ರಾಚೆಲ್ ಡೇವಿಡ್ 
ಸಿನಿಮಾ ಸುದ್ದಿ

ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದದ್ದನ್ನು ಮಾಡುವ ಗುರಿ ಹೊಂದಿದ್ದೇನೆ: ರಾಚೆಲ್ ಡೇವಿಡ್

ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಹಗ್ಗಜಗ್ಗಾಟ ನಡೆಸುತ್ತಿರುವ ನಟಿ ರಾಚೆಲ್ ಡೇವಿಡ್, ಲವ್ ಮಾಕ್‌ಟೇಲ್ 2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಇದೀಗ ಕನ್ನಡ ಚಿತ್ರಗಳ ಅವಕಾಶ ಸಿಗುತ್ತಿರುವುದಕ್ಕೆ ಅವರು ಸಂತೋಷವಾಗಿದ್ದಾರೆ. 

ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಹಗ್ಗಜಗ್ಗಾಟ ನಡೆಸುತ್ತಿರುವ ನಟಿ ರಾಚೆಲ್ ಡೇವಿಡ್, ಲವ್ ಮಾಕ್‌ಟೇಲ್ 2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಇದೀಗ ಕನ್ನಡ ಚಿತ್ರಗಳ ಅವಕಾಶ ಸಿಗುತ್ತಿರುವುದಕ್ಕೆ ಅವರು ಸಂತೋಷವಾಗಿದ್ದಾರೆ. ಅವರ ಮುಂಬರುವ ಚಿತ್ರಗಳಲ್ಲಿ ಒಂದಾದ ಚೆಫ್ ಚಿದಂಬರ ಕೂಡ ಒಂದು. ಈ ಚಿತ್ರವನ್ನು ಆನಂದ್ ರಾಜ್ ನಿರ್ದೇಶಿಸಿದ್ದು, ನಟ ಅನಿರುದ್ಧ್ ಜಟ್ಕರ್ ನಟಿಸಿದ್ದಾರೆ.

ಬಬ್ಲಿ ಪಾತ್ರ ಎಂದು ಬಿಂಬಿಸಲಾದ ಈ ಪಾತ್ರವನ್ನು ಒಪ್ಪಿಕೊಳ್ಳಲು ಮತ್ತು ಅನಿರುದ್ಧ್ ಅವರಂತಹ ಅನುಭವಿ ನಟರೊಂದಿಗೆ ತೆರೆ ಹಂಚಿಕೊಳ್ಳುವ ಬಗ್ಗೆ ಕೇಳಿದಾಗ ರಾಚೆಲ್, 'ಇದೇ ಪ್ರಶ್ನೆ ನನ್ನ ಮನಸ್ಸಲ್ಲೂ ಮೂಡಿತು ಮತ್ತು ನಾನು ಅದನ್ನು ನಿರ್ದೇಶಕ ಆನಂದ್ ರಾಜ್ ಅವರೊಂದಿಗೆ ಚರ್ಚಿಸಿದೆ. ಪರದೆ ಮೇಲೆ ವಯಸ್ಸಿನ ವ್ಯತ್ಯಾಸ ಮುಖ್ಯವೇ ಎಂದು ನಾನು ಕೇಳಿದೆ. ಅನಿರುದ್ಧ್ ಅವರನ್ನು ಈ ಹಿಂದೆಂದು ಭೇಟಿಯಾಗದ ಕಾರಣ ನನಗೂ ಸ್ವಲ್ಪ ಆತಂಕವಿತ್ತು. ಆದಾಗ್ಯೂ, ಆನಂದ್ ರಾಜ್ ಅವರು ಉತ್ತಮವಾಗಿ ತೋರಿಸುವುದಾಗಿ ಮತ್ತು ನಮ್ಮ ಜೋಡಿಯು ನಿಸ್ಸಂದೇಹವಾಗಿ ಸುಂದರವಾಗಿ ಮೂಡಿಬರುತ್ತದೆ ಎಂದು ನನಗೆ ಭರವಸೆ ನೀಡಿದರು ಎನ್ನುತ್ತಾರೆ.

'ಈಗಿನ ಕಾಲದಲ್ಲಿ, ತೆರೆಯ ಮೇಲೆ ಕಾಣಿಸಿಕೊಳ್ಳಲು ವಯಸ್ಸು ಅಡ್ಡಿಯಾಗಬಾರದು ಎಂದು ನಾನು ನಂಬುತ್ತೇನೆ. ನನಗೆ ಹೆಚ್ಚು ಮುಖ್ಯವಾದುದು ಕಂಟೆಂಟ್. ನನ್ನ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದುದನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ. ನಾನು ಯಾವುದೇ ಹೊಸ ಅಥವಾ ಅನುಭವಿ ನಟರೊಂದಿಗೆ ಜೋಡಿಯಾಗಿದ್ದರೂ, ನನ್ನ ಪಾತ್ರಕ್ಕೆ ಎಷ್ಟು ಮೌಲ್ಯವಿದೆ ಎಂಬುದು ನನಗೆ ಮುಖ್ಯ ವಿಚಾರ. ಈ ಸಂದರ್ಭದಲ್ಲಿ, ನಾನು ಸಂಪೂರ್ಣವಾಗಿ ನಿರ್ದೇಶಕರ ಇಚ್ಛೆಯಂತೆ ಹೋಗಿದ್ದೇನೆ' ಎನ್ನುತ್ತಾರೆ ರಾಚೆಲ್.

ರಾಚೆಲ್ ಡೇವಿಡ್

ಚಿತ್ರತಂಡ ಇತ್ತೀಚೆಗಷ್ಟೇ ಅನಿರುದ್ಧ್ ಅವರನ್ನೊಳಗೊಂಡ ಫಸ್ಟ್‌ ಲುಕ್ ಅನ್ನು ಬಿಡುಗಡೆ ಮಾಡಿದೆ ಮತ್ತು ಆಗಸ್ಟ್ 10ರಂದು ಮುಹೂರ್ತ ಕಾರ್ಯಕ್ರಮದೊಂದಿಗೆ ಶೂಟಿಂಗ್ ಪ್ರಾರಂಭವಾಗಲಿದೆ. ಆಗಸ್ಟ್ 12ರಂದು ರಾಚೆಲ್ ಡೇವಿಡ್ ಸೆಟ್‌ಗೆ ಸೇರಲಿದ್ದಾರೆ. ಈ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಚೆಫ್ ಚಿದಂಬರ ಸಿನಿಮಾದೊಂದಿಗೆ ರಾಚೆಲ್ ಅವರು 'ಭುವನಂ ಗಗನಂ', 'ಅನ್‌ಲಾಕ್ ರಾಘವ' ಮತ್ತು ಮುಂಬರುವ ಯೋಜನೆಯಾದ 'ಕಂಟ್ರಿ ಪಿಸ್ತೂಲ್‌' ಸಿನಿಮಾದ ಭಾಗವಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT