ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

ಡಿಜಿಟಲ್ ಪ್ರಪಂಚದತ್ತ ರಮೇಶ್ ಅರವಿಂದ್ ದೃಷ್ಟಿ!

ಕೊರೋನಾ ಎರಡನೇ ಅಲೆ ಇಲ್ಲದಿದ್ದಲ್ಲಿ ನಟ ರಮೇಶ್ ಅರವಿಂದ್ ಆಕಾಶ್ ಶ್ರೀವತ್ಸ ಅವರ ಶಿವಾಜಿ ಸುರತ್ಕಲ್ 2 ಚಿತ್ರದ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದರು ಆದರೆ ಅದನ್ನೀಗ ಮುಂದೂಡಲಾಗಿದೆ.

ಕೊರೋನಾ ಎರಡನೇ ಅಲೆ ಇಲ್ಲದಿದ್ದಲ್ಲಿ ನಟ ರಮೇಶ್ ಅರವಿಂದ್ ಆಕಾಶ್ ಶ್ರೀವತ್ಸ ಅವರ ಶಿವಾಜಿ ಸುರತ್ಕಲ್ 2 ಚಿತ್ರದ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದರು ಆದರೆ ಅದನ್ನೀಗ ಮುಂದೂಡಲಾಗಿದೆ. ಎಲ್ಲರೂ ಮತ್ತು ಎಲ್ಲವೂ ಈ ಕ್ಷಣದಲ್ಲಿ ತಟಸ್ಥವಾಗಿ ಕಾಣುತ್ತಿದೆ.ಸಾಂಕ್ರಾಮಿಕ ಹಾಗೂ ಲಾಕ್‌ಡೌನ್ ಇದಕ್ಕೆ ಕಾರಣಎಂದು ನಟ-ನಿರ್ದೇಶಕ ರಮೇಶ್ ಹೇಳಿದ್ದಾರೆ.

"ಅದೃಷ್ಟವಶಾತ್, ಶಿವಾಜಿ ಸುರತ್ಕಲ್ ಸರಣಿಯ ಸ್ಕ್ರಿಪ್ಟ್ ಅನ್ನು ತಯಾರಿಸಲಾಗಿದೆ. ಆದರೆ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ ಮತ್ತೆ ತೆರೆದಾಗ ನಾನು ಮಾಡುವ ಮೊದಲ ಯೋಜನೆ ಇದಾಗಿದೆ." ಎಂದು ಅವರು ಹೇಳಿದರು. ರಮೇಶ್ ತಮ್ಮ ಇತ್ತೀಚಿನ ನಿರ್ದೇಶನದ "100"  ಚಿತ್ರಮಂದಿರಗಳಲ್ಲಿ ತೆರೆಕಾಣುವ ನಿರೀಕ್ಷೆಯಲ್ಲಿದ್ದಾರೆ. ರಮೇಶ್ ರೆಡ್ಡಿ ಅವರ ನಿರ್ಮಾಣದ  ಚಿತ್ರ ಇದಾಗಿದ್ದು ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಕೋವಿಡ್ ಸಂಬಂಧಿತ ವಿಚಾರ ಹಾಗೂ ವ್ಯಾಕ್ಸಿನೇಷನ್‌ಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿರುವ ಚಲನಚಿತ್ರ ನಿರ್ದೇಶಕ, ಏಕಕಾಲದಲ್ಲಿ ಹೊಸ ಕಥಾಹಂದರವನ್ನು ಬರೆಯುವ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಮತ್ತು ವಿವಿಧ ಯೋಜನೆಗಳಿಗಾಗಿ ಬೇರೆ ಬೇರೆ ನಿರ್ದೇಶಕರೊಡನೆ ಚರ್ಚಿಸುತ್ತಿದ್ದಾರೆ. ಹೊಸ ತಂಡದೊಂದಿಗೆ ಒಡನಾಟದಲ್ಲಿರುವ ರಮೇಶ್ ಅದೊಂದು ಥ್ರಿಲ್ಲರ್ ಕಥಾನಕವಾಗಿರಲಿದೆ ಎಂದರು.. "ನಿರ್ಮಾಪಕ ಮುಂಬೈ ಮೂಲದವರಾಗಿದ್ದು ತಂಡವು ಒಂದು ಆಸಕ್ತಿದಾಯಕ ವಿಷಯದೊಂದಿಗೆ ನನ್ನನ್ನು ಸಂಪರ್ಕಿಸಿತ್ತು. ಅವರು ನನಗೆ ಕಥೆಯನ್ನು ಕಳುಹಿಸಿದ್ದಾರೆ, ಅದು ತುಂಬಾ ಆಧುನಿಕ ಮತ್ತು ಚೇತೋಹಾರಿಯಾಗಿದೆ.. ಇದು ಮತ್ತೊಂದು ಥ್ರಿಲ್ಲರ್, ಮತ್ತು ಶಿವಾಜಿ ಸುರತ್ಕಲ್ ನಂತೆಯೇ ಇದು ಮುಂದುವರಿಯಬಹುದು ಇದೀಗ, ತಂಡವು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಬಹುದಾದ ಬೌಂಡ್ ಸ್ಕ್ರಿಪ್ಟ್, ಪೋಸ್ಟ್‌ನೊಂದಿಗೆ ತಯಾರಾಗುತ್ತಿದೆ "ಎಂದು ಅವರು ವಿವರಿಸಿದರು.

ದೂರದರ್ಶನ ನಿರೂಪಕರೂ ಆಗಿರುವ ಅವರು ಕಿರುತೆರೆಯಲ್ಲಿ "ಸುಂದರಿ" ಎಂಬ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚಿನ ಪ್ರವೃತ್ತಿಗಳೊಂದಿಗೆ ತನ್ನನ್ನು ತಾನು ಬದಲಿಸಿಕೊಳ್ಳುತ್ತಿರುವ ಚಲನಚಿತ್ರ ನಟ, ಡಿಜಿಟಲ್ ಜಗತ್ತಿಗೆ ಕಾಲಿಡಲು ತಯಾರಾಗಿದ್ದಾರೆ. "ನಾನು ಕನ್ನಡ ಪ್ರೇಕ್ಷಕರಿಗಾಗಿ ವೆಬ್ ಸಿರೀಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದು ಸ್ಥಳೀಯ ಇತಿಹಾಸದ ಬಗ್ಗೆ ಸಾಕಷ್ಟು ಉಲ್ಲೇಖಗಳನ್ನು ಹೊಂದಿದೆ, ಮತ್ತು ಇಡೀ ಸಂಚಿಕೆಯನ್ನು ಕರ್ನಾಟಕದಲ್ಲಿ ಚಿತ್ರೀಕರಿಸಲಾಗುವುದು. ನನ್ನ ಬಳಿ ಟೇಬಲ್ ವರ್ಕ್ ಸಿದ್ಧವಾಗಿದೆ, ಮತ್ತು ಅದನ್ನು ಪೂರ್ಣ ಪ್ರಮಾಣದಲ್ಲಿ ತರಲು ಕಾಯುತ್ತಿದ್ದೇನೆ. ಇದೊಂದು ಕನ್ನಡ ಒಟಿಟಿ ವೇದಿಕೆ, " ಅವರು ಹೇಳುತ್ತಾರೆ.

"ಪ್ರಸ್ತುತ, ಡಿಜಿಟಲ್ ಜಗತ್ತಿನಲ್ಲಿ ವಿಷಯಗಳ ಶೋಧನೆ ನಡೆದಿದೆ. ನಾವು ವಿವಿಧ ರೀತಿಯ ವಿಷಯವನ್ನು ಮತ್ತು ವಿಭಿನ್ನ ಮಾಧ್ಯಮಗಳನ್ನು ನೋಡುತ್ತೇವೆ. ನಾನು ಅರ್ಥಮಾಡಿಕೊಂಡಂತೆ, ಭಾಷೆಯ ಹೊರತಾಗಿಯೂ ಕಥೆ ಹೇಳಲು ಸಾಧ್ಯ ಆದರಷ್ಟೇ ಅದು ಯಶಸ್ವಿಯಾಗಲಿದೆ. ಇದು ಪ್ರೇಕ್ಷಕರ ನಡುವೆ ಕ್ಲಿಕ್ ಆಗಬೇಕಿದೆ." ಚಲನಚಿತ್ರಗಳು, ಧಾರಾವಾಹಿಗಳು ಮತ್ತು ವೆಬ್‌ ಸೀರೀಸ್ ಗಳಿಗೆ ಪ್ರೇಕ್ಷಕರಿದ್ದಾರೆ ಎಂದು ರಮೇಶ್ ಗಮನಸೆಳೆದಿದ್ದಾರೆ. ಅಂತೆಯೇ, ಕಥೆಗಳನ್ನು ಬರೆಯುವ ಹಾಗೂ ಆಯಾ ಮಾಧ್ಯಮದ ವಿಧಾನವೇ ಪರಸ್ಪರ ಭಿನ್ನವಾಗಿದೆ. ನನ್ನ ಅವಲೋಕನದಲ್ಲಿ, ವೆಬ್‌ ಸೀರೀಸ್ ಗಳನ್ನು ನೋಡುವ ವೀಕ್ಷಕರು ಚುರುಕಾಗಿದ್ದಾರೆ ಮತ್ತು ಅದು ವಿಭಿನ್ನ ರೀತಿಯ ವಿಷಯವನ್ನು ಬಯಸುತ್ತದೆ ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT