ಸಿನಿಮಾ ಸುದ್ದಿ

ಮಾಯಾವಿಯ ರಹಸ್ಯ ಕೇಸಿನೊಂದಿಗೆ ಮತ್ತೆ ಬಂದ 'ಶಿವಾಜಿ ಸುರತ್ಕಲ್ 2'

Sumana Upadhyaya

ಬೆಂಗಳೂರು: ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ಗಿಂತ ಮೊದಲು ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ 'ಶಿವಾಜಿ ಸುರತ್ಕಲ್' ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಥ್ರಿಲ್ಲರ್ ಮಾದರಿಯ ಕಥೆಯ ನಿರೂಪಣೆ ಸೊಗಸಾಗಿತ್ತು.

ಜನರಿಂದ ಸಿಕ್ಕಿದ ಪ್ರೋತ್ಸಾಹಕ ಮಾತುಗಳಿಂದ ಅದರ ಮುಂದುವರಿದ ಭಾಗವನ್ನು ನಿರ್ಮಿಸುವುದಾಗಿ ಚಿತ್ರತಂಡ ಕಳೆದ ವರ್ಷ ಘೋಷಿಸಿಕೊಂಡಿತ್ತು. ಅದು ಇಂದು ನಿಜವಾಗಿದೆ. 

'ಶಿವಾಜಿ ಸುರತ್ಕಲ್‌' ಸಿನಿಮಾವನ್ನು ಆಕಾಶ್‌ ಶ್ರೀವತ್ಸ ನಿರ್ದೇಶನ ಮಾಡಿದ್ದರು. ಭಾಗ-2ನ್ನು ಕೂಡ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಮತ್ತು ಅನೂಪ್‌ ಅವರೇ ಈ ಸಿನಿಮಾಗೂ ಬಂಡವಾಳ ಹೂಡಲಿದ್ದಾರೆ.

ನಿನ್ನೆ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬ ಮತ್ತು ಗಣೇಶ ಹಬ್ಬದ ಪ್ರಯುಕ್ತ ಚಿತ್ರತಂಡ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಿದ್ದು ಸದ್ಯದಲ್ಲಿಯೇ ಶೂಟಿಂಗ್ ಕೂಡ ಆರಂಭವಾಗಲಿದೆಯಂತೆ. ಈ ಸಿನಿಮಾದಲ್ಲಿ ಕೇಸ್‌ ನಂ 101 ಎಂದು ಶುರುವಾಗುತ್ತದೆ. ಆದರೆ ಎರಡನೇ ಭಾಗದಲ್ಲಿಈ ಕಥೆ ಸೀಕ್ವೇಲ್‌ ಕೂಡ ಆಗಬಹುದು ಅಥವಾ ಪ್ರಿಕ್ವೆಲ್‌ ಕೂಡ ಆಗಬಹುದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಯೋಜಿಸಿರುವ ನಿರ್ದೇಶಕ ಆಕಾಶ್, ರಮೇಶ್ ಅರವಿಂದ್ ಈ ಚಿತ್ರದಲ್ಲಿ ಎರಡು ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮೊದಲ ಭಾಗಕ್ಕಿಂತ ಭಿನ್ನವಾಗಿ, ಸೀಕ್ವೆಲ್ ಶಿವಾಜಿಯನ್ನು ಕರ್ನಾಟಕದಾದ್ಯಂತ ಚಿತ್ರೀಕರಿಸಲಾಗುತ್ತದೆ. "ಭೌಗೋಳಿಕತೆಯಲ್ಲಿ ಸಾಕಷ್ಟು ಬದಲಾವಣೆಗಳಿರುತ್ತವೆ" ಎಂದು ಆಕಾಶ್ ಹೇಳುತ್ತಾರೆ, ಇದರ ಉತ್ತರಾರ್ಧದಲ್ಲಿ ಶಿವಾಜಿ ಸುರತ್ಕಲ್ ಅವರ ವೈಯಕ್ತಿಕ ಭಾಗವನ್ನು ಹೆಚ್ಚು ಅನ್ವೇಷಿಸುತ್ತಿದ್ದಾರೆ. "ನಾವು ಅವರ ಕುಟುಂಬದ ಹಿನ್ನೆಲೆಯ ಬಗ್ಗೆ ಸ್ವಲ್ಪ ಹೆಚ್ಚಿನ ಒಳನೋಟವನ್ನು ನೀಡುತ್ತೇವೆ. ಎನ್ನುತ್ತಾರೆ.

ರಮೇಶ್ ಅರವಿಂದ್, ರಾಧಿಕಾ ನಾರಾಯಣನ್, ರಘು ರಾಮನಕೊಪ್ಪ ಮತ್ತು ವಿದ್ಯಾ ಮೂರ್ತಿ ಅವರನ್ನು ಸೇರಿದಂತೆ ದೊಡ್ಡ ತಾರಾಗಣವಿದೆ. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಅವರ ಬ್ಯಾನರ್ ನಡಿ, ಅಂಜನಾದ್ರಿ ಸಿನಿ ಕಂಬೈನ್ಸ್ ನಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಎಂಜಿ ಅವರ ಛಾಯಾಗ್ರಹಣವಿದೆ.

SCROLL FOR NEXT