ಪ್ರಜ್ವಲ್ ದೇವರಾಜ್ 
ಸಿನಿಮಾ ಸುದ್ದಿ

ಮಾಫಿಯಾದಲ್ಲಿ ಬ್ಯುಸಿಯಾಗಿರುವಾಗಲೇ ಮತ್ತೊಂದು ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಲೋಹಿತ್

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಲೋಹಿತ್ ಎಚ್ ಸದ್ಯ 'ಮಾಫಿಯಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಮಧ್ಯೆ, ಸೋಮವಾರ ಸ್ಕ್ರಿಪ್ಟ್ ಪೂಜೆಯೊಂದಿಗೆ ಪ್ರಾರಂಭವಾದ ಸಿನಿಮಾಗಾಗಿ ನಟ ಮತ್ತು ನಿರ್ದೇಶಕರ ಜೋಡಿ ಮತ್ತೊಮ್ಮೆ ಒಂದಾಗಲಿದೆ.

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಲೋಹಿತ್ ಎಚ್ ಸದ್ಯ 'ಮಾಫಿಯಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಮಧ್ಯೆ, ಸೋಮವಾರ ಸ್ಕ್ರಿಪ್ಟ್ ಪೂಜೆಯೊಂದಿಗೆ ಪ್ರಾರಂಭವಾದ ಸಿನಿಮಾಗಾಗಿ ನಟ ಮತ್ತು ನಿರ್ದೇಶಕರ ಜೋಡಿ ಮತ್ತೊಮ್ಮೆ ಒಂದಾಗಲಿದೆ.

ನಿರ್ದೇಶಕ ಲೋಹಿತ್ ಎಚ್

ಸಿನಿಮಾದ ಬಗ್ಗೆ ಸಿನಿಮಾ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿದ ಪ್ರಜ್ವಲ್, 'ಲೋಹಿತ್ ಎಚ್ ಅವರು ಬರೆದಿರುವ ಕಥೆಯು ಆಕ್ಷನ್ ಎಂಟರ್ಟೈನರ್ ಅಲ್ಲ. ಬದಲಿಗೆ ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಟೈಮ್ ಲೂಪ್ ಸುತ್ತ ಸುತ್ತುವ ಮೊದಲ ಚಿತ್ರ ಇದಾಗಿದೆ. ಮಾಫಿಯಾ ಸಿನಿಮಾದಲ್ಲಿ ಕೆಲಸ ಮಾಡುವಾಗಲೇ ನಿರ್ದೇಶಕ ಲೋಹಿತ್ ಅವರ ಸಾಮರ್ಥ್ಯ ಏನೆಂಬುನ್ನು ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿಯೇ ಇನ್ನೊಂದು ಚಿತ್ರದಲ್ಲಿ ಅವರೊಂದಿಗೆ ಕೈಜೋಡಿಸಲು ನಿರ್ಧರಿಸಿದ್ದೇನೆ ಎಂದು ಹೇಳುತ್ತಾರೆ ಪ್ರಜ್ವಲ್.

ಸಿನಿಮಾವನ್ನು ಮಾಡುವ ಕುರಿತು ಲೋಹಿತ್ ಅವರ ದೃಷ್ಟಿಕೋನವೇ ಹೊಸದಾಗಿದೆ. ಅವರು ಯಾವಾಗಲೂ ತಾಜಾತನದಿಂದ ಕೂಡಿರುವ ಹೊಸದಾದ ಚಿತ್ರವನ್ನು ಮಾಡಲು ಬಯಸುತ್ತಾರೆ. ಅವರು ಈ ಚಿತ್ರದ ಸಾರಾಂಶವನ್ನಷ್ಟೇ ಹೇಳಿದರು. ಕೂಡಲೇ ನಾನು ಹೌದು ಎಂದು ಹೇಳಿದೆ. ಹಾರರ್ ಸಿನಿಮಾ ನನಗೆ ಹೊಸದಾಗಿದ್ದು, ಪಾತ್ರವೂ ವಿಭಿನ್ನವಾಗಿದೆ. ನಿರ್ದೇಶಕರು ನನಗೆ ಹೊಸ ಲುಕ್ ನೀಡಲು ನಿರ್ಧಿರಿಸಿದ್ದಾರೆ ಮತ್ತು ಈ ಸಿನಿಮಾಗಾಗಿ ಸಾಕಷ್ಟು ಆಸಕ್ತಿದಾಯಕ ವಿಷಯಗಳನ್ನು ಸಂಗ್ರಹಿಸಲಾಗಿದೆ ಎನ್ನುತ್ತಾರೆ.

ದೇವಕಿ ಮತ್ತು ಮಮ್ಮಿ-ಸೇವ್ ಮಿ ಚಿತ್ರದ ನಿರ್ಮಾಪಕರಾದ ಅಕ್ಷಯ್ ಸಿ.ಎಸ್ ಮತ್ತು ರವೀಶ್ ಆರ್ ಅವರು ಲೋಹಿತ್ ಅವರ ಫ್ರೈಡೇ ಫಿಲ್ಮ್ಸ್ ಸಹಯೋಗದೊಂದಿಗೆ ಚಿತ್ರವನ್ನು ನಿರ್ಮಿಸಲಿದ್ದಾರೆ. ಮಾಫಿಯಾವನ್ನು ಹೊರತುಪಡಿಸಿ, ಪ್ರಜ್ವಲ್ ದೇವರಾಜ್ ಅವರು ಅಬ್ಬರ, ಗಾನ ಮತ್ತು ವೀರಂ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

SCROLL FOR NEXT