ಟೋಬಿ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ರಾಜ್ ಶೆಟ್ಟಿ ನಟನೆಯ 'ಟೋಬಿ' ಚಿತ್ರದ ಟ್ರೇಲರ್ ರಿಲೀಸ್; ಭರ್ಜರಿ ರೆಸ್ಪಾನ್ಸ್!

ಕರಾವಳಿ ಮೂಲದ ರಾಜ್ ಬಿ ಶೆಟ್ಟಿ ತಮ್ಮ ಅದ್ಭುತ ನಟನೆ, ವಿಶಿಷ್ಟ ಚಿತ್ರಗಳ ಮೂಲಕ ಕನ್ನಡ ಚಿತ್ರಪ್ರೇಮಿಗಳ ಮನೆಮಾತಾಗಿದ್ದಾರೆ. ಅವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು.

ಕರಾವಳಿ ಮೂಲದ ರಾಜ್ ಬಿ ಶೆಟ್ಟಿ ತಮ್ಮ ಅದ್ಭುತ ನಟನೆ, ವಿಶಿಷ್ಟ ಚಿತ್ರಗಳ ಮೂಲಕ ಕನ್ನಡ ಚಿತ್ರಪ್ರೇಮಿಗಳ ಮನೆಮಾತಾಗಿದ್ದಾರೆ. ಅವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು. ನೀವು ಕಲಾವಿದನನ್ನು ನೋಯಿಸಿದಾಗ, ಕೋಪದ ಕವಿತೆಯೊಂದು ಹೊರಹೊಮ್ಮುತ್ತದೆ ಎಂದು, ಅಂದರೆ ಭಾವನಾತ್ಮಕವಾಗಿ ಕಲಾವಿದ ಹೇಗೆ ಒಂದು ಕಟುವಾದ ಪಾತ್ರವನ್ನು ಸೃಷ್ಟಿಸುತ್ತಾನೆ ಎಂಬುದು ಅವರ ಮಾತಿನ ಅರ್ಥವಾಗಿತ್ತು. 

ಕಲಾವಿದನ ಆಕ್ರೋಶ, ಸಿಟ್ಟಿನ ಸಿನಿಮೀಯ ಸೃಷ್ಟಿ ಟೋಬಿಯಾಗಿ ರೂಪಾಂತರಗೊಂಡಿದ್ದು, ಇದೇ ತಿಂಗಳು 25ರಂದು ಸಿನಿಪ್ರೇಕ್ಷಕರ ಮುಂದೆ ಬರುತ್ತಿದೆ. ಇದರ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ನಡೆಯಿತು. 

3-ನಿಮಿಷಗಳ ವೈಶಿಷ್ಟ್ಯವು ವಿಮೋಚನೆಗೊಂಡ ಪಾತ್ರದ ಸುತ್ತ ಕೇಂದ್ರೀಕೃತವಾಗಿರುವ ಕಥೆಯ ಒಂದು ನೋಟವನ್ನು ಟ್ರೇಲರ್ ನೀಡುತ್ತದೆ, ಟೋಬಿ ಎಂದರೆ ಸಾಮಾನ್ಯವಾಗಿ ಕುರಿ ಎಂದು ಕರೆಯಲಾಗುತ್ತದೆ. ಕಠೋರವಾದ ಅದೃಷ್ಟದಿಂದ ಪಾರಾಗಿ, 'ಕುರಿ' ತನ್ನ ಪ್ರಶಾಂತ ಹಳ್ಳಿಗೆ ಶಕ್ತಿಯುತ ಪರಿವರ್ತಕ ಪ್ರಯಾಣವನ್ನು ಪ್ರಾರಂಭಿಸುವುದು ಒಂದು ಎಳೆ ಕಥೆಯಾಗಿದೆ. 

ಈ ಚಿತ್ರವನ್ನು ರಾಜ್ ಅವರ ಗೆಳೆಯ ಬಾಸಿಲ್ ಎಎಲ್ ಚಳಕ್ಕಲ್ ನಿರ್ದೇಶಿಸಿದ್ದಾರೆ. ಶೀರ್ಷಿಕೆ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ರಾಜ್ ಶೆಟ್ಟಿ ಕಥೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ಅವರ ಪಾತ್ರವು ಮಾರಿಯ ಆತ್ಮವನ್ನು ಒಳಗೊಂಡಿರುತ್ತದೆ, ಇನ್ನು ಚೈತ್ರ ಆಚಾರ್, ಸಂಯುಕ್ತ ಹೊರನಾಡು, ದೀಪಕ್ ಶೆಟ್ಟಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು ನಟಿಸಿದ್ದಾರೆ. ಟೋಬಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಆಳವನ್ನು ಹೊಂದಿದೆ, ಟ್ರೇಲರ್ ನಲ್ಲಿ ಒಂದು ನೋಟ ಕಾಣಬಹುದು. 

ಅಗಸ್ತ್ಯ ಫಿಲ್ಮ್ಸ್ ಸಹಯೋಗದಲ್ಲಿ ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಿಸಿದ ಟೋಬಿ, ಆಗಸ್ಟ್ 25 ರಂದು ಕರ್ನಾಟಕದಾದ್ಯಂತ ತೆರೆ ಕಾಣಲಿದ್ದು ಕೆವಿಎನ್ ಪ್ರೊಡಕ್ಷನ್ಸ್ ವಿತರಿಸಲಿದೆ. ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿಯವರು ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ ಜೊತೆ ಸಹಕರಿಸಿದ್ದು, ಛಾಯಾಗ್ರಾಹಕ ಪ್ರವೀಣ್ ಶ್ರೀಯಾನ್ ಅವರ ಕ್ಯಾಮರಾ ಕೈಚಳಕವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT