ವಿಂಡೋ ಸೀಟ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಅಚ್ಚರಿಯ ಅನುಭವ: ನಿರೂಪ್ ಭಂಡಾರಿ

ನನಗೆ ಇದೊಂದು ಪ್ಲೆಸೇಂಟ್ ಸರ್ಪ್ರೈಸ್, ಏಕೆಂದರೆ ನಾನು 'ನಿರ್ದೇಶನವು ಒಂದು ದೊಡ್ಡ ಹೆಜ್ಜೆ' ಎಂದು ಪರಿಗಣಿಸುತ್ತೇನೆ ಮತ್ತು ಆ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಧೈರ್ಯದ ಅಗತ್ಯವಿದೆ.

ನಿರೂಪ್ ಭಂಡಾರಿ ತಮ್ಮ ಮೊದಲ ಚಿತ್ರ ರಂಗಿತರಂಗದಿಂದಲೇ ಗಮನ ಸೆಳೆದಿದ್ದಾರೆ. ಇದುವರೆಗೂ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ನಿರೂಪ್ ಭಂಡಾರಿ ನಿಧಾನವಾಗಿ ಹೆಜ್ಜೆ ಇಡಲು ಬಯಸಿದ್ದಾರೆ.

ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಈ ವಾರ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 28 ರಂದು ವಿಕ್ರಾಂತ್ ರೋಣ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ವಿಂಡೋ ಸೀಟ್ ಬಿಡುಗಡೆಗೆ ಸಿದ್ಧವಾಗಿತ್ತು, ಆದರೆ ರಿಲೀಸ್ ಮಾಡಲು ಸರಿಯಾದ ಸಮಯಕ್ಕಾಗಿ ನಾವು ಕಾಯುತ್ತಿದ್ದೆವು. ಅಂತಿಮವಾಗಿ ಜುಲೈ 1 ರಂದು ಅದು ಬಿಡುಗಡೆಯಾಗುತ್ತಿರುವುದು ನನಗೆ ಖುಷಿಯಾಗಿದೆ" ಎಂದು ಯೋಜನೆಯು ಸಂತಸ ವ್ಯಕ್ತ ಪಡಿಸಿದ್ದಾರೆ.

ಶೀತಲ್ ಶೆಟ್ಟಿ ಆ್ಯಂಕರ್ ಎಂದು ನನಗೆ ತಿಳಿದಿತ್ತು, ಆದರೆ ಆಕೆಗೆ ನಿರ್ದೇಶನದ ಆಕಾಂಕ್ಷೆ ಇದೆ ಎಂದು ನನಗೆ ತಿಳಿದಿರಲಿಲ್ಲ. ಅವರು ನನ್ನನ್ನು ತನ್ನ ಸ್ನೇಹಿತನಿಗೆ ಶಿಫಾರಸು ಮಾಡುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿತ್ತು. ಅವರ ಕಛೇರಿಗೆ ಹೋದ ನಂತರವೇ ಆಕೆ ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿಯಿತು ಎಂದು ನಿರೂಪ್ ಹೇಳಿದ್ದಾರೆ.

ನನಗೆ ಇದೊಂದು ಪ್ಲೆಸೇಂಟ್ ಸರ್ಪ್ರೈಸ್, ಏಕೆಂದರೆ ನಾನು 'ನಿರ್ದೇಶನವು ಒಂದು ದೊಡ್ಡ ಹೆಜ್ಜೆ' ಎಂದು ಪರಿಗಣಿಸುತ್ತೇನೆ ಮತ್ತು ಆ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಧೈರ್ಯದ ಅಗತ್ಯವಿದೆ.

ಆಕೆ ಕಥೆಯನ್ನು ಹೇಳಿದಾಗ ನನಗೆ ಆತ್ಮವಿಶ್ವಾಸವಿತ್ತು ಮತ್ತು ಎಂದು ನಟ ಹೇಳುತ್ತಾರೆ. ನಿರೂಪ್ ನಟನಾಗಿರುವುದರ ಜೊತೆಗೆ ವಿಂಡೋ ಸೀಟ್‌ನ ಸ್ಕ್ರಿಪ್ಟಿಂಗ್‌ನಲ್ಲಿಯೂ ತೊಡಗಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ವಿಂಡೋ ಸೀಟ್‌ನೊಂದಿಗೆ, ಶೀತಲ್ ನನಗೆ ಅವರ ತಂಡವನ್ನು ಸೇರಲು ಮತ್ತು ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಒಂದು ತಂಡವಾಗಿ ಕಮರ್ಷಿಯಲ್ ಸಿನಿಮಾ ರೀತಿ ಕೆಲಸ ಮಾಡಿದ್ದೇವೆ, ವಿಂಡೋ ಸೀಟ್  ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟರಿ ಎಂದು ಬಿಂಬಿಸಲಾಗಿದ್ದರೂ, ಚಿತ್ರವು ಶಕ್ತಿಶಾಲಿ ಪ್ರೇಮಕಥೆಯಾಗಿದೆ ಎಂದು ನಿರೂಪ್ ಉಲ್ಲೇಖಿಸಿದ್ದಾರೆ.

ಮಹಿಳಾ ನಿರ್ದೇಶಕರು ಸಾಮಾನ್ಯವಾಗಿ 'ಹಗುರ' ವಿಷಯಗಳಿಗೆ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಅಭಿಪ್ರಾಯವೂ ಇದೆ. ನಾನು ನನ್ನ ವಿಷಯಗಳನ್ನು ನನ್ನ ತಂದೆ ಮತ್ತು ನನ್ನ ಸಹೋದರನೊಂದಿಗೆ ಚರ್ಚಿಸುತ್ತೇನೆ. ನನ್ನ ನಿರ್ಧಾರಗಳ ಬಗ್ಗೆ ಅವರಿಗೆ ವಿಶ್ವಾಸವಿದೆ.ನನಗೆ ಸಿನಿಮಾಗಳು ಗೊತ್ತು ಅಂತ ಅವರಿಗೆ ಗೊತ್ತು. ಆದರೆ ಅದೇ ಸಮಯದಲ್ಲಿ, ಅವರು ಯಾವುದೇ ಸಲಹೆಗಾಗಿ ನಾನು ಹೋಗಬಹುದಾದ ಇಬ್ಬರು ವ್ಯಕ್ತಿಗಳು ಎಂದು ನನಗೆ ತಿಳಿದಿದೆ. ನಾನು ಅವರ ಸಲಹೆಯನ್ನು ತೆಗೆದುಕೊಳ್ಳುತ್ತೇನೆ ಏಕೆಂದರೆ ಅವರು ನನ್ನ ಪ್ರಯಾಣದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಅದೇ ಸಮಯದಲ್ಲಿ ಅವರು ನನ್ನ ನಿರ್ಧಾರದಲ್ಲಿ ನಂಬಿಕೆ ಹೊಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT