ಪುರುಷೋತ್ತಮ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

'ಪುರುಷೋತ್ತಮ' ದಲ್ಲಿ ನಾನು ಮೊದಲ ಬಾರಿಗೆ ಪ್ರಬುದ್ಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ: ನಟಿ ಅಪೂರ್ವ

ಬಾಡಿಬಿಲ್ಡರ್ ರವಿ ಅಭಿನಯದ ಚೊಚ್ಚಲ ಚಿತ್ರ "ಪುರುಷೋತ್ತಮ" ಸಿನಿಮಾ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ. ಅಪೂರ್ವ ಈ ಹಿಂದೆ "ವಿಕ್ಟರಿ-2" ನಂತಹಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ನಟ ಅಜಯ್ ರಾವ್ ಅಭಿನಯದ "ಕೃಷ್ಣ ಟಾಕೀಸ್" ಚಿತ್ರದಲ್ಲಿ ಸಹ ಅಭಿನಯಿಸಿದ್ದಾರೆ.

ಬಾಡಿಬಿಲ್ಡರ್ ರವಿ ಅಭಿನಯದ ಚೊಚ್ಚಲ ಚಿತ್ರ "ಪುರುಷೋತ್ತಮ" ಸಿನಿಮಾ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ. ಅಪೂರ್ವಾ ಈ ಹಿಂದೆ "ವಿಕ್ಟರಿ-2" ನಂತಹಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ನಟ ಅಜಯ್ ರಾವ್ ಅಭಿನಯದ "ಕೃಷ್ಣ ಟಾಕೀಸ್" ಚಿತ್ರದಲ್ಲಿ ಸಹ ಅಭಿನಯಿಸಿದ್ದಾರೆ.

130 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿರುವ ಜಿಮ್ ರವಿ ಇದೇ ಮೊದಲ ಬಾರಿಗೆ "ಪುರುಷೋತ್ತಮ" ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮರನಾಥ್ ಎಸ್‌ವಿ ನಿರ್ದೇಶನದ ಈ ಚಿತ್ರ ಫೆಬ್ರವರಿ 14 ರಂದು ಮಹೂರ್ತ ಆಚರಿಸಿಕೊಂಡಿದೆ. ಅಪೂರ್ವ ಹಾಗೂ ಇತರೆ ಪಾತ್ರವರ್ಗ ಮತ್ತು ಸಿಬ್ಬಂದಿಗಳೊಂದಿಗೆ ಮೈಸೂರಿನ ವಿವಿಧ ಭಾಗಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.

ತಂಡವು ಕೇವಲ 12 ದಿನಗಳ ಶೂಟಿಂಗ್ ಮಾತ್ರವೇ ಉಳಿದಿದ್ದರೂ, ಲಾಕ್‌ಡೌನ್ ಕಾರಣ ಚಿತ್ರೀಕರಣ ಸ್ಥಗಿತವಾಗಿದೆ. ಚಿತ್ರೋದ್ಯಮಿಗಳ ನಡುವೆ ಜಿಮ್ ರವಿ ಎಂದು ಜನಪ್ರಿಯವಾಗಿರುವ ರವಿ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ. ಪತ್ರಿಕೆಯೊಡನೆ ಮಾತನಾಡಿರುವ ನಟಿ "ಪುರುಷೋತ್ತಮ" ದಲ್ಲಿ ತನ್ನನ್ನು ವಿಭಿನ್ನ ಲೈಟ್ ಹಾಗೂ ಪಾತ್ರದಲ್ಲಿ ನೋಡಲಿದ್ದೀರಿ ಎಂದಿದ್ದಾರೆ.

ಇದು ರಿವೆಂಜ್ ಥ್ರಿಲ್ಲರ್, ಕಥೆಯು ನಾಯಕಿಯ ಸುತ್ತ ತಿರುಗುತ್ತದೆ. ಈ ಚಿತ್ರವು ನನ್ನನ್ನು ಪ್ರಬುದ್ಧ ಪಾತ್ರವೊಂದರಲ್ಲಿ ತೋರಿಸಲಿದೆ. ನನಗಿಂತ ಹಿರಿಯಳಾದ ವಿವಾಹಿತ ಮಹಿಳೆಯ ಜವಾಬ್ದಾರಿಯುತ ಪಾತ್ರವನ್ನು ನಾನು ಇಲ್ಲಿ ನಿರ್ವಹಿಸಿದ್ದೇನೆ. ಇದು ನನ್ನ ಮೊದಲ ಪ್ರಯತ್ನವಾಗಿರುವುದರಿಂದ, ಪ್ರತಿಯೊಂದು ಸೀನ್ ಸಹ ಒಂದು ಸವಾಲಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದರು. ಶ್ರೀಧರ್ ವಿ ಸಂಭ್ರಮ್ ಮತ್ತು ಡಿಒಪಿ ಕುಮಾರ್ ಆರ್ ಕ್ರಮವಾಗಿ ಸಂಗೀತ ಮತ್ತು ಛಾಯಾಗ್ರಹಣ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT