ಸಿಲ್ಕ್ ಸ್ಮಿತಾ 
ಸಿನಿಮಾ ಸುದ್ದಿ

ಸಿಲ್ಕ್ ಸ್ಮಿತಾ ಶವದೊಂದಿಗೆ ಸೆಕ್ಸ್: ತಮಿಳು ನಟ ಬೈಲ್ವಾನ್ ರಂಗನಾಥ್ ಸ್ಫೋಟಕ ಹೇಳಿಕೆ

ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವನ್ನು ಆಳಿದ್ದ ಜನಪ್ರಿಯ ಮಾದಕ ನಟಿ ಸಿಲ್ಕ್ ಸ್ಮಿತಾ ಸತ್ತಾಗ ಆಕೆಯ ಶವದೊಂದಿಗೆ ಸೆಕ್ಸ್ ಮಾಡಿರಬಹುದು ಎಂದು ತಮಿಳಿನ ಹಿರಿಯ ನಟ ಹಾಗೂ ಸಿನಿ ಪತ್ರಕರ್ತ ಬೈಲ್ವಾನ್ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಚೆನ್ನೈ: ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವನ್ನು ಆಳಿದ್ದ ಜನಪ್ರಿಯ ಮಾದಕ ನಟಿ ಸಿಲ್ಕ್ ಸ್ಮಿತಾ ಸತ್ತಾಗ ಆಕೆಯ ಶವದೊಂದಿಗೆ ಸೆಕ್ಸ್ ಮಾಡಿರಬಹುದು ಎಂದು ತಮಿಳಿನ ಹಿರಿಯ ನಟ ಹಾಗೂ ಸಿನಿ ಪತ್ರಕರ್ತ ಬೈಲ್ವಾನ್ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ಅಂದರೆ ಸೆಪ್ಟೆಂಬರ್​ 23 ನಟಿ ಸಿಲ್ಕ್​ ಸ್ಮಿತಾ ಅವರ ಪುಣ್ಯತಿಥಿಯಾಗಿದ್ದು, ನಟಿಯ ಪುಣ್ಯತಿಥಿಯ ದಿನದಂದು ಕಾಲಿವುಡ್​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರು ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಈಗ ವ್ಯಾಪಕ ವೈರಲ್ ಆಗುತ್ತಿದೆ. ಈ ಹಳೆಯ ಸಂದರ್ಶನದಲ್ಲಿ ಸಿಲ್ಕ್​ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದೊಂದಿಗೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಶಾಕಿಂಗ್​ ಸತ್ಯವನ್ನು ಬೈಲ್ವಾನ್​ ರಂಗನಾಥನ್​ ತಿಳಿಸಿದ್ದಾರೆ.

"ಸಾಮಾನ್ಯವಾಗಿ ಶವಾಗಾರದಲ್ಲಿರುವ ನೌಕರರು ಮದ್ಯ ಸೇವಿಸಿ ಕೆಲಸ ಮಾಡುತ್ತಾರೆ. ಹೀಗಾಗಿ ಶವಾಗಾರದಲ್ಲಿ ನಿಲ್ಲಲು ಆಗುವುದಿಲ್ಲ. ಇಂದಿನಂತೆ ಅಂದು ಯಾವ ಶವಾಗಾರಗಳು ಸ್ವಚ್ಛವಾಗಿರಲಿಲ್ಲ. ಆಸ್ಪತ್ರೆಯಲ್ಲಿ ಅದೇ ಹೆಚ್ಚು ದುರ್ವಾಸನೆ ಬೀರುವ ಸ್ಥಳವೂ ಹೌದು. ಇನ್ನು ಅಲ್ಲಿ ಕೆಲಸ ಮಾಡುವವರಿಗೆ ಮೈಮೇಲೆ ಅರಿವೆ ಇರುವುದಿಲ್ಲ.. ಕೆಲಸ ಪ್ರಾರಂಭವಾಗುತ್ತಲೇ ಕುಡಿದ ಅಮಲಿನಲ್ಲಿ ತೆಲಾಡುತ್ತಿರುತ್ತಾರೆ.

ಹೀಗಿರುವಾಗ ಸಿಲ್ಕ್ ಸ್ಮಿತಾಳ ಕಣ್ಮನ ಸೆಳೆಯುವ ಸೌಂದರ್ಯ ಕಂಡು ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಸುಮ್ಮನಿರುತ್ತಾರೆ? ಅವರು ತಮ್ಮನ್ನೇ ತಾವು ಮರೆತು ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರಬಹುದು ಅಥವಾ ಆ ಅವಕಾಶಗಳು ಹೆಚ್ಚಿವೆ. ಪತ್ರಕರ್ತನಾಗಿ ಕೆಲಸ ಮಾಡುತ್ತಿರುವಾಗ ಸ್ವತಃ ನಾನೇ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ನೋಡಿದ್ದೆ. ಅಲ್ಲಿ ನನಗೆ ಐದು ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ನಿಂತುಕೊಳ್ಳಲಾಗಲಿಲ್ಲ" ಎಂದು ಹೇಳಿದ್ದಾರೆ. 

ಆದರೆ ಇದೀಗ ಬೈಲ್ವಾನ್​ ರಂಗನಾಥನ್​ ಆಡಿರುವ ಮಾತುಗಳು ಕಾಲಿವುಡ್‌ನಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಅಂದಹಾಗೆ ಬೈಲ್ವಾನ್ ರಂಗನಾಥನ್ (Bailwan Ranganathan) ಅವರು  ಗಾಸಿಪ್​ಗಳನ್ನು ಸೃಷ್ಟಿ ಮಾಡುವಲ್ಲಿ ಎತ್ತಿದ ಕೈ. ಹಲವು ಸಂದರ್ಭದಲ್ಲಿ  ಕಲಾವಿದರು ಇವರ ವಿರುದ್ಧ ಮುಗಿಬಿದ್ದದ್ದೂ ಇದೆ. ಇದೀಗ ನಟಿ ಸಿಲ್ಕ್​ ಸ್ಮಿತಾ ಅವರ ಕುರಿತು ಹೇಳಿರುವ ಮಾತುಗಳು ಪುನಃ ಮುನ್ನೆಲೆಗೆ ಬಂದಿರುವುದು ಸಂಚಲನ ಸೃಷ್ಟಿಸುತ್ತಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಳ್ಳಾರಿ ಬ್ಯಾನರ್ ಗಲಭೆ: ಶಾಸಕ ನಾರಾ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ FIR

ಬಳ್ಳಾರಿ ಗಲಾಟೆ: ಆರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿದ ಕಾಂಗ್ರೆಸ್

ನೈಸ್‌ ಯೋಜನೆ: ಡಿ.ಕೆ ಶಿವಕುಮಾರ್ ಆಕ್ಷೇಪ ಸ್ವಾಗತಾರ್ಹ; ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡೋಣ- ದೇವೇಗೌಡ

20 ಸಾವಿರಕ್ಕೆ ಬಿಹಾರ ಯುವತಿಯರು ವಿವಾಹಕ್ಕೆ ಲಭ್ಯ: ಉತ್ತರಾಖಂಡ ಸಚಿವೆಯ ಪತಿ ವಿವಾದಾತ್ಮಕ ಹೇಳಿಕೆ

ಅಕ್ರಮ ಬಾಂಗ್ಲಾ ವಲಸಿಗರು ಬೆಂಗಳೂರಿಗೆ ಹೇಗೆ ಬಂದರು? ಮೋದಿ- ಅಮಿತ್ ಶಾ ಏನು ಮಾಡುತ್ತಿದ್ದಾರೆ? ರಾಮಲಿಂಗಾ ರೆಡ್ಡಿ ಪ್ರಶ್ನೆ

SCROLL FOR NEXT