ಅಜಯ್ ರಾವ್ - ಅರ್ಚನಾ ಜೋಯಿಸ್ 
ಸಿನಿಮಾ ಸುದ್ದಿ

ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ಕ್ಕೆ ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಆಯ್ಕೆ

ಪವನ್ ಭಟ್ (ಕಟಿಂಗ್ ಶಾಪ್) ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ವಕೀಲರಾಗಿ ಮತ್ತು ಸುಪ್ರಿತಾ ಸತ್ಯನಾರಾಯಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. "ಹೊಂದಿಸಿ ಬರೆಯಿರಿ" ಚಿತ್ರದ ನಟಿ ಅರ್ಚನಾ ಜೋಯಿಸ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

'ಯುದ್ಧಕಾಂಡ' ಚಿತ್ರದ ನಾಯಕ ಹಾಗೂ ನಿರ್ಮಾಪಕರಾಗಿರುವ ಅಜಯ್ ರಾವ್ ಅವರು ಶೇ 50ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಪವನ್ ಭಟ್ (ಕಟಿಂಗ್ ಶಾಪ್) ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ವಕೀಲರಾಗಿ ಮತ್ತು ಸುಪ್ರಿತಾ ಸತ್ಯನಾರಾಯಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. "ಹೊಂದಿಸಿ ಬರೆಯಿರಿ" ಚಿತ್ರದ ನಟಿ ಅರ್ಚನಾ ಜೋಯಿಸ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಅಜಯ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಆದರೆ, ಪಾತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. 'ಅರ್ಚನಾ ಜೋಯಿಸ್ ಅವರು ನಮ್ಮ ಚಿತ್ರದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಕೆಜಿಎಫ್‌ನಲ್ಲಿನ ಅವರ ಪಾತ್ರ ಮತ್ತು ಅಭಿನಯಕ್ಕಾಗಿ ಸ್ಕ್ರಿಪ್ಟಿಂಗ್ ಹಂತದಲ್ಲಿಯೇ ಅವರನ್ನು ಯುದ್ಧಕಾಂಡ ಸಿನಿಮಾಗೆ ಆಯ್ಕೆ ಮಾಡಲಾಯಿತು' ಎನ್ನುತ್ತಾರೆ.

ಬಜೆಟ್ ಅಥವಾ ಶೂಟಿಂಗ್ ದಿನಗಳ ಸಂಖ್ಯೆಗೆ ಮಿತಿಯನ್ನು ಹಾಕಿಲ್ಲ ಎನ್ನುವ ಅಜಯ್, 'ನಾವು ಕೇವಲ ಒಂದು ಶಾಟ್‌ಗಾಗಿ ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದೇವೆ. ಪ್ರತಿ ಬಾರಿ, ಏನಾದರೂ ತಪ್ಪಾಗುತ್ತಿತ್ತು. ಆದರೆ, ನಾವು ಸರಿಯಾದ ಶಾಟ್ ಅನ್ನು ಪಡೆಯುವವರೆಗೂ ನಾವು ಬಿಡಲಿಲ್ಲ. ಇದನ್ನು ಬೇರೆ ನಿರ್ಮಾಪಕರು ನಿಭಾಯಿಸಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳುತ್ತಾರೆ.

ಅಜಯ್ ಜೂನ್ ಮಧ್ಯದಲ್ಲಿ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಯೋಜಿಸಿದ್ದಾರೆ. ಶೇ 90 ರಷ್ಟು ಚಲನಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿಯೇ ನಡೆಸಲು ಯೋಜಿಸಲಾಗಿದೆ.

ರವಿಚಂದ್ರನ್ ಅಭಿನಯದ 1989 ರ ಚಲನಚಿತ್ರದ ಶೀರ್ಷಿಕೆಯನ್ನೇ ಎರವಲು ಪಡೆದುಕೊಂಡಿರುವ ಸಿನಿಮಾಗೆ ಕೆಬಿ ಪ್ರವೀಣ್ ಅವರ ಸಂಗೀತ ಮತ್ತು ಕಾರ್ತಿಕ್ ಶರ್ಮಾ ಅವರ ಛಾಯಾಗ್ರಹಣವನ್ನು ಹೊಂದಿದೆ. 

ಈಮಧ್ಯೆ, ನಟ ಅಜಯ್ ಅವರು ಮಂಜು ಸ್ವರಾಜ್ ಅವರೊಂದಿಗೆ ಮತ್ತೊಂದು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಇದು ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಮೇ ಮೂರನೇ ವಾರದಲ್ಲಿ ಚಿತ್ರೀಕರಣವನ್ನು ಪುನರಾರಂಭಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್