ತಮಿಳು ಚಿತ್ರ ಸಾಹಿತಿ ಪಿರೈಸೂದನ್ 
ಸಿನಿಮಾ ಸುದ್ದಿ

ತಮಿಳಿನ ಜನಪ್ರಿಯ ಚಿತ್ರ ಸಾಹಿತಿ ಪಿರೈಸೂದನ್ ನಿಧನ

ತಮಿಳಿನ ಜನಪ್ರಿಯ ಚಿತ್ರ ಸಾಹಿತಿ ಪಿರೈಸೂದನ್ ಶುಕ್ರವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

ಚೆನ್ನೈ: ತಮಿಳಿನ ಜನಪ್ರಿಯ ಚಲನಚಿತ್ರ ಸಾಹಿತಿ ಪಿರೈಸೂದನ್ ಶುಕ್ರವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

ತಿರುವನೂರು ಜಿಲ್ಲೆಯ ನನ್ನಿಲಂನಲ್ಲಿ ಫೆಬ್ರವರಿ 6, 1956ರಲ್ಲಿ ಜನಿಸಿದ್ದ  ಪಿರೈಸೂದನ್, 1984 ರಲ್ಲಿ ಬಿಡುಗಡೆಯಾದ ಸಿರೈ ಚಲನಚಿತ್ರಕ್ಕಾಗಿ ದಿವಂಗತ ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್ ಸಂಗೀತ ನೀಡಿರುವ ರಸತಿ ರೋಸಪೂ ಹಾಡನ್ನು ಬರೆಯುವ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ರಜನಿಕಾಂತ್ ಗಾಗಿ ಅಭಿನಯದ ರಾಜಾದಿ ರಾಜಾದ ಮೀನಮ್ಮ ಮೀನಮ್ಮ ಸೇರಿದಂತೆ ಹಲವಾರು ಹಿಟ್ ಹಾಡುಗಳನ್ನು ಪಿರೈಸೂದನ್ ಬರೆದಿದ್ದಾರೆ. ಸುಮಾರು 400 ಚಿತ್ರಗಳಿಗಾಗಿ ಸುಮಾರು 1,400 ಹಾಡುಗಳಲ್ಲದೇ, ಸುಮಾರು 5000 ಭಕ್ತಿಗೀತೆಗಳನ್ನು ಬರೆದಿದ್ದಾರೆ. ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಂಚ ಆರೋಪ: ಶಾಲಿನಿ ರಜನೀಶ್​​ ಕ್ಷಮೆ ಕೇಳಿದ ಸ್ನೇಹಮಯಿ; ವಿಚಾರಣೆ ಬಳಿಕ ಉಲ್ಟಾ ಹೊಡೆದ ಸಾಮಾಜಿಕ ಕಾರ್ಯಕರ್ತ!

ಲೈಂಗಿಕ ದೌರ್ಜನ್ಯ ಕೇಸ್: ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ FIR ದಾಖಲಿಸಲು Pocso ಕೋರ್ಟ್ ಮಹತ್ವದ ಆದೇಶ

ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್: ಮಂಗಳೂರಿಗರಿಗೆ ನಿರಾಸೆ! ಯಾಕೆ ಗೊತ್ತಾ?

ಕಮಲಾಕರ ಭಟ್​​ಗೆ ಮತ್ತೊಂದು ಶಾಕ್; ಜ್ಯೋತಿಷಿ ವಿರುದ್ಧ ಪೋಕ್ಸೋ ಕೇಸ್ ದಾಖಲು!

ತಮಿಳುನಾಡು ಚುನಾವಣೆ: DMKಯಿಂದ ಟಿ.ಆರ್. ಬಾಲು ನೇತೃತ್ವದಲ್ಲಿ ಸೀಟು ಹಂಚಿಕೆ ಸಮಿತಿ ರಚನೆ

SCROLL FOR NEXT