ಸಿನಿಮಾ ಸುದ್ದಿ

ನವೀನ್ ರೆಡ್ಡಿ ನಿರ್ದೇಶನದ, ರಂಗಾಯಣ ರಘು ಅಭಿನಯದ 'ಮೂರನೇ ಕೃಷ್ಣಪ್ಪ' ಚಿತ್ರ ಬಿಡುಗಡೆಗೆ ಸಿದ್ಧತೆ

Ramyashree GN

ಅಕಿರ ಮತ್ತು Relax ಸತ್ಯ ಚಿತ್ರಗಳ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ನವೀನ್ ರೆಡ್ಡಿ ಅವರು ತಮ್ಮ ಮೂರನೇ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಮೂರನೇ ಕೃಷ್ಣಪ್ಪ ಎಂಬ ಶೀರ್ಷಿಕೆಯಡಿ ರಂಗಾಯಣ ರಘು ಮತ್ತು ಸಂಪತ್ ಮೈತ್ರೇಯ ನಾಯಕರಾಗಿ ಮತ್ತು ಶ್ರೀಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.

ಸದ್ಯ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿರುವ ಮೂರನೇ ಕೃಷ್ಣಪ್ಪ ಆನೇಕಲ್‌ನ ಸಾಂಸ್ಕೃತಿಕ ಸಾರವನ್ನು ಪ್ರತಿಬಿಂಬಿಸುವ ಹಳ್ಳಿಯ ದೇವಸ್ಥಾನದ ಉದ್ಘಾಟನೆಯನ್ನು ಕೇಂದ್ರೀಕರಿಸಿದ ಹಾಸ್ಯಮಯ ಕಥೆ ಎಂದು ಬಿಂಬಿಸಲಾಗಿದೆ. ಚಿತ್ರದಲ್ಲಿ ಉಗ್ರಂ ಮಂಜು ಮತ್ತು ತುಕಾಲಿ ಸಂತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೋಹನ್ ರೆಡ್ಡಿ ಮತ್ತು ರವಿಶಂಕರ್ ಅವರ ರೆಡ್ ಡ್ರ್ಯಾಗನ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಮತ್ತು ಸುಪ್ರಿತ್ ಶರ್ಮಾ ಅವರ ಸಂಗೀತ ಮತ್ತು ಯೋಗಿ ಅವರ ಛಾಯಾಗ್ರಹಣವಿದೆ. ಫೆಬ್ರುವರಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ತಂಡ ಹೊಂದಿದೆ.

SCROLL FOR NEXT