ಪಾರ್ಥಿಬನ್ - ರೋಸಿ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಯೋಗಿ ನಟನೆಯ ರೋಸಿ ಚಿತ್ರದಲ್ಲಿ ತಮಿಳು ನಟ-ನಿರ್ದೇಶಕ ಪಾರ್ಥಿಬನ್‌ಗೆ ಪ್ರಮುಖ ಪಾತ್ರ?

ಮಣಿರತ್ನಂ ಅವರ ಬಹು ನಿರೀಕ್ಷಿತ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ನಟ-ನಿರ್ದೇಶಕ ಪಾರ್ಥಿಬನ್, ಅಜಯ್ ರಾಜ್ ಅರಸ್ ಅವರ ದಾದಾ ಈಸ್ ಬ್ಯಾಕ್ (2017) ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದರು. ಮೂಲಗಳ ಪ್ರಕಾರ, ಈ ನಟನನ್ನು ಈಗ ನಿರ್ದೇಶಕ ಶೂನ್ಯಾ ಅವರ ಮುಂಬರುವ ಚಿತ್ರ 'ರೋಸಿ'ಯ ಭಾಗವಾಗಲು ಸಂಪರ್ಕಿಸಲಾಗಿದೆ.

ಮಣಿರತ್ನಂ ಅವರ ಬಹು ನಿರೀಕ್ಷಿತ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ನಟ-ನಿರ್ದೇಶಕ ಪಾರ್ಥಿಬನ್, ಅಜಯ್ ರಾಜ್ ಅರಸ್ ಅವರ ದಾದಾ ಈಸ್ ಬ್ಯಾಕ್ (2017) ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದರು. ಮೂಲಗಳ ಪ್ರಕಾರ, ಈ ನಟನನ್ನು ಈಗ ನಿರ್ದೇಶಕ ಶೂನ್ಯಾ ಅವರ ಮುಂಬರುವ ಚಿತ್ರ 'ರೋಸಿ'ಯ ಭಾಗವಾಗಲು ಸಂಪರ್ಕಿಸಲಾಗಿದೆ.

ಗ್ಯಾಂಗ್‌ಸ್ಟರ್ ಚಿತ್ರವಾಗಿ ಬಿಂಬಿತವಾಗಿರುವ ರೋಸಿ ಸಿನಿಮಾದಲ್ಲಿ ನಟ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಪಾರ್ಥಿಬನ್ ಅವರನ್ನು ಆಯ್ಕೆ ಮಾಡಲು ಚಿತ್ರತಂಡ ಯೋಜಿಸುತ್ತಿದ್ದಾರೆ. ಚರ್ಚೆಗಳು ನಡೆಯುತ್ತಿದ್ದು, ಶೂಟಿಂಗ್ ದಿನಾಂಕಗಳು ಮತ್ತು ಇತರ ಕಮಿಟ್‌ಮೆಂಟ್‌ಗಳು ಸೇರಿದಂತೆ ಎಲ್ಲವೂ ಯೋಜನೆಯ ಪ್ರಕಾರ ನಡೆದರೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.

ಧನಂಜಯ್ ನಾಯಕನಾಗಿ ನಟಿಸಿದ 'ಹೆಡ್ ಬುಷ್' ನಂತರ ರೋಸಿ ಶೂನ್ಯಾ ಅವರ ಎರಡನೇ ಸಿನಿಮಾವಾಗಿದೆ. ಶೂನ್ಯಾ ಬರೆದಿರುವ ರೋಸಿ ನಿಜ ಜೀವನದ ಘಟನೆಯನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ.

ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ರೋಸಿಯ ಉಳಿದ ತಾರಾಗಣ ಮತ್ತು ಸಿಬ್ಬಂದಿಯನ್ನು ಚಿತ್ರತಂಡ ಅಂತಿಮಗೊಳಿಸುತ್ತಿದ್ದಾರೆ. ರಾಜೇಶ್ ಅವರ ಬೆಂಬಲದೊಂದಿಗೆ, ರೋಸಿಗೆ ಆನಂದ್ ಸುಂದರೇಶನ್ ಛಾಯಾಗ್ರಾಹಕರಾಗಿರಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!