ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಸದ್ದು! ವಿಚಾರಣೆ ನಡೆಯುತ್ತಿದೆ' ಸಿನಿಮಾ ಮೂಲಕ ಪಶುವೈದ್ಯ ಕಮ್ ನಟ ಮಧುನಂದನ್ ಸ್ಯಾಂಡಲ್ ವುಡ್ ಗೆ ಎಂಟ್ರಿ!

ವೈದ್ಯರು, ಎಂಜಿನೀಯರ್ ಗಳು ನಟರಾಗಿ, ನಿರ್ದೇಶಕರಾಗಿ ಬದಲಾಗಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪಶು ವೈದ್ಯ ಮತ್ತು ಪಿಎಚ್ ಡಿ ಪದವೀಧರ ಮಧುನಂದನ್ ನಟನಗೆ ಇಳಿದಿದ್ದಾರೆ.

ವೈದ್ಯರು, ಎಂಜಿನೀಯರ್ ಗಳು ನಟರಾಗಿ, ನಿರ್ದೇಶಕರಾಗಿ ಬದಲಾಗಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪಶು ವೈದ್ಯ ಮತ್ತು ಪಿಎಚ್ ಡಿ ಪದವೀಧರ ಮಧುನಂದನ್ ನಟನಗೆ ಇಳಿದಿದ್ದಾರೆ.

ನವೆಂಬರ್ 25 ರಂದು ರಿಲೀಸ್ ಆಗುತ್ತಿರುವ ಸದ್ದು, ವಿಚಾರಣೆ ನಡೆಯುತ್ತಿದೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಮಧುನಂದನ್ ಎಂಟ್ರಿ ಕೊಡುತ್ತಿದ್ದಾರೆ.

ಬಾಲ್ಯದಿಂದಲೂ ನನಗೆ ನಟನೆ ಬಗ್ಗೆ ಹೆಚ್ಚು ಒಲವಿತ್ತು, ಆದರೆ ಸಾಂಪ್ರಾದಾಯಿಕ ಕುಟುಂಬದಿಂದ ಬಂದ ನನಗೆ ನಾನು ಇಷ್ಟ ಪಟ್ಟ ವೃತ್ತಿ ಆಯ್ಕೆ ಮಾಡಿಕೊಳ್ಳಲು ಪೋಷಕರು ನನಗೆ ಅವಕಾಶ ಮಾಡಿಕೊಡಲಿಲ್ಲ. ನನ್ನ ಹೆತ್ತವರ ಆಸೆ ಪೂರೈಸಿದ ನಂತರ ಈಗ ನಾನು ನನ್ನ ದಾರಿಯಲ್ಲಿ ಹೋಗಲು ಸ್ವತಂತ್ರ್ಯನಾಗಿದ್ದೇನೆ, ಹೀಗಾಗಿ ನಟನೆಗೆ ಇಳಿದಿದ್ದೇನೆ ಎಂದು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಸಹಾಯಕ ಪ್ರಾಧ್ಯಾಪಕ ಕೆಲಸ ಮಾಡುತ್ತಿರುವ ಮಧುನಂದನ್ ಹೇಳುತ್ತಾರೆ.

ಅಶ್ವಿನಿ ಕೆ ಎನ್ ಬರೆದಿರುವ ಕಥೆಗೆ ಭಾಸ್ಕರ್ ನಿರ್ದೇಶನ ಮಾಡುತ್ತಿದ್ದಾರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಆಗಿದೆ. "ನಾನು ತನಿಖಾ ಅಧಿಕಾರಿ ಪೃಥ್ವಿರಾಜ್ ಪಾತ್ರ ನಿರ್ವಹಿಸುತ್ತೇನೆ, ಅಂತರ್ಜಾತಿ ವಿವಾಹವಾಗಿ ನಾಪತ್ತೆಯಾದ ದಂಪತಿಗಳ ನಿಗೂಢ ಪ್ರಕರಣದ  ಕಥೆ ಇದಾಗಿದೆ, ಇದು ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸುತ್ತದೆ, ಪ್ರಕರಣವನ್ನು ನಾನು ಹೇಗೆ ಭೇದಿಸುತ್ತೇನೆ  ಎಂಬುದು ಕುತೂಹಲವಾಗಿದೆ. ಕಥೆಯು ಅದರದೇ ಆದ ತಿರುವುಗಳೊಂದಿಗೆ ಬರುತ್ತದೆ ಎಂದು ಮಧುನಂದನ್ ವಿವರಿಸುತ್ತಾರೆ.

ಈ ಚಿತ್ರವು ಎಂಎಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದ್ದು  ಮಧುನಂದನ್ ನಿರ್ಮಾಪಕರಾಗಿದ್ದಾರೆ. ಪಾವನ ಗೌಡ ಮತ್ತು ರಾಕೇಶ್ ಮೈಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾರಾಗಣದಲ್ಲಿ ಅಚ್ಯುತ್ ಕುಮಾರ್, ರಘು ಶಿವಮೊಗ್ಗ, ಜಹಾಂಗೀರ್ ಎಂಎಸ್ ಮತ್ತು ಕೃಷ್ಣ ಹೆಬ್ಬಾಳೆ ಕೂಡ ಇದ್ದಾರೆ. ಚಿತ್ರದ ಸಂಗೀತವನ್ನು ಸಚಿನ್ ಬಸ್ರೂರ್ ನಿರ್ವಹಿಸಿದ್ದಾರೆ ಮತ್ತು ರಾಜ್ಕನಾಥ್ ಎಸ್ಕೆ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT