ಛೂ ಮಂತರ್ ಚಿತ್ರದ ಟೈಟಲ್ ಟ್ರ್ಯಾಕ್‌ ಅನ್ನು ಬಿಡುಗಡೆ ಮಾಡಿದ ನಟ ರವಿಚಂದ್ರನ್ 
ಸಿನಿಮಾ ಸುದ್ದಿ

50 ನಿಮಿಷಗಳ ವಿಎಫ್‌ಎಕ್ಸ್‌ನೊಂದಿಗೆ 'ಛೂ ಮಂತರ್' ಸಿನಿಮಾ ಕಣ್ಣಿಗೆ ದೃಶ್ಯ ಹಬ್ಬವಾಗಲಿದೆ: ನಿರ್ದೇಶಕ ನವನೀತ್

ಶರಣ್ ನಾಯಕನಾಗಿ ನಟಿಸಿರುವ ನವನೀತ್ ನಿರ್ದೇಶನದ ಮುಂಬರುವ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನಟ ರವಿಚಂದ್ರನ್ ಬಿಡುಗಡೆ ಮಾಡಿದರು. 

ಶರಣ್ ನಾಯಕನಾಗಿ ನಟಿಸಿರುವ ನವನೀತ್ ನಿರ್ದೇಶನದ ಮುಂಬರುವ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನಟ ರವಿಚಂದ್ರನ್ ಬಿಡುಗಡೆ ಮಾಡಿದರು. 

ನಟರಾದ ಶರಣ್, ಚಿಕ್ಕಣ್ಣ ಮತ್ತು ನಟಿ ಅದಿತಿ ಪ್ರಭುದೇವ ಅವರೊಂದಿಗೆ ಸಾಕಷ್ಟು ನೃತ್ಯಗಾರರನ್ನು ಒಳಗೊಂಡಿರುವ ಈ ಹಾಡನ್ನು ಚಂದನ್ ಶೆಟ್ಟಿ ಸಂಯೋಜಿಸಿದ್ದಾರೆ. ವಿಜಯ್ ಈಶ್ವರ್ ಸಾಹಿತ್ಯ ಬರೆದಿದ್ದು, ದರ್ಶಿನಿ ಅವರ ನೃತ್ಯ ಸಂಯೋಜನೆ ಇದೆ. ಚಿತ್ರದ ಹಿನ್ನೆಲೆ ಸಂಗೀತವನ್ನು ಅವಿನಾಶ್ ಆರ್ ಬಸುತ್ಕರ್ ಸಂಯೋಜಿಸಿದ್ದಾರೆ.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್, ಶರಣ್‌ ಅವರ ಪ್ರತಿ ಚಿತ್ರಗಳಲ್ಲಿ ಕನಿಷ್ಠ ಎರಡು ಉತ್ತಮ ಹಾಡುಗಳಿವೆ. ಅದೇ ರೀತಿ ಛೂ ಮಂತರ್ ಚಿತ್ರದಲ್ಲಿಯೂ ಉತ್ತಮ ಹಾಡುಗಳಿವೆ ಎಂದರು. 

ಹಾಸ್ಯನಟನಿಂದ ನಾಯಕನಾಗಿ ವೃತ್ತಿಜೀವನದ ಬದಲಾವಣೆಯನ್ನು ನೆನಪಿಸಿಕೊಂಡ ಶರಣ್, 'ರವಿಚಂದ್ರನ್ ಅವರು ನನ್ನನ್ನು ಮೊದಲು ನಾಯಕನಾಗುವಂತೆ ಪ್ರೇರೇಪಿಸಿದರು ಮತ್ತು ಅವರು ಸಲಹೆ ನೀಡಿದ ಎರಡು ವರ್ಷಗಳಲ್ಲಿಯೇ ನಾನು ನಾಯಕನಾಗಿ ನಟಿಸಿದೆ' ಎಂದು ಬಹಿರಂಗಪಡಿಸಿದರು.

ಚಿತ್ರವನ್ನು ಮಾನಸ ಮತ್ತು ತರುಣ್ ಶಿವಪ್ಪ ನಿರ್ಮಿಸಿದ್ದು, ಚಿತ್ರಕ್ಕೆ 'ಛೂ ಮಂತರ್' ಎಂಬ ಶೀರ್ಷಿಕೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂಚಿಸಿದರು. ಇದು ಕಂಟೆಂಟ್‌ಗೆ ತುಂಬಾ ಸೂಕ್ತವಾಗಿದೆ ಎಂದರು.

ನವನೀತ್ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, ಸಿನಿಮಾ ಸದ್ಯ ಪೋಸ್ಟ್-ಪ್ರೊಡಕ್ಷನ್‌ ಹಂತದಲ್ಲಿದ್ದು, ಗಮನಾರ್ಹ ವಿಎಫ್‌ಎಕ್ಸ್‌ ಅನ್ನು ಒಳಗೊಂಡಿದೆ. 'ನಾವು ಚಿತ್ರದಲ್ಲಿ 50 ನಿಮಿಷಗಳ ವಿಎಫ್‌ಎಕ್ಸ್ ಅನ್ನು ಸಂಯೋಜಿಸಿದ್ದೇವೆ. ಇದನ್ನು ಮೂರು ವಿಭಿನ್ನ ಕಂಪನಿಗಳು ನಿರ್ವಹಿಸಿವೆ. ಚಿತ್ರವು ಅಸಾಮಾನ್ಯ ಘಟನೆಗಳು ಮತ್ತು ಪ್ರೇತಾತ್ಮದ ಸುತ್ತ ಸುತ್ತುವುದರಿಂದ, ಹಾರರ್ ವಾತಾವರಣವು ಸಿನಿಮಾದ ಹೈಲೈಟ್ ಆಗಿರುತ್ತದೆ. ಇದು ಪ್ರೇಕ್ಷಕರ ಸಿನಿಮಾ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ದೃಶ್ಯದ ಹಬ್ಬವಾಗಿರುತ್ತದೆ. ಚಿತ್ರ ಬಿಡುಗಡೆಯು VFX ನ ಪ್ರಗತಿಯನ್ನು ಅವಲಂಬಿಸಿರುತ್ತದೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT