ರವಿಚಂದ್ರನ್ - ಬರ್ಖಾ ಸೇನ್‌ಗುಪ್ತಾ 
ಸಿನಿಮಾ ಸುದ್ದಿ

ಕ್ರೇಜಿಸ್ಟಾರ್ ರವಿಚಂದ್ರನ್‌ರ ಗೌರಿ ಸಿನಿಮಾದೊಂದಿಗೆ ಬರ್ಖಾ ಸೇನ್‌ಗುಪ್ತಾ ಕನ್ನಡಕ್ಕೆ ಪದಾರ್ಪಣೆ

ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯವಾಗಿರುವ ರೂಪದರ್ಶಿ-ನಟಿ ಬರ್ಖಾ ಸೇನ್‌ಗುಪ್ತಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಗೌರಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯವಾಗಿರುವ ರೂಪದರ್ಶಿ-ನಟಿ ಬರ್ಖಾ ಸೇನ್‌ಗುಪ್ತಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಗೌರಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಹಿಂದಿ ಚಲನಚಿತ್ರದಲ್ಲಿ (ರಾಜನೀತಿ) ತನ್ನ ಪಾತ್ರಕ್ಕೆ ಹೆಸರುವಾಸಿಯಾದ ಬೆಂಗಾಲಿ ನಟಿ, ದುಯಿ ಪೃಥಿಬಿ (2010) ನೊಂದಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪದಾರ್ಪಣೆ ಮಾಡಿದರು ಮತ್ತು ಇತ್ತೀಚಿನ ಮುಖ್ಬೀರ್- ದಿ ಸ್ಟೋರಿ ಆಫ್ ಎ ಸ್ಪೈ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅನೀಶ್ ಎಸ್ ಅವರ ಚೊಚ್ಚಲ ನಿರ್ದೇಶನದ ಗೌರಿ ಚಿತ್ರದಲ್ಲಿ ನಟಿಸಲಿದ್ದಾರೆ ಮತ್ತು  ನಾಯಕ ನಟ ರವಿಚಂದ್ರನ್ ಜೊತೆಗೆ ಜೋಡಿಯಾಗಲಿದ್ದಾರೆ.

ಎನ್.ಎಸ್. ರಾಜ್‌ಕುಮಾರ್ ನಿರ್ಮಾಣದ ಈ ಚಿತ್ರವು ಕ್ರೇಜಿ ಸ್ಟಾರ್ ಜೊತೆ ಅವರ ಮೂರನೇ ಸಿನಿಮಾವಾಗಿದೆ. ನಾಳೆ ನಡೆಯಲಿರುವ ಚಿತ್ರದ ಘೋಷಣೆಗೆ ಮುನ್ನವೇ ನಿರ್ಮಾಪಕರು ಮಹಿಳಾ ನಾಯಕಿಯನ್ನು ಖಚಿತಪಡಿಸಿದ್ದಾರೆ. ಡಿಸೆಂಬರ್ 20 ರಿಂದ ದಾಂಡೇಲಿಯಲ್ಲಿ ಚಿತ್ರೀಕರಣ ಶುರುವಾಗಲಿದೆ.

ಗೌರಿಯು ಫ್ಯಾಮಿಲಿ ಎಂಟರ್‌ಟೈನರ್ ಎಂದು ಬಿಂಬಿಸಲಾಗಿದೆ ಮತ್ತು ರವಿಚಂದ್ರನ್ ಅವರು ಹಿಂದೆಂದೂ ಕಂಡಿರದ ಪಾತ್ರವನ್ನು ನಿರ್ವಹಿಸಲಿದ್ದಾರೆ.

ನಿರ್ದೇಶಕ ಅನೀಶ್ ಸೇರಿದಂತೆ ತಾಂತ್ರಿಕ ಭಾಗದಲ್ಲಿ ಹೊಸ ಪ್ರತಿಭೆಗಳೇ ತುಂಬಿದ್ದಾರೆ. ಕಾರ್ತಿಕೇಯನ್ ಅವರ ಸಂಗೀತ ಮತ್ತು ಸತೀಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ರವಿಚಂದ್ರನ್ ನಟನೆಯ ರಿಷಿಕಾ ಶರ್ಮಾ ನಿರ್ದೇಶನದ ವಿಜಯಾನಂದ ಬಯೋಪಿಕ್ ಈ ವಾರ ಬಿಡುಗಡೆಯಾಗಲಿದೆ ಮತ್ತು ದರ್ಶನ್ ನಟನೆಯ ಕ್ರಾಂತಿ ಸಿನಿಮಾದಲ್ಲೂ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT