ಗಾಯಕ ಜಿ ಆನಂದ್ 
ಸಿನಿಮಾ ಸುದ್ದಿ

ಕೋವಿಡ್ 19: ಖ್ಯಾತ ಗಾಯಕ ಜಿ. ಆನಂದ್ ಸಾವು

ಇತ್ತೀಚಿಗೆ ಕೊರೋನಾಗೆ ಚಿತ್ರ ಜಗತ್ತಿನ ಹಲವು ಗಣ್ಯರು ಬಲಿಯಾಗಿದ್ದಾರೆ. ಇದೀಗ ದಕ್ಷಿಣದ ಚಿತ್ರರಂಗ ಮತ್ತೋರ್ವ ಹಿರಿಯ ಗಾಯಕ ಜಿ ಆನಂದ್ ಮೃತಪಟ್ಟಿದ್ದಾರೆ.

ಹೈದರಾಬಾದ್:  ಇತ್ತೀಚಿಗೆ ಕೊರೋನಾಗೆ ಚಿತ್ರ ಜಗತ್ತಿನ ಹಲವು ಗಣ್ಯರು ಬಲಿಯಾಗಿದ್ದಾರೆ. ಇದೀಗ ದಕ್ಷಿಣದ ಚಿತ್ರರಂಗ ಮತ್ತೋರ್ವ ಹಿರಿಯ ಗಾಯಕ ಜಿ ಆನಂದ್ ಮೃತಪಟ್ಟಿದ್ದಾರೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ 67 ವರ್ಷದ ತೆಲುಗಿನ ಖ್ಯಾತ ಗಾಯಕ ಆನಂದ್ ಅವರ ಆಕ್ಸಿಜನ್ ಪ್ರಮಾಣ 55ಕ್ಕೆ ಇಳಿಕೆಯಾಗಿತ್ತು. ಆಕ್ಸಿಜನ್ ಮತ್ತು ವೆಂಟಿಲೇಟರ್ ಗಾಗಿ ಪರದಾಡಿದ್ದರಾದರೂ ಸಿಗದ ಕಾರಣ ಆಂಧ್ರಪ್ರದೇಶದ ತಿರುಮಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಆಕ್ಸಿಜನ್ ಹಾಗೂ ವೆಂಟಿಲೇಟರ್ ಗಾಗಿ ಅವರ ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಆರ್.ಆರ್.ಆರ್. ಸಿನಿಮಾ ನಿರ್ಮಾಪಕ ಹಾಗೂ  ಮೈತ್ರಿ ಮೂವೀಸ್ ಗೆ ಮನವಿ ಮಾಡಿಕೊಂಡಿದ್ದರು. ವೆಂಟಿಲೇಟರ್ ಸಿಗುವಷ್ಟರಲ್ಲೇ ಆನಂದ್ ಕೊನೆಯುಸಿರೆಳೆದಿದ್ದಾರೆ.

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯವರಾಗಿದ್ದ ಆನಂದ್ 1976 ರಲ್ಲಿ ಅಮೇರಿಕಾ ಅಮ್ಮಾಯಿ ಚಲನಚಿತ್ರದೊಂದಿಗೆ ಗಾಯನ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು, ಚಿತ್ರದಲ್ಲಿ, ಅವರು "ಓಕಾ ವೇನು ವಿನಿಪಿಂಚೆನು" ಎಂಬ ಹಿಟ್ ಹಾಡಿಗೆ ಧ್ವನಿ ನೀಡಿದರು.

"ವಿಠಲ ವಿಠಲ ಪಾಂಡುರಂಗ ವಿಠಲ", "ದಿಕುಲು ಚುಡಾಕು ರಾಮಯ್ಯ" ಸೇರಿದಂತೆ ನೂರಾರು ಹಿಟ್ ಹಾಡುಗಳು ಇವರ ಹಿನ್ನೆಲೆ ಗಾಯನದಲ್ಲಿ ಮೂಡಿಬಂದಿತ್ತು.

ಜಿ ಆನಂದ್ ಸ್ವರ ಮಾಧುರಿ ಎಂಬ ಸಂಗೀತ ತಂಡವನ್ನು ಸ್ಥಾಪಿಸಿದರು, ಇದು ವಿಶ್ವದಾದ್ಯಂತ ಪ್ರದರ್ಶನ ನೀಡಿದೆ.

ಆನಂದ್ ನಿಧನಕ್ಕೆ ತೆಲುಗು ಸೂರಪ್ ಸ್ಟಾರ್ ಚಿರಂಜೀವಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊಪ್ಪಳ: ಇಸ್ರೇಲಿ ಮಹಿಳೆ ಅತ್ಯಾಚಾರ, ವಿದೇಶಿಗನ ಕೊಲೆ ಪ್ರಕರಣ; 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ, 9 ತಿಂಗಳಲ್ಲೇ ಐತಿಹಾಸಿಕ ತೀರ್ಪು!

ಹಂಪಿ ಉತ್ಸವ: ನಟಿ ರಚಿತಾ ರಾಮ್ ಕಾರು ಚಾಲಕನಿಂದ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ?

ನಟಿ ತ್ರಿಶಾ ವಾರ್ನಿಂಗ್ ಬಳಿಕ ವಿಷಾದ ವ್ಯಕ್ತಪಡಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ

ದ. ಕನ್ನಡದಲ್ಲಿ ಕೋಮುವಾದದ ಕಾರಣ ಹೂಡಿಕೆಗೆ ಅಡ್ಡಿ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ದಿನೇಶ್ ಗುಂಡೂರಾವ್ ಸಮರ್ಥನೆ

ರಾಜಸ್ಥಾನ: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಏಳು ಮಂದಿ ಸಜೀವ ದಹನ

SCROLL FOR NEXT