ಸಿನಿಮಾ ಸುದ್ದಿ

ತಮಿಳಿನ ಜನಪ್ರಿಯ ಚಿತ್ರ ಸಾಹಿತಿ ಪಿರೈಸೂದನ್ ನಿಧನ

Nagaraja AB

ಚೆನ್ನೈ: ತಮಿಳಿನ ಜನಪ್ರಿಯ ಚಲನಚಿತ್ರ ಸಾಹಿತಿ ಪಿರೈಸೂದನ್ ಶುಕ್ರವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

ತಿರುವನೂರು ಜಿಲ್ಲೆಯ ನನ್ನಿಲಂನಲ್ಲಿ ಫೆಬ್ರವರಿ 6, 1956ರಲ್ಲಿ ಜನಿಸಿದ್ದ  ಪಿರೈಸೂದನ್, 1984 ರಲ್ಲಿ ಬಿಡುಗಡೆಯಾದ ಸಿರೈ ಚಲನಚಿತ್ರಕ್ಕಾಗಿ ದಿವಂಗತ ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್ ಸಂಗೀತ ನೀಡಿರುವ ರಸತಿ ರೋಸಪೂ ಹಾಡನ್ನು ಬರೆಯುವ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ರಜನಿಕಾಂತ್ ಗಾಗಿ ಅಭಿನಯದ ರಾಜಾದಿ ರಾಜಾದ ಮೀನಮ್ಮ ಮೀನಮ್ಮ ಸೇರಿದಂತೆ ಹಲವಾರು ಹಿಟ್ ಹಾಡುಗಳನ್ನು ಪಿರೈಸೂದನ್ ಬರೆದಿದ್ದಾರೆ. ಸುಮಾರು 400 ಚಿತ್ರಗಳಿಗಾಗಿ ಸುಮಾರು 1,400 ಹಾಡುಗಳಲ್ಲದೇ, ಸುಮಾರು 5000 ಭಕ್ತಿಗೀತೆಗಳನ್ನು ಬರೆದಿದ್ದಾರೆ. ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

SCROLL FOR NEXT