ಕಾಟೇರ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಸಿನಿಮಾ ಯಾವುದೇ ವ್ಯಕ್ತಿಯ ಸ್ಥಾನಮಾನವನ್ನು ಮೀರಿಸುವ ವಿಶಾಲವಾದ ಮತ್ತು ಪ್ರಭಾವಶಾಲಿ ಕ್ಷೇತ್ರ: ದರ್ಶನ್

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕಾಟೇರ ಟಾಕಿ ಭಾಗಗಳು ಪೂರ್ಣಗೊಂಡಿವೆ. ದಸರಾ ಆಸುಪಾಸಿನಲ್ಲಿ ಬಿಡುಗಡೆಯಾಗುವ ಊಹಾಪೊಹಗಳಿದ್ದು ದರ್ಶನ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕಾಟೇರ ಟಾಕಿ ಭಾಗಗಳು ಪೂರ್ಣಗೊಂಡಿವೆ. ದಸರಾ ಆಸುಪಾಸಿನಲ್ಲಿ ಬಿಡುಗಡೆಯಾಗುವ ಊಹಾಪೊಹಗಳಿದ್ದು ದರ್ಶನ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಇನ್ನು ನಿರ್ಮಾಪಕರು ಕೇವಲ ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದೆ ಎಂದು ಹೇಳಿದ್ದಾರೆ. ಅದು ಮುಗಿದ ನಂತರ, ಅವರು ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಾರೆ. ಪ್ರಸ್ತುತ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಈ ಮಧ್ಯೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರದ ಕುರಿತಂತೆ ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ನಾಯಕಿ ಆರಾಧನಾ, ನಟರಾದ ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಅವಿನಾಶ್ ತಾರಾಬಳಗವಿದ್ದು ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣವಿದ್ದು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಇನ್ನು ಚಿತ್ರತಂಡ ಸಹ ಚಿತ್ರದ ಬಗ್ಗೆ ಕೆಲವು ಮಾತುಗಳನ್ನು ಹಂಚಿಕೊಂಡಿದೆ.

ರಾಕ್‌ಲೈನ್ ವೆಂಕಟೇಶ್ ಅವರು ಯೋಜನೆ ಪ್ರಾರಂಭವಾದಾಗಿನಿಂದಲೂ ಸಂತಸದಲ್ಲಿದ್ದಾರೆ. ಅತ್ಯುತ್ತಮ ಕಥಾಹಂದರ, ದರ್ಶನ್ ನಂತರ ಸ್ಟಾರ್ ನಟ ಪಾತ್ರ, ನಿರ್ದೇಶಕರ ಪರಾಕ್ರಮ, ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿ ಮತ್ತು ತಂಡದ ಗಮನಾರ್ಹ ಪ್ರಯಾಣವನ್ನು ಅವರು ಶ್ಲಾಘಿಸಿದರು. ಕಾರ್ಯಕ್ರಮದ ಕುರಿತಂತೆ ಮಾತನಾಡಿದ ತರುಣ್ ಸುಧೀರ್, ನಾಯಕನ ಮತ್ತು ನಿರ್ಮಾಪಕರ ಅವಿರತ ಬೆಂಬಲವಿಲ್ಲದೆ ಈ ಚಿತ್ರ ನಿರ್ಮಾಣ ಅಸಾಧ್ಯ ಎಂದು ಒಪ್ಪಿಕೊಂಡರು.

ಕಾಟೇರ ತಂಡ

'ಸಿನಿಮಾ ಒಂದು ವಿಶಾಲವಾದ ಮತ್ತು ಪ್ರಭಾವಶಾಲಿ ಕ್ಷೇತ್ರವಾಗಿದೆ. ಅದು ಯಾವುದೇ ವ್ಯಕ್ತಿಯ ಸ್ಥಾನಮಾನವನ್ನು ಮೀರಿಸುತ್ತದೆ. ಈ ಯೋಜನೆಗಾಗಿ ತಾವು ತಮ್ಮ ಕಾಲ್‌ಶೀಟ್‌ನ 71 ದಿನಗಳನ್ನು ಮೀಸಲಿಟ್ಟಿದ್ದು ಸಾಮಾನ್ಯ ಶೂಟಿಂಗ್ ಪೂರ್ಣಗೊಳ್ಳಲು ಸುಮಾರು 15 ದಿನಗಳು ತೆಗೆದುಕೊಂಡಿದೆ ಎಂದು ದರ್ಶನ್ ಹೇಳಿದರು. ಈ ಪ್ರಯತ್ನವು ಒಬ್ಬ ವ್ಯಕ್ತಿಯ ಪ್ರದರ್ಶನವಲ್ಲ ಬದಲಿಗೆ ಸಾಮೂಹಿಕ ಪ್ರಯತ್ನವಾಗಿತ್ತು. ಪ್ರತಿ ಪಾತ್ರವರ್ಗ ಮತ್ತು ತಂಡದ ಸದಸ್ಯರು ತಮ್ಮ ಹೃದಯ ಮತ್ತು ಆತ್ಮವನ್ನು ಈ ಯೋಜನೆಗೆ ಧಾರೆ ಎರೆದಿದ್ದಾರೆ ಎಂದು ದರ್ಶನ್ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ನೀನಾಸಂ ಥಿಯೇಟರ್‌ನಿಂದ ಉದ್ಭವಿಸಿದ ನಟನೆಯಲ್ಲಿ ಕೆಲವು ಕಲಾವಿದರ ಬಲವಾದ ಅಡಿಪಾಯವನ್ನು ಶ್ಲಾಘಿಸಿದರು.

ನಾಸ್ಟಾಲ್ಜಿಕ್ 1970ರ ದಶಕದ ಕಥಾಹಂದರ ಹೊಂದಿರುವ ಕಾಟೇರಾ, ಸತ್ಯ ಘಟನೆಯನ್ನು ಆಧರಿಸಿ, ಕ್ರಾಂತಿಕಾರಿ ನಾಟಕ ಎಂದು ಭರವಸೆ ನೀಡುತ್ತದೆ. ಚೌಕಾ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರಾಬರ್ಟ್ ಚಿತ್ರದಲ್ಲಿ ದರ್ಶನ್ ಮತ್ತು ತರುಣ್ ಜೋಡಿ ಒಂದಾಗಿದ್ದು ಇದೀಗ ಕಾರೇಟ ಚಿತ್ರ ಮೂರನೇ ಸಹಯೋಗವನ್ನು ಗುರುತಿಸುತ್ತದೆ. ಕಾಟೇರ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT