ನಿಶ್ವಿಕಾ ನಾಯ್ಡು 
ಸಿನಿಮಾ ಸುದ್ದಿ

ಮೊದಲ ಬಾರಿಗೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು ನಿಜಕ್ಕೂ ವಿಶೇಷ ಅನುಭವ: ನಿಶ್ವಿಕಾ ನಾಯ್ಡು

ಜಡೇಶಾ ಕೆ ಹಂಪಿ ನಿರ್ದೇಶನದ ಕ್ರೀಡಾ ಪ್ರಧಾನ ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದು ನಟ ಶರಣ್ ಗೆ ಜೋಡಿಯಾಗಲಿದ್ದಾರೆ.

ಜಡೇಶಾ ಕೆ ಹಂಪಿ ನಿರ್ದೇಶನದ ಕ್ರೀಡಾ ಪ್ರಧಾನ ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದು ನಟ ಶರಣ್ ಗೆ ಜೋಡಿಯಾಗಲಿದ್ದಾರೆ. 

ನಿಶ್ವಿಕಾ ನಾಯ್ಡು ಹುಟ್ಟುಹಬ್ಬದ ದಿನವೇ ಗುರು ಶಿಷ್ಯರು ಚಿತ್ರದಲ್ಲಿನ ನಟಿಯ ಪಾತ್ರದ ಕುರಿತಂತೆ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಿಶ್ವಿಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುವುದು ವಿಶೇಷ. ಇದು ನಮ್ಮ ದಿನನಿತ್ಯದ ಜೀವನಕ್ಕಿಂತ ಭಿನ್ನವಾಗಿದೆ. ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದ, ಹಳ್ಳಿಗಳೊಂದಿಗೆ ನನ್ನ ಸಂಪರ್ಕ ಸೀಮಿತವಾಗಿತ್ತು. ಹಾಗಾಗಿ ಈ ಚಿತ್ರವು ಗ್ರಾಮೀಣ ಜೀವನವನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದೆ. ನಾನು ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದು ನಾನು ಅದನ್ನು ಆನಂದಿಸಿದೆ ಎಂದು ನಿಶ್ವಿಕಾ ಹೇಳಿದರು. 

ಅರ್ಧ ಸೀರೆ ಹುಟ್ಟು ಹಸುಗಳು ಮತ್ತು ಮೇಕೆಗಳಿಗೆ ಆಹಾರ ನೀಡುವುದು. ಹಾಲು ಕರೆಯುವುದು ಎಲ್ಲಾ ರೀತಿಯ ಸಣ್ಣ ಸಣ್ಣ ಅನುಭವಗಳನ್ನು ಆನಂದಿಸಿದ್ದೇನೆ. ಜಂಟಲ್ಮನ್ ಮತ್ತು ರಾಮಾರ್ಜುನರಂತಹ ಚಿತ್ರಗಳ ನಟಿಗೆ ಗುರು ಶಿಷ್ಯರು ಚಿತ್ರದಲ್ಲಿನ ಪಾತ್ರಕ್ಕೆ ಕಾಯುತ್ತಿದ್ದೆ ಎಂದು ಹೇಳುತ್ತಾರೆ. ವಾಸ್ತವವಾಗಿ ಇದು ಅವರ ತಾಯಿಯ ಆಶಯವೂ ಆಗಿತ್ತು. ನಾನು ಈ ಹಿಂದೆ ನಿರ್ವಹಿಸಿದ ಪಾತ್ರಗಳು ತುಂಬಾ ಸರಳವಾಗಿತ್ತು. ನಾನು ಮೊದಲ ಬಾರಿಗೆ ದಪ್ಪ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರದ ಹೆಸರು ಸುಜಾತಾ ಎಂದು ಹೇಳಿದರು. 

ಶರಣ್ ಪ್ರೊಡಕ್ಷನ್ ಹೌಸ್, ಲಡ್ಡು ಸಿನೆಮಾಸ್ ಗುರು ಶಿಷ್ಯರು ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರದ ಸೃಜನಶೀಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ತರುಣ್ ಕಿಶೋರ್ ಸುಧೀರ್ ಸಹ-ನಿರ್ಮಾಪಕರಾಗಿದ್ದಾರೆ. ಗುರು ಶಿಷ್ಯರು ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಮತ್ತು ಸುಧಾಕರ್ ಶೆಟ್ಟಿ ಛಾಯಾಗ್ರಹಣವಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

ನಾವು ಬಿಟ್ಟರು ಧರ್ಮ, ಜಾತಿ ನಮ್ಮನ್ನು ಬಿಡುವುದಿಲ್ಲ: ಒಕ್ಕಲಿಗನಾಗಿ ಹುಟ್ಟಿದ್ದೇನೆ; ಅಶೋಕಣ್ಣನಿಗೆ ಬ್ಯಾಡ್ಜ್ ಕಳಿಸುತ್ತೇನೆ ಹಾಕಿಕೊಳ್ಳಲಿ; DKS

ಅಮೆರಿಕ ಶಕ್ತಿ ಕೇಂದ್ರ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ

SCROLL FOR NEXT