ಒಲವೇ ಮಂದಾರ 2 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಎಸ್‌ಆರ್ ಪಾಟೀಲ್ ನಿರ್ದೇಶನದ ವಿಶಿಷ್ಟ ಪ್ರೇಮಕಥೆಯ 'ಒಲವೇ ಮಂದಾರ 2' ಬಿಡುಗಡೆಗೆ ಸಿದ್ಧ

2011ರಲ್ಲಿ ತೆರೆಕಂಡಿದ್ದ ನಿರ್ದೇಶಕ ಜಯತೀರ್ಥ ಅವರ ಚೊಚ್ಚಲ ಸಿನಿಮಾ 'ಒಲವೇ ಮಂದಾರ' ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಸಿನಿಮಾದ ಹಾಡುಗಳು ಜನಪ್ರಿಯವಾಗಿದ್ದವು. ಇದೀಗ ಸೆಪ್ಟೆಂಬರ್ 15 ರಂದು ತೆರೆಗೆ ಬರಲಿರುವ 'ಒಲವೇ ಮಂದಾರ 2' ಚಿತ್ರದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲು ನಿರ್ದೇಶಕ ಎಸ್‌ಆರ್ ಪಾಟೀಲ್ ಸಜ್ಜಾಗಿದ್ದಾರೆ.

2011ರಲ್ಲಿ ತೆರೆಕಂಡಿದ್ದ ನಿರ್ದೇಶಕ ಜಯತೀರ್ಥ ಅವರ ಚೊಚ್ಚಲ ಸಿನಿಮಾ 'ಒಲವೇ ಮಂದಾರ' ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಸಿನಿಮಾದ ಹಾಡುಗಳು ಜನಪ್ರಿಯವಾಗಿದ್ದವು. ಇದೀಗ ಸೆಪ್ಟೆಂಬರ್ 15 ರಂದು ತೆರೆಗೆ ಬರಲಿರುವ 'ಒಲವೇ ಮಂದಾರ 2' ಚಿತ್ರದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲು ನಿರ್ದೇಶಕ ಎಸ್‌ಆರ್ ಪಾಟೀಲ್ ಸಜ್ಜಾಗಿದ್ದಾರೆ.

'ಈ ಪ್ರಪಂಚದಲ್ಲಿ ಪ್ರೀತಿಯನ್ನು ತಪ್ಪಾಗಿ ತಿಳಿದಿರುವ ಪೋಷಕರು, ಪ್ರೀತಿ ಮಾಡುವ ಮಕ್ಕಳನ್ನು ಅಪರಾಧ ಮಾಡಿದವರಂತೆ ನೋಡುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳನ್ನು ಇನ್ನಷ್ಟು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ. ಆದರೆ, ಮಕ್ಕಳ ಆಯ್ಕೆಯನ್ನು ಒಪ್ಪಿಕೊಳ್ಳಬೇಕು ಎನ್ನುವ ಮಹತ್ವದ ವಿಚಾರದ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ. ನಿಜವಾದ ಪ್ರೀತಿಗೆ ಯಾವುದೇ ಗಡಿಗಳಿಲ್ಲ, ಮತ್ತು ಹೆತ್ತವರು ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವವರೆಗೂ ಅವರನ್ನು ಒಪ್ಪಿಸುತ್ತಲೇ ಇರಬೇಕು ಎನ್ನುವ ಸಂದೇಶ ಚಿತ್ರದ ಹೃದಯಭಾಗದಲ್ಲಿದೆ' ಎನ್ನುತ್ತಾರೆ ನಿರ್ದೇಶಕರು.

ಈ ಚಿತ್ರವು ಜಯತೀರ್ಥ ಅವರ ಒಲವೇ ಮಂದಾರ ಸಿನಿಮಾದ ಮುಂದುವರಿದ ಭಾಗವಲ್ಲ. ಇದೊಂದು ಸಂಪೂರ್ಣ ಭಿನ್ನ ಸಿನಿಮಾ ಆಗಿದೆ. ಆದಾಗ್ಯೂ, ನಿರ್ದೇಶಕರು ಹಿಂದಿನ ಚಿತ್ರವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ, ಈ ಚಲನಚಿತ್ರವನ್ನು ಪ್ರತ್ಯೇಕಿಸುವುದು ಅದರ ವಿಶಿಷ್ಟ ಕಥೆ ಎಂದು ಒತ್ತಿಹೇಳುತ್ತಾರೆ.

ಇದು 'ಕಮರೊಟ್ಟು ಚೆಕ್ ಪೋಸ್ಟ್' ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ ಸನತ್ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. 

ರಮೇಶ್ ಮರಗೋಲು ನಿರ್ಮಾಣದ ಒಲವೇ ಮಂದಾರ 2 ಚಿತ್ರಕ್ಕೆ ಡಾ. ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಸನತ್ ಜೊತೆಗೆ, ಪ್ರಜ್ಞಾ ಭಟ್, ಅನುಪಾ ಸತೀಶ್, ಹಿರಿಯ ನಟಿ ಭವ್ಯಾ, ಡಿಂಗ್ರಿ ನಾಗರಾಜ್, ಮನು ಮತ್ತು ಶಿವಾನಂದ್ ಸಿಂದಗಿ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT