'ಘೋಸ್ಟ್' ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ ಅಭಿನಯದ 'ಘೋಸ್ಟ್' ಚಿತ್ರೀಕರಣ ಮುಕ್ತಾಯ, ದಸರಾಗೆ ರಿಲೀಸ್

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಘೋಸ್ಟ್' ಚಿತ್ರೀಕರಣವನ್ನು ಮಂಗಳವಾರ ಪೂರ್ಣಗೊಳಿಸಿದ್ದು, ದಸರಾಗೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಶ್ರೀನಿ ಅವರು...

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಘೋಸ್ಟ್' ಚಿತ್ರೀಕರಣವನ್ನು ಮಂಗಳವಾರ ಪೂರ್ಣಗೊಳಿಸಿದ್ದು, ದಸರಾಗೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಶ್ರೀನಿ ಅವರು ಹೇಳಿದ್ದಾರೆ.

'ಘೋಸ್ಟ್' ಚಿತ್ರದ ಚಿತ್ರೀಕರಣ ಮುಗಿಸಿದ ಶ್ರೀನಿ, ತಮ್ಮ ಮುಂದಿನ ಥ್ರಿಲ್ಲರ್ ಸಿನಿಮಾ ಬೀರ್​ಬಲ್ 2 ನ ಕೆಲವು ಭಾಗಗಳನ್ನು ಸಹ ಚಿತ್ರೀಕರಿಸಿದ್ದಾರೆ. ಅಲ್ಲದೇ ಘೋಸ್ಟ್ ಚಿತ್ರದಲ್ಲಿ ಬೀರ್​ಬಲ್​ ಚಿತ್ರದ ಪಾರ್ಟ್​-2 ಹಿಂಟ್ ಕೂಡ ಬಿಟ್ಟುಕೊಡಲಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಬೀರ್​ಬಲ್ ಸೀಕ್ವೆಲ್‌ನ ಸೆಟ್‌ಗಳಿಂದ ಫಸ್ಟ್ ಲುಕ್ ಅನ್ನು ಹಂಚಿಕೊಂಡ ತಯಾರಕರು, ಮೇಕಿಂಗ್‌ನಲ್ಲಿ ಸಿನಿಮಾದ ಮಲ್ಟಿವರ್ಸ್‌ನ ಬಗ್ಗೆ ಸುಳಿವು ನೀಡಿದ್ದಾರೆ. ಚಿತ್ರದಲ್ಲಿ ಹಾಲಿವುಡ್​​ನ ಸಿನಿಮ್ಯಾಟಿಕ್ ಯುನಿವರ್ಸ್​ ಟೆಕ್ನಿಕ್ ಬಳಸುತ್ತಿದ್ದಾರೆ. ಬಾಲಿವುಡ್​ ಮಂದಿಗೆ ಈ ಒಂದು ಟೆಕ್ನಿಕ್​ ಹೊಸದೇನೂ ಅಲ್ಲ. ಆದರೆ ಕನ್ನಡಿಗರಿಗೆ ಈ ಮೂಲಕ ಹೊಸದೊಂದು ವಿಷಯ ತಿಳಿಸಲು ಶ್ರೀನಿ ಮುಂದಾಗಿದ್ದಾರೆ.

ನಾನು ಘೋಸ್ಟ್ ಚಿತ್ರವನ್ನು ಬೀರ್​ಬಲ್ ನ ಸೀಕ್ವೆಲ್‌ನೊಂದಿಗೆ ಲಿಂಕ್ ಮಾಡುತ್ತಿದ್ದೇನೆ. ಅದು ಪ್ರತಿಯಾಗಿ, ಘೋಸ್ಟ್ 2 ನೊಂದಿಗೆ ನಂಟು ಹೊಂದಿರಲಿದೆ. ಹಾಗಾಗಿ, ಮಂಗಳವಾರ, ನಾನು ಘೋಸ್ಟ್‌ಗಾಗಿ ಬಾಕಿ ಉಳಿದಿರುವ ಪ್ಯಾಚ್‌ವರ್ಕ್‌ನೊಂದಿಗೆ ಸಂಪೂರ್ಣ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ. ಬೀರ್​ಬಲ್ ಸೀಕ್ವೆಲ್‌ಗಾಗಿ ನಾನು ಕೆಲವು ಶಾಟ್‌ಗಳನ್ನು ಸಹ ಚಿತ್ರೀಕರಿಸಿದ್ದೇನೆ ಎಂದು ಶ್ರೀನಿ ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT