ನಟ ಡ್ಯಾನಿ ಕುಟ್ಟಪ್ಪ 
ಸಿನಿಮಾ ಸುದ್ದಿ

ಸ್ಕಂದ ನನ್ನ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಲಿದೆ: ಡ್ಯಾನಿ ಕುಟ್ಟಪ್ಪ

ಸ್ಕಂದ ನನ್ನ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ನಟ ಡ್ಯಾನಿ ಕುಟ್ಟಪ್ಪ ಹೇಳಿದ್ದಾರೆ.

ಬೆಂಗಳೂರು: ಸ್ಕಂದ ನನ್ನ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ನಟ ಡ್ಯಾನಿ ಕುಟ್ಟಪ್ಪ ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 'ಫೈರಿ ಐಯ್ಡ್' ಅಥವಾ 'ಕೆಂಪುಕಣ್ಣಿನ' ನಟ ಎಂದು ಕರೆಯಲ್ಪಡುವ ಡ್ಯಾನಿ ಕುಟ್ಟಪ್ಪ ತೆಲುಗು ಚಿತ್ರಗಳಾದ ಬಾಹುಬಲಿ ಮತ್ತು ಗದ್ದಲಕೊಂಡ ಗಣೇಶ್‌ನಲ್ಲಿ ನಟಿಸಿದ್ದಾರೆ. ಈಗ, ಅವರು ಈಗ ತಮ್ಮ ಮುಂದಿನ ಪ್ರಾಜೆಕ್ಟ್ ಸ್ಕಂದ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಬೋಯಪಾಟಿ ಶ್ರೀನು ನಿರ್ದೇಶನದ ಕಮರ್ಷಿಯಲ್ ಎಂಟರ್‌ಟೈನರ್‌ನಲ್ಲಿ ರಾಮ್ ಪೋತಿನೇನಿ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿದ್ದಾರೆ ಮತ್ತು ಡ್ಯಾನಿ ಕುಟ್ಟಪ್ಪ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಬೋಯಪಾಟಿ ಶ್ರೀನು ಅವರು ತಮ್ಮ ಪಾತ್ರಕ್ಕೆ ನಟನ ಸಮರ್ಪಣೆ ಮತ್ತು ಅವರು ನಟನೆಯಲ್ಲಿ ಸೇರಿಸುವ ಸೂಕ್ಷ್ಮ ವ್ಯತ್ಯಾಸಗಳನ್ನು ಶ್ಲಾಘಿಸಿದ್ದಾರೆ. ನಿರ್ದೇಶಕರು ಚಿಕ್ಕ ವಿವರಗಳನ್ನು ಸಹ ತಲುಪಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಸ್ಕಂದ ಚಿತ್ರದಲ್ಲಿ, ಡ್ಯಾನಿ ಕುಟ್ಟಪ್ಪ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು, ಚಿತ್ರ ತಯಾರಕರ ಪ್ರಕಾರ, ಈ ಪಾತ್ರವು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ಆಗಿರಬಹುದು ಎಂದಿದ್ದಾರೆ.

ಕನ್ನಡ ಚಲನಚಿತ್ರೋದ್ಯಮದಲ್ಲಿ ಹೊಸ ಮತ್ತು ಅನುಭವಿ ಪ್ರತಿಭೆಗಳೊಂದಿಗೆ ನಟಸಿ ಸೈ ಎನಿಸಿಕೊಂಡಿರುವ ಡ್ಯಾನಿ ಕುಟ್ಟಪ್ಪ ಪಾತ್ರಗಳ ಚಿತ್ರಣಕ್ಕೆ ಸಂಬಂಧಿಸಿದ ಚರ್ಚೆಗಳ ಮಹತ್ವವನ್ನು ಒತ್ತಿಹೇಳುತ್ತಾರೆ. "ನಿರ್ದೇಶಕ ಮತ್ತು ನಟನ ನಡುವಿನ ಸಂಭಾಷಣೆಗಳು ಕೇವಲ ಪಾತ್ರವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಸುತ್ತ ಸುತ್ತುತ್ತಿರಬಾರದು. ಆದರೆ ಪಾತ್ರವನ್ನು ಹೇಗೆ ಚಿತ್ರಿಸಬೇಕು ಮತ್ತು ಅದನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು ಎಂದು ನಾನು ನಂಬುತ್ತೇನೆ. ಅಂತಹ ಆಳವಾದ ಚರ್ಚೆಗಳು, ಪರದೆಯ ಮೇಲೆ ಪಾತ್ರದ ಹೆಚ್ಚು ಆಳವಾದ ಚಿತ್ರಣಕ್ಕೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT