನ್, ಬರೋವಾಗ ದೊಡ್ಡ ಸೌಂಡ್ ಇರುತ್ತೆ; ಬಿ.ಕೆ ಹರಿಪ್ರಸಾದ್

ಕಾಂಗ್ರೆಸ್ ಗೆ ಬಿಗ್ ಶಾಕ್: ಬಾಗೆಪಲ್ಲಿ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು- ಹೈಕೋರ್ಟ್ ಆದೇಶ

ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ: ಹರಿಯಾಣ, ರಾಜಸ್ಥಾನದಲ್ಲಿ ಶೂಟರ್ ಸೇರಿ ಆರು ಮಂದಿ ಬಂಧನ

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಷಯ ಮತ್ತೆ ಮುನ್ನೆಲೆಗೆ; ಸುಪ್ರೀಂ ನಲ್ಲಿ ಏ.07 ರಿಂದ ವಿಚಾರಣೆ

SCROLL FOR NEXT