ವಿಜಯಕಾಂತ್, ಮಾಲಿವುಡ್ ನಿರ್ದೇಶಕ 
ಸಿನಿಮಾ ಸುದ್ದಿ

ನಟ ವಿಜಯಕಾಂತ್ ಅವರದು ಸಾವಲ್ಲ, ಕೊಲೆ: ಮಾಲಿವುಡ್ ಖ್ಯಾತ ನಿರ್ದೇಶಕ ಗಂಭೀರ ಆರೋಪ

ತಮಿಳಿನ ಖ್ಯಾತ ಹಾಗೂ ಡಿಎಂಡಿಕೆ ನಾಯಕ ನಟ ವಿಜಯಕಾಂತ್  ಸಾವಿನ ಬಗ್ಗೆ  ಕಳವಳ ವ್ಯಕ್ತಪಡಿಸಿ, ಮಾಲಿವುಡ್ ಖ್ಯಾತ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್  ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. 

ಚೆನ್ನೈ:  ತಮಿಳಿನ ಖ್ಯಾತ ಹಾಗೂ ಡಿಎಂಡಿಕೆ ನಾಯಕ ನಟ ವಿಜಯಕಾಂತ್  ಸಾವಿನ ಬಗ್ಗೆ  ಕಳವಳ ವ್ಯಕ್ತಪಡಿಸಿ, ಮಾಲಿವುಡ್ ಖ್ಯಾತ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್  ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. 

ವಿಜಯಕಾಂತ್ ಅವರದು ಸಾವಲ್ಲ, ಕೊಲೆಯಾಗಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿ ಎಂದು ರಾಜಕಾರಣಿ ಉದಯನಿಧಿ ಸ್ಟಾಲಿನ್ ಅವರಲ್ಲಿ ಮನವಿ ಮಾಡಿದ್ದಾರೆ.

ನಾನು ಕೇರಳದವರು. ಇದು ಉದಯನಿಧಿ ಅಣ್ಣ ಅವರಿಗಾಗಿ. ಕಲೈಂಜರ್, ಜಯಲಲಿತಾ ಕೊಂದವರು ಯಾರೆಂದು ನಾನು ಕೇಳಿದ್ದೆ. ಈಗ ಕ್ಯಾಪ್ಟನ್ ವಿಜಯಕಾಂತ್ ಅವರನ್ನು ಕೊಲೆ ಮಾಡಿದವರನ್ನು ನೀವು ಪತ್ತೆ ಮಾಡಬೇಕು. ನೀವು ಇದನ್ನು ನಿರ್ಲಕ್ಷ್ಯ ಮಾಡಿದರೆ, ಅವರು ಈಗಾಗಲೇ ಇಂಡಿಯನ್-2 ಸೆಟ್ ನಲ್ಲಿ ಸ್ಟಾಲಿನ್ ಹಾಗೂ ಕಮಲ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ನೀವು ಈಗ ಕೊಲೆಗಾರರ ಹಿಂದೆ ಬೀಳದೆ ಇದ್ದರೆ, ಅವರು ನಿಮ್ಮ ಅಥವಾ ಸ್ಟಾಲಿನ್ ಅವರನ್ನು ಟಾರ್ಗೆಟ್ ಮಾಡುತ್ತಾರೆ. ನೇರಂ ಸಿನಿಮಾ ಹಿಟ್ ಆದ ಬಳಿಕ ನೀವು ನನಗೆ ಐಫೋನ್ ಗಿಫ್ಟ್ ಕೊಟ್ಟದ್ದು ನೆನಪಿದೆಯಾ? ನಿಮಗೆ ನೆನಪಿರಬಹುದೆಂದುಕೊಳ್ಳುತ್ತೇನೆ. ಕೊಲೆಗಾರರು ಹಾಗೂ ಅವರ ಉದ್ದೇಶವನ್ನು ಕಂಡುಹಿಡಿಯಿರಿ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT