ಘಟಶ್ರಾದ್ಧ, ಪಥೇರ್ ಪಾಂಚಾಲಿ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

'ಪಥೇರ್ ಪಾಂಚಾಲಿ', ಕನ್ನಡದ 'ಘಟಶ್ರಾದ್ಧ' ಸೇರಿದಂತೆ ಭಾರತದ 10 ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳು

ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ಧ,  ಭಾರತದ ಲಿಜೆಂಡರಿ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ 'ಪಥೇರ್ ಪಾಂಚಾಲಿ' ಮತ್ತಿತರ ಚಿತ್ರಗಳು ' ಭಾರತದ ಸಾರ್ವಕಾಲಿಕ ಅತ್ಯುತ್ತಮ ಚಿತ್ರ ಎಂದು ಭಾರತೀಯ ಚಿತ್ರ ವಿಮರ್ಶಕರ ಒಕ್ಕೂಟ (ಎಫ್ಐಪಿಆರ್ ಇಎಸ್ ಸಿಐ) ಘೋಷಿಸಿದೆ.

ಮುಂಬೈ: ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ಧ,  ಭಾರತದ ಲಿಜೆಂಡರಿ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ 'ಪಥೇರ್ ಪಾಂಚಾಲಿ' ಮತ್ತಿತರ ಚಿತ್ರಗಳು 'ಭಾರತದ ಸಾರ್ವಕಾಲಿಕ  ಅತ್ಯುತ್ತಮ ಚಿತ್ರ ಎಂದು ಭಾರತೀಯ ಚಿತ್ರ ವಿಮರ್ಶಕರ ಒಕ್ಕೂಟ (ಎಫ್ಐಪಿಆರ್ ಇಎಸ್ ಸಿಐ) ಘೋಷಿಸಿದೆ.

ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ 1973ರಲ್ಲಿ ಬಿಡುಗಡೆಯಾಗಿತ್ತು. ಭಾರತೀಯ ಚಿತ್ರ ವಿಮರ್ಶಕರ ಒಕ್ಕೂಟ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಸಾರ್ವಕಾಲಿಕ ಅತ್ಯುತ್ತಮ ಟಾಪ್ 10  ಚಿತ್ರಗಳ ಪೈಕಿ 1955ರಲ್ಲಿ ಬಿಡುಗಡೆಯಾದ ಪಥೇರ್ ಪಾಂಚಾಲಿ'  ಪ್ರಥಮ ಸ್ಥಾನ ಪಡೆದಿದೆ. ರಹಸ್ಯವಾಗಿ 30 ಸದಸ್ಯರಿಂದ ಈ ಸಮೀಕ್ಷೆ ನಡೆಸಿದ್ದಾಗಿ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.

ಉಳಿದಂತೆ ಪಟ್ಟಿಯಲ್ಲಿರುವ ಇತರ ಚಿತ್ರಗಳು ಇಂತಿವೆ: 

1960 ರಲ್ಲಿ ಬಿಡುಗಡೆಯಾದ ಋತ್ವಿಕ್ ಘಾಟಕ್ ಅವರ 'ಮೇಘೆ ಢಾಕಾ ತಾರಾ' (ಬಂಗಾಳಿ)
1969ರಲ್ಲಿ ತೆರೆಗೆ ಬಂದ ಮೃಣಾಲ್ ಸೇನ್ ರ  'ಭುವನ್ ಶೋಮ್' (ಹಿಂದಿ)
1981ರಲ್ಲಿ ಬಿಡುಗಡೆಯಾದ  ಅಡೂರ್ ಗೋಪಾಲಕೃಷ್ಣನ್ ರ  'ಎಲಿಪ್ಪತಯಂ' (ಮಲಯಾಳಂ)
1973 ರಲ್ಲಿ ಬಿಡುಗಡೆಯಾದ ಎಂಎಸ್  ಸತ್ಯು ಅವರ  'ಗರ್ಮ್ ಹವಾ' (ಹಿಂದಿ)
1964ರಲ್ಲಿ ತಯಾರದ ರೇ ಅವರ 'ಚಾರುಲತಾ' (ಬಂಗಾಳಿ)
1974ರಲ್ಲಿ ಬಿಡುಗಡೆಯಾದ ಶ್ಯಾಮ್ ಬೆನಗಲ್ ರ ಅಂಕುರ್' (ಹಿಂದಿ)
1954ರಲ್ಲಿ ನಿರ್ಮಾಣವಾದ ಗುರುದತ್ ಅವರ 'ಪ್ಯಾಸ' (ಹಿಂದಿ)
1975 ರಲ್ಲಿ ರಮೇಶ್ ಸಿಪ್ಪಿ ನಿರ್ದೇಶನದ  'ಶೋಲೆ' (ಹಿಂದಿ) 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT