ಛೂ ಮಂತರ್ ಚಿತ್ರದ ಟೈಟಲ್ ಟ್ರ್ಯಾಕ್‌ ಅನ್ನು ಬಿಡುಗಡೆ ಮಾಡಿದ ನಟ ರವಿಚಂದ್ರನ್ 
ಸಿನಿಮಾ ಸುದ್ದಿ

50 ನಿಮಿಷಗಳ ವಿಎಫ್‌ಎಕ್ಸ್‌ನೊಂದಿಗೆ 'ಛೂ ಮಂತರ್' ಸಿನಿಮಾ ಕಣ್ಣಿಗೆ ದೃಶ್ಯ ಹಬ್ಬವಾಗಲಿದೆ: ನಿರ್ದೇಶಕ ನವನೀತ್

ಶರಣ್ ನಾಯಕನಾಗಿ ನಟಿಸಿರುವ ನವನೀತ್ ನಿರ್ದೇಶನದ ಮುಂಬರುವ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನಟ ರವಿಚಂದ್ರನ್ ಬಿಡುಗಡೆ ಮಾಡಿದರು. 

ಶರಣ್ ನಾಯಕನಾಗಿ ನಟಿಸಿರುವ ನವನೀತ್ ನಿರ್ದೇಶನದ ಮುಂಬರುವ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನಟ ರವಿಚಂದ್ರನ್ ಬಿಡುಗಡೆ ಮಾಡಿದರು. 

ನಟರಾದ ಶರಣ್, ಚಿಕ್ಕಣ್ಣ ಮತ್ತು ನಟಿ ಅದಿತಿ ಪ್ರಭುದೇವ ಅವರೊಂದಿಗೆ ಸಾಕಷ್ಟು ನೃತ್ಯಗಾರರನ್ನು ಒಳಗೊಂಡಿರುವ ಈ ಹಾಡನ್ನು ಚಂದನ್ ಶೆಟ್ಟಿ ಸಂಯೋಜಿಸಿದ್ದಾರೆ. ವಿಜಯ್ ಈಶ್ವರ್ ಸಾಹಿತ್ಯ ಬರೆದಿದ್ದು, ದರ್ಶಿನಿ ಅವರ ನೃತ್ಯ ಸಂಯೋಜನೆ ಇದೆ. ಚಿತ್ರದ ಹಿನ್ನೆಲೆ ಸಂಗೀತವನ್ನು ಅವಿನಾಶ್ ಆರ್ ಬಸುತ್ಕರ್ ಸಂಯೋಜಿಸಿದ್ದಾರೆ.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್, ಶರಣ್‌ ಅವರ ಪ್ರತಿ ಚಿತ್ರಗಳಲ್ಲಿ ಕನಿಷ್ಠ ಎರಡು ಉತ್ತಮ ಹಾಡುಗಳಿವೆ. ಅದೇ ರೀತಿ ಛೂ ಮಂತರ್ ಚಿತ್ರದಲ್ಲಿಯೂ ಉತ್ತಮ ಹಾಡುಗಳಿವೆ ಎಂದರು. 

ಹಾಸ್ಯನಟನಿಂದ ನಾಯಕನಾಗಿ ವೃತ್ತಿಜೀವನದ ಬದಲಾವಣೆಯನ್ನು ನೆನಪಿಸಿಕೊಂಡ ಶರಣ್, 'ರವಿಚಂದ್ರನ್ ಅವರು ನನ್ನನ್ನು ಮೊದಲು ನಾಯಕನಾಗುವಂತೆ ಪ್ರೇರೇಪಿಸಿದರು ಮತ್ತು ಅವರು ಸಲಹೆ ನೀಡಿದ ಎರಡು ವರ್ಷಗಳಲ್ಲಿಯೇ ನಾನು ನಾಯಕನಾಗಿ ನಟಿಸಿದೆ' ಎಂದು ಬಹಿರಂಗಪಡಿಸಿದರು.

ಚಿತ್ರವನ್ನು ಮಾನಸ ಮತ್ತು ತರುಣ್ ಶಿವಪ್ಪ ನಿರ್ಮಿಸಿದ್ದು, ಚಿತ್ರಕ್ಕೆ 'ಛೂ ಮಂತರ್' ಎಂಬ ಶೀರ್ಷಿಕೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೂಚಿಸಿದರು. ಇದು ಕಂಟೆಂಟ್‌ಗೆ ತುಂಬಾ ಸೂಕ್ತವಾಗಿದೆ ಎಂದರು.

ನವನೀತ್ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, ಸಿನಿಮಾ ಸದ್ಯ ಪೋಸ್ಟ್-ಪ್ರೊಡಕ್ಷನ್‌ ಹಂತದಲ್ಲಿದ್ದು, ಗಮನಾರ್ಹ ವಿಎಫ್‌ಎಕ್ಸ್‌ ಅನ್ನು ಒಳಗೊಂಡಿದೆ. 'ನಾವು ಚಿತ್ರದಲ್ಲಿ 50 ನಿಮಿಷಗಳ ವಿಎಫ್‌ಎಕ್ಸ್ ಅನ್ನು ಸಂಯೋಜಿಸಿದ್ದೇವೆ. ಇದನ್ನು ಮೂರು ವಿಭಿನ್ನ ಕಂಪನಿಗಳು ನಿರ್ವಹಿಸಿವೆ. ಚಿತ್ರವು ಅಸಾಮಾನ್ಯ ಘಟನೆಗಳು ಮತ್ತು ಪ್ರೇತಾತ್ಮದ ಸುತ್ತ ಸುತ್ತುವುದರಿಂದ, ಹಾರರ್ ವಾತಾವರಣವು ಸಿನಿಮಾದ ಹೈಲೈಟ್ ಆಗಿರುತ್ತದೆ. ಇದು ಪ್ರೇಕ್ಷಕರ ಸಿನಿಮಾ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ದೃಶ್ಯದ ಹಬ್ಬವಾಗಿರುತ್ತದೆ. ಚಿತ್ರ ಬಿಡುಗಡೆಯು VFX ನ ಪ್ರಗತಿಯನ್ನು ಅವಲಂಬಿಸಿರುತ್ತದೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

SCROLL FOR NEXT