ಆಚಾರ್ ಅಂಡ್ ಕೋ. ಸಿನಿಮಾದ ಸ್ಟಿಲ್ 
ಸಿನಿಮಾ ಸುದ್ದಿ

ಪಿಆರ್​ಕೆ ಪ್ರೊಡಕ್ಷನ್ಸ್ ನಿರ್ಮಾಣದ ಆಚಾರ್ & ಕೋ. ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ

ಆಚಾರ್ & ಕೋ. ಕನ್ನಡ ಸಿನಿಮಾ ಆಗಸ್ಟ್ 22ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ವಿಡಿಯೋ ಈ ಸುದ್ದಿಯನ್ನು ಸೋಮವಾರವೇ ಪ್ರಕಟಿಸಿತ್ತು. ಸಿಂಧು ಶ್ರೀನಿವಾಸ ಮೂರ್ತಿ ಅವರು ಬರೆದು ನಿರ್ದೇಶಿಸಿದ್ದು, ಕಾನನ್ ಗಿಲ್ ಸಹ-ಕಥೆ ಬರೆದಿದ್ದಾರೆ. 

ಆಚಾರ್ & ಕೋ. ಕನ್ನಡ ಸಿನಿಮಾ ಆಗಸ್ಟ್ 22ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ವಿಡಿಯೋ ಈ ಸುದ್ದಿಯನ್ನು ಸೋಮವಾರವೇ ಪ್ರಕಟಿಸಿತ್ತು. ಸಿಂಧು ಶ್ರೀನಿವಾಸ ಮೂರ್ತಿ ಅವರು ಬರೆದು ನಿರ್ದೇಶಿಸಿದ್ದು, ಕಾನನ್ ಗಿಲ್ ಸಹ-ಕಥೆ ಬರೆದಿದ್ದಾರೆ. ಸಿನಿಮಾದಲ್ಲಿ ಸಿಂಧು ಶ್ರೀನಿವಾಸಮೂರ್ತಿ ಜೊತೆಗೆ ಅನಿರುದ್ಧ್ ಆಚಾರ್ಯ, ಹರ್ಷಿಲ್ ಕೌಶಿಕ್, ಸುಧಾ ಬೆಳವಾಡಿ ಮತ್ತು ಅಶೋಕ್ ನಟಿಸಿದ್ದಾರೆ.

ಈ ಸಿನಿಮಾ 1960ರ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಮಧುಸೂಧನ್ ಆಚಾರ್ ಮತ್ತು ಅವರ ಪತ್ನಿ ಸಾವಿತ್ರಿ ಅವರ ಸಾಂಪ್ರದಾಯಿಕ ಕುಟುಂಬವು, ಕುಟುಂಬದ ಪರಂಪರೆಯೊಂದಿಗೆ ಆಧುನೀಕರಣದೊಂದಿಗೆ ಸೆಣಸಾಡುತ್ತಿರುವ ಜೀವನದ ಸುತ್ತ ಕೇಂದ್ರೀಕೃತವಾಗಿದೆ. ಆದರೆ, ಕುಟುಂಬದ ಮುಖ್ಯಸ್ಥ ಮಧುಸೂಧನ್ ಅವರು ಅನಿರೀಕ್ಷಿತವಾಗಿ ನಿಧನರಾದಾಗ, ಕುಟುಂಬವು ಹಠಾತ್ತನೆ ಬದಲಾಗುತ್ತಿರುವ ವಾಸ್ತವದೊಂದಿಗೆ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಅದು ಮನೆಯ ಎಲ್ಲಾ ಸದಸ್ಯರಿಗೂ ಮನೆಯ ಜವಾಬ್ದಾರಿಗಳನ್ನು ಹಂಚುತ್ತದೆ.

ವಿಕಸನಗೊಳ್ಳುತ್ತಿರುವ ಆಧುನಿಕತೆ ಮತ್ತು ಸಾಮಾಜಿಕ ಮಾನದಂಡಗಳ ಹಿನ್ನೆಲೆಯಲ್ಲಿ, ಆಚಾರ್ & ಕೋ. ದೊಡ್ಡ ಕುಟುಂಬವನ್ನು ಬೆಳೆಸುವ, ಅದರ ಯೋಗಕ್ಷೇಮವನ್ನು ನೋಡಿಕೊಳ್ಳುವ ಮತ್ತು ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವ ಸವಾಲುಗಳನ್ನು ಚಿತ್ರಿಸುತ್ತದೆ.

ಚಿತ್ರವು 1960ರ ಕಾಲಘಟ್ಟದಲ್ಲಿ ಸಾಗುವ ಕಥೆಯನ್ನು ಹೊಂದಿದ್ದರೂ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಮುಂತಾದ ವಿಚಾರಗಳ ಬಗ್ಗೆ ಸಿನಿಮಾ ಸೂಕ್ಷ್ಮವಾಗಿ ಹೇಳುತ್ತದೆ. ಅಂತಹ ಪಿಡುಗುಗಳನ್ನ ಎದುರಿಸಿ ಹೊರನಡೆಯುವ ಹೆಣ್ಣು ಮಗಳೊಬ್ಬಳ ಕಥೆ ಈ ಸಿನಿಮಾದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT