ನಿಶ್ವಿಕಾ ನಾಯ್ಡು 
ಸಿನಿಮಾ ಸುದ್ದಿ

ಮೊದಲ ಬಾರಿಗೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು ನಿಜಕ್ಕೂ ವಿಶೇಷ ಅನುಭವ: ನಿಶ್ವಿಕಾ ನಾಯ್ಡು

ಜಡೇಶಾ ಕೆ ಹಂಪಿ ನಿರ್ದೇಶನದ ಕ್ರೀಡಾ ಪ್ರಧಾನ ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದು ನಟ ಶರಣ್ ಗೆ ಜೋಡಿಯಾಗಲಿದ್ದಾರೆ.

ಜಡೇಶಾ ಕೆ ಹಂಪಿ ನಿರ್ದೇಶನದ ಕ್ರೀಡಾ ಪ್ರಧಾನ ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದು ನಟ ಶರಣ್ ಗೆ ಜೋಡಿಯಾಗಲಿದ್ದಾರೆ. 

ನಿಶ್ವಿಕಾ ನಾಯ್ಡು ಹುಟ್ಟುಹಬ್ಬದ ದಿನವೇ ಗುರು ಶಿಷ್ಯರು ಚಿತ್ರದಲ್ಲಿನ ನಟಿಯ ಪಾತ್ರದ ಕುರಿತಂತೆ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಿಶ್ವಿಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುವುದು ವಿಶೇಷ. ಇದು ನಮ್ಮ ದಿನನಿತ್ಯದ ಜೀವನಕ್ಕಿಂತ ಭಿನ್ನವಾಗಿದೆ. ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದ, ಹಳ್ಳಿಗಳೊಂದಿಗೆ ನನ್ನ ಸಂಪರ್ಕ ಸೀಮಿತವಾಗಿತ್ತು. ಹಾಗಾಗಿ ಈ ಚಿತ್ರವು ಗ್ರಾಮೀಣ ಜೀವನವನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದೆ. ನಾನು ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದು ನಾನು ಅದನ್ನು ಆನಂದಿಸಿದೆ ಎಂದು ನಿಶ್ವಿಕಾ ಹೇಳಿದರು. 

ಅರ್ಧ ಸೀರೆ ಹುಟ್ಟು ಹಸುಗಳು ಮತ್ತು ಮೇಕೆಗಳಿಗೆ ಆಹಾರ ನೀಡುವುದು. ಹಾಲು ಕರೆಯುವುದು ಎಲ್ಲಾ ರೀತಿಯ ಸಣ್ಣ ಸಣ್ಣ ಅನುಭವಗಳನ್ನು ಆನಂದಿಸಿದ್ದೇನೆ. ಜಂಟಲ್ಮನ್ ಮತ್ತು ರಾಮಾರ್ಜುನರಂತಹ ಚಿತ್ರಗಳ ನಟಿಗೆ ಗುರು ಶಿಷ್ಯರು ಚಿತ್ರದಲ್ಲಿನ ಪಾತ್ರಕ್ಕೆ ಕಾಯುತ್ತಿದ್ದೆ ಎಂದು ಹೇಳುತ್ತಾರೆ. ವಾಸ್ತವವಾಗಿ ಇದು ಅವರ ತಾಯಿಯ ಆಶಯವೂ ಆಗಿತ್ತು. ನಾನು ಈ ಹಿಂದೆ ನಿರ್ವಹಿಸಿದ ಪಾತ್ರಗಳು ತುಂಬಾ ಸರಳವಾಗಿತ್ತು. ನಾನು ಮೊದಲ ಬಾರಿಗೆ ದಪ್ಪ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರದ ಹೆಸರು ಸುಜಾತಾ ಎಂದು ಹೇಳಿದರು. 

ಶರಣ್ ಪ್ರೊಡಕ್ಷನ್ ಹೌಸ್, ಲಡ್ಡು ಸಿನೆಮಾಸ್ ಗುರು ಶಿಷ್ಯರು ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರದ ಸೃಜನಶೀಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ತರುಣ್ ಕಿಶೋರ್ ಸುಧೀರ್ ಸಹ-ನಿರ್ಮಾಪಕರಾಗಿದ್ದಾರೆ. ಗುರು ಶಿಷ್ಯರು ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಮತ್ತು ಸುಧಾಕರ್ ಶೆಟ್ಟಿ ಛಾಯಾಗ್ರಹಣವಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT