ಇಶಾನಿ 
ಸಿನಿಮಾ ಸುದ್ದಿ

ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಶಾಕ್: ಮನೆಯಿಂದ ಮೊದಲು ಇಶಾನಿ ಔಟ್​, ಮತ್ತೊಂದು ವಿಕೆಟ್‌ ಯಾರದ್ದು?

ಸತತ ನಾಮಿನೇಷನ್​ನಿಂದ ಪಾರಾಗಿದ್ದ ಇಶಾನಿ 6ನೇ ವಾರದಲ್ಲಿ ಉಳಿದುಕೊಳ್ಳುವಲ್ಲಿ ವಿಫಲವಾಗಿದ್ದು, ಶಾಕಿಂಗ್​ ಡಬಲ್​ ಎಲಿಮಿನೇಷನ್​ನಲ್ಲಿ ಇದೀಗ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿಯಾಗಿದ್ದಾರೆ.

ಬೆಂಗಳೂರು: ಸತತ ನಾಮಿನೇಷನ್​ನಿಂದ ಪಾರಾಗಿದ್ದ ಇಶಾನಿ 6ನೇ ವಾರದಲ್ಲಿ ಉಳಿದುಕೊಳ್ಳುವಲ್ಲಿ ವಿಫಲವಾಗಿದ್ದು, ಶಾಕಿಂಗ್​ ಡಬಲ್​ ಎಲಿಮಿನೇಷನ್​ನಲ್ಲಿ ಇದೀಗ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿಯಾಗಿದ್ದಾರೆ.

ಕಳೆದ ವಾರ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಒಂದಷ್ಟು ಹೈಡ್ರಾಮಾಗಳಿಂದ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿರಲಿಲ್ಲ. ವರ್ತೂರ್ ಸಂತೋಷ್‌ ಎಲಿಮಿನೇಟ್‌ ಆಗದಿದ್ದರೂ, ನಾನು ಹೊರಹೋಗಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಎಲಿಮಿನೇಷನ್‌ ಆಗಿರಲಿಲ್ಲ. ಇದೀಗ ಡಬಲ್‌ ಶಾಕ್‌ ಎಂಬಂತೆ ಇಬ್ಬರನ್ನು ಎಲಿಮಿನೇಷನ್‌ ಮಾಡಲಾಗುತ್ತಿದೆ. ಆ ಪೈಕಿ ಶನಿವಾರ ಇಶಾನಿ ಮನೆಯಿಂದ ಹೊರಬಂದಿದ್ದಾರೆ.

ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಮನೆಯ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿದ್ದು, ಎಂದಿನಂತೆ ತಮ್ಮ ಖಡಕ್​ ಶೈಲಿಯಲ್ಲೇ ಸುದೀಪ್ ಅರ್ಥ ಮಾಡಿಸಿದರು.

ಭಾಗ್ಯಶ್ರೀ ವಿರುದ್ಧ ಸ್ನೇಹಿತ್​ ನೀಡಿದ್ದ ಹೇಳಿಕೆಯನ್ನು ಎಲ್ಲರ ಮುಂದೆ ಹೇಳುವಂತೆ ಹೇಳಿ, ಬುದ್ದಿ ಮಾತುಗಳನ್ನು ತಿಳಿ ಹೇಳಿದರು. ಬಳಿಕ ನಗುವಿಗಿಂತಲೂ ಹೆಚ್ಚು ಬಿಸಿ ಬಿಸಿ ಚರ್ಚೆಯನ್ನು ಮುನ್ನೆಲೆಗೆ ತಂದ ಸುದೀಪ್​, ತಕ್ಷಣವೇ ನಾಮಿನೇಷನ್​ ಸಾಲಿಗೆ ಬಂದು ಎಲಿಮಿನೇಟ್ ಆದವರ ಹೆಸರನ್ನು ಘೋಷಣೆ​ ಮಾಡಿಯೇ ಬಿಟ್ಟರು. ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು.

ಈ ವೇಳೆ ಮೆಲ್ಲನೇ ಎದ್ದು ನಿಂತುಕೊಂಡ ಇಶಾನಿಗೆ “ನಿಜ. ನಿಮ್ಮ ಪಯಣ ಬಿಗ್‌ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್” ಎಂದು ಸುದೀಪ್ ಹೇಳಿದರು.

ಇಂದು ನಡೆಯುವ ಎಪಿಸೋಡ್‌ನಲ್ಲಿ ಮತ್ತೊಬ್ಬರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ಇಂದಿನ ಸಂಚಿಕೆಯಲ್ಲಿ ಕಿಚ್ಚನ ಸಂವಾದ ನಡೆಯಲಿದೆ. ಇದೀಗ ಹೊರಬರುವ ಮತ್ತೊಬ್ಬ ಸ್ಪರ್ಧಿ ಯಾರು ಎಂಬುದನ್ನು ತಿಳಿಯಲು ವೀಕ್ಷಕರು ಕುತೂಹಲದಿಂದ ಕಾಯತೊಡಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT