ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

‘ಸಖತ್’ಗೆ ಧ್ರುವ-ಪ್ರೇಮ್ ಸಾಥ್:  ಅ. 31ರಂದು ಟೈಟಲ್ ಟ್ರ್ಯಾಂಕ್ ಲಾಂಚ್

ಸ್ಯಾಂಡಲ್ ವುಡ್ ಅಂಗಳದಲ್ಲೀಗ ಸಖತ್ ಸೌಂಡ್ ಮಾಡ್ತಿರೋದು ಸಖತ್ ಸಿನಿಮಾದ ಟೀಸರ್ ಝಲಕ್.. ಸಿಂಪಲ್ ಸುನಿ..ಗೋಲ್ಟನ್ ಸ್ಟಾರ್ ಗಣಿಯ ಜುಗಲ್ ಬಂಧಿಯ ಸಖತ್ ಟೀಸರ್...

ಬೆಂಗಳೂರು: ಸ್ಯಾಂಡಲ್ ವುಡ್ ಅಂಗಳದಲ್ಲೀಗ ಸಖತ್ ಸೌಂಡ್ ಮಾಡ್ತಿರೋದು ಸಖತ್ ಸಿನಿಮಾದ ಟೀಸರ್ ಝಲಕ್.. ಸಿಂಪಲ್ ಸುನಿ..ಗೋಲ್ಟನ್ ಸ್ಟಾರ್ ಗಣಿಯ ಜುಗಲ್ ಬಂಧಿಯ ಸಖತ್ ಟೀಸರ್ ಈ ವರ್ಷದ ಬೆಸ್ಟ್ ಎಂಟರ್ ಟ್ರೈನರ್ ಟೀಸರ್ ಅನ್ನೋ ಬ್ರ್ಯಾಂಡ್ ತನ್ನದಾಗಿಸಿಕೊಂಡಿದೆ. 

ಸಿಂಪಲ್ ಸುನಿ ಡೈರೆಕ್ಷನ್.. ಡೈಲಾಗ್ಸ್ ಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಮಳೆ ಹುಡ್ಗನ ಆಕ್ಟಿಂಗ್ ಗೆ ಹುಬ್ಬೇರಿಸಿದ್ದಾನೆ. ಟೀಸರ್ ಝಲಕ್ ಹೀಗಿರುವಾಗ ಸಾಂಗ್ ಹೇಗಿರುತ್ತೋ.. ಅದ್ರಲ್ಲೂ ಟೈಟಲ್ ಟ್ರ್ಯಾಂಕ್ ಹೇಗೆ ಮೂಡಿ ಬರುತ್ತೋ? ಅನ್ನೋ ಕುತೂಹಲಕ್ಕೆ ಇದೇ ತಿಂಗಳ 31ರಂದು ಫುಲ್ ಸ್ಟಾಪ್ ಬೀಳಲಿದೆ. 

ಹೌದು..ಸಖತ್ ಟೀಸರ್ ಸಖತಾಗಿಯೇ ಸೌಂಡ್ ಮಾಡ್ತಿರುವ ಬೆನ್ನಲ್ಲೇ ಸಖತ್ ಬಳಗ ಸಖತ್ ಆಗಿರೋ ಐಡಿಯಾವೊಂದನ್ನು ಮಾಡಿದೆ. ಇದೇ ತಿಂಗಳ 31ರಂದು ಟೈಟಲ್ ಟ್ರ್ಯಾಂಕ್ ಬಿಡುಗಡೆ ಮಾಡಲು ಸಕಲ ರೀತಿಯಿಂದಲೂ ಸನ್ನದ್ಧವಾಗಿದೆ. ಈ ಟೈಟಲ್ ಟ್ರ್ಯಾಂಕ್ ನ್ನು ರಿಲೀಸ್ ಮಾಡ್ತಿರೋದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಶೋ ಮ್ಯಾನ್ ಪ್ರೇಮ್..  ಸಖತ್ ಸಿನಿಮಾಗೆ ಪ್ರೇಮ್ ಹಾಗೂ ಧ್ರುವ ಸಾಥ್ ನೀಡಲಿದ್ದಾರೆ.

ಇದೇ 31ರಂದು ಅಭಿಮಾನಿಗಳ ಮಧ್ಯೆ ಥಿಯೇಟರ್ ಅಂಗಳದಲ್ಲಿ ಸಖತ್ ಸಿನಿಮಾದ ಸೆಕೆಂಡ್ ಸಾಂಗ್ ರಿಲೀಸ್ ಆಗಲಿದೆ. ಕೆವಿಎನ್ ಪ್ರೊಡಕ್ಷನ್ ನಡಿ ತಯಾರಾಗಿರುವ ಸಖತ್ ಸಿನಿಮಾದ ಟೈಟಲ್ ಟ್ರ್ಯಾಂಕ್ ನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ನಿರ್ಮಾಪಕ ಸುಪ್ರಿತ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಅಮೃತ ಹಸ್ತದಿಂದ ಸಖತ್ ಸಿನಿಮಾದ ಟೈಟಲ್ ಟ್ರ್ಯಾಂಕ್ ಅನಾವರಣವಾಗಲಿದೆ.  

ಸಖತ್ ಸಿನಿಮಾದ ಟೀಸರ್ ಜೊತೆಗೆ ಪ್ರೇಮಕ್ಕೆ ಕಣ್ಣಿಲ್ಲ ಹಾಡಿಗೆ ಪ್ರೇಕ್ಷಕರು ತಲೆದೂಗಿದ್ದು, ಇದೀಗ ಟೈಟಲ್ ಟ್ರ್ಯಾಂಕ್ ನ್ನು ಬಿಗಿದಪ್ಪಿಕೊಳ್ಳಲು ರೆಡಿಯಾಗ್ತಿದ್ದಾರೆ. ಗೋಲ್ಟನ್ ಸ್ಟಾರ್ ಗಣೇಶ್ ಕಾಮಿಡಿ ಹೂರಣವನ್ನು ಸವಿಯೋದಕ್ಕೆ ಸಜ್ಜಾಗ್ತಿದ್ದಾರೆ. ಗಣಿ ಜೊತೆಯಾಗಿ ನಿಶ್ವಿಕಾ-ಸುರಭಿಯ ಗ್ಲಾಮರ್ ರಂಗು..ಜೂಡಾ ಸ್ಯಾಂಡಿ ಮ್ಯೂಸಿಕ್ ಗುಂಗು ಸಖತ್ ಸಿನಿಮಾದಲ್ಲಿರಲಿದೆ. ಕಾಮಿಡಿ-ಕ್ರೈಮ್ ಥಿಲ್ಲರ್ ಕಥಾಹಂದರ ಹೊಂದಿರುವ ಸಖತ್ ಸಿನಿಮಾ ಬರುವ ನವೆಂಬರ್ 12ಕ್ಕೆ ಅದ್ಧೂರಿಯಾಗಿ ಬೆಳ್ಳಿಪರದೆಯಲ್ಲಿ ಬೆಳಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT