ಸಿನಿಮಾ ಸುದ್ದಿ

ದರ್ಶನ್ ಹೊಸ ಚಿತ್ರದ ಹೆಸರು 'ಕ್ರಾಂತಿ': ಪ್ಯಾನ್ ಇಂಡಿಯಾ ಸಿನಿಮಾಗೆ ಹರಿಕೃಷ್ಣ ನಿರ್ದೇಶನ

Nagaraja AB

ಬೆಂಗಳೂರು: ಗಣೇಶ ಚತುರ್ಥಿ ದಿನವಾದ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರದ ಹೆಸರು ಘೋಷಣೆಯಾಗಿದೆ.  ಈ ಚಿತ್ರಕ್ಕೆ ಕ್ರಾಂತಿ ಎಂದು ಹೆಸರು ಇಡಲಾಗಿದೆ. ಇದು ಅವರ 55ನೇ ಸಿನಿಮಾವಾಗಿದ್ದು, ವಿ. ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. 

ಯಜಮಾನ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶೈಲಜಾ ನಾಗ್ ಮತ್ತು ಬಿ ಸುರೇಶ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.  ವಿ.ಹರಿಕೃಷ್ಣಗೆ ನಿರ್ದೇಶಕರಾಗಿ ಇದು ಎರಡನೇ ಸಿನಿಮಾ. ಸಂಗೀತ ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ. 

ಕನ್ನಡದಲ್ಲಿ ತಯಾರಾಗುವ ಈ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಐದೂ ಭಾಷೆಗಳಲ್ಲಿ ಸಿನಿಮಾದ ಹೆಸರುಳ್ಳ ಪೋಸ್ಟರ್‌ ಇಂದು ಬಿಡುಗಡೆಯಾಗಿದೆ.

ಫೋಸ್ಟರ್ ನಲ್ಲಿ ಆಂಗ್ರಿ ಲುಕ್ ನಲ್ಲಿ ದರ್ಶನ್ ಗಮನ ಸೆಳೆಯುತ್ತಿದ್ದರೆ, ಕಾರೊಂದು ವೇಗವಾಗಿ ಹೋಗುತ್ತಿರುವ ಚಿತ್ರವೂ ಇದೆ. ಅಲ್ಲದೇ, ವಿಮಾನ, ಹೆಲಿಕಾಪ್ಟರ್‌ಗಳ ಚಿತ್ರವೂ ಇದೆ. 

SCROLL FOR NEXT