ಕಾಂತಾರ ಚಿತ್ರದ ದೃಶ್ಯ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು  
ಸಿನಿಮಾ ಸುದ್ದಿ

'ಕಾಂತಾರ ಚಾಪ್ಟರ್-1' ಶೂಟಿಂಗ್: ಕುಂದಾಪುರದಲ್ಲಿ ಅತಿದೊಡ್ಡ ಅತ್ಯಾಧುನಿಕ ಸೆಟ್ ನಿರ್ಮಾಣ

ಮೊದಲ ಹಂತದ ಚಿತ್ರೀಕರಣ 20 ದಿನಗಳ ಕಾಲ ನಡೆಯಲಿದ್ದು, ನಿರ್ಮಾಣ ತಂಡ ತಾತ್ಕಾಲಿಕವಾಗಿ ಕುಂದಾಪುರದಲ್ಲಿ ಬಿಡಾರ ಹೂಡಿದೆ.

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರ ಬಹು ನಿರೀಕ್ಷಿತ ಕಾಂತಾರ ಅಧ್ಯಾಯ 1 ಚಿತ್ರದ ಚಿತ್ರೀಕರಣ ಆರಂಭವಾಗಿದೆ. ವಿಜಯ್ ಕಿರಗಂದೂರು ನೇತೃತ್ವದ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ, ಚಲುವೇಗೌಡ ಮತ್ತು ಅವರ ತಂಡದೊಂದಿಗೆ ದೊಡ್ಡ ಮಟ್ಟದಲ್ಲಿ ತೆರೆದುಕೊಳ್ಳಲು ಸಿದ್ಧವಾಗಿದೆ.

ಇದೇ ವಾರ ಪೂರ್ಣ ಪ್ರಮಾಣದ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಹಂತದ ಚಿತ್ರೀಕರಣ 20 ದಿನಗಳ ಕಾಲ ನಡೆಯಲಿದ್ದು, ನಿರ್ಮಾಣ ತಂಡ ತಾತ್ಕಾಲಿಕವಾಗಿ ಕುಂದಾಪುರದಲ್ಲಿ ಬಿಡಾರ ಹೂಡಿದೆ. ಹೊರಾಂಗಣ ದೃಶ್ಯಗಳನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದ್ದರೂ ಸಹ, ಕುಂದಾಪುರದ ಸುಂದರವಾದ ಕರಾವಳಿಯ ಸನ್ನಿವೇಶದಲ್ಲಿ ಒಳಾಂಗಣ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.

ಕಾಂತಾರ ಅಧ್ಯಾಯ 1 ಚಿತ್ರ 2022ರಲ್ಲಿ ತೆರೆಗೆ ಬಂದ ಹಿಟ್ ಚಲನಚಿತ್ರ ಕಾಂತಾರದ ಮುಂದುವರಿದ ಭಾಗವಾಗಿದೆ. ದೊಡ್ಡ-ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಕುಂದಾಪುರದಲ್ಲಿ ಬೃಹತ್ ಕಸ್ಟಮ್-ನಿರ್ಮಿತ ಸೆಟ್ ನ್ನು ಹಾಕಲಾಗಿದೆ. ಇದು ರಾಮೋಜಿ ಫಿಲ್ಮ್ ಸಿಟಿಯ ನಂತರದ ಅತಿದೊಡ್ಡ ಸೆಟ್‌ಗಳಲ್ಲಿ ಒಂದಾಗಿದೆ. ಈ 200x200 ಅಡಿ ಒಳಾಂಗಣ ಸೆಟ್ ಹವಾನಿಯಂತ್ರಣ, ಡಬ್ಬಿಂಗ್ ಸ್ಟುಡಿಯೋ ಮತ್ತು ಎಡಿಟಿಂಗ್ ಸೂಟ್ ನ್ನು ಒಳಗೊಂಡು ತಂತ್ರಜ್ಞಾನವಾಗಿ ಅದ್ಭುತವಾಗಿದೆ. ಚಿತ್ರ ನಿರ್ಮಾಣಕ್ಕೆ ಬೇಕಾಗುವ ಎಲ್ಲವೂ ಲಭ್ಯವಾಗುತ್ತಿದೆ.

ಪ್ರಸ್ತುತ 600 ಬಡಗಿಗಳನ್ನು ಮತ್ತು ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನ ತಂತ್ರಜ್ಞರು ಕುಂದಾಪುರಕ್ಕೆ ಸ್ಥಳಾಂತರಗೊಂಡ ಸ್ಟಂಟ್ ಮಾಸ್ಟರ್‌ಗಳನ್ನು ಸಜ್ಜುಗೊಳಿಸಲಾಗುತ್ತದೆ. ನಟರು ಕಲರಿಪಯಟ್ಟು ಮತ್ತು ಕುದುರೆ ಸವಾರಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ, ಎಲ್ಲಾ ದೃಶ್ಯಗಳನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡುವಾಗ - ಎಲ್ಲವೂ ಒಂದೇ ಸೂರಿನಡಿ ಅನುಕೂಲಕರವಾಗಿ ನಡೆಯುತ್ತಿದೆ.

ಕಾಂತಾರ ಅಧ್ಯಾಯ 1 ರ ಕಲಾತ್ಮಕ ಅಗತ್ಯಗಳನ್ನು ಪೂರೈಸುವುದರ ಹೊರತಾಗಿ, ಪ್ರೊಡಕ್ಷನ್ ಹೌಸ್ ಮೂಲಸೌಕರ್ಯಗಳ ಮೇಲೆ ಗಮನ ಹರಿಸುತ್ತಿದೆ. ಈ ಸೆಟ್ ಸೌಲಭ್ಯವು ಶಾಶ್ವತ ನೆಲೆಯಾಗಿ ಭವಿಷ್ಯದ ಯೋಜನೆಗಳಿಗೆ ಬಳಸಿಕೊಳ್ಳಲು ಚಿತ್ರತಂಡ ನೋಡುತ್ತಿದೆ. ಇತರ ಸಿನಿಮಾಗಳ ನಿರ್ಮಾಣಕ್ಕೆ ಮನೆಗಳಿಗೆ ಮುಂದಿನ ದಿನಗಳಲ್ಲಿ ಬಾಡಿಗೆಗೆ ಸಹ ಲಭ್ಯವಿರುತ್ತದೆ.

ಕರ್ನಾಟಕದ ಕರಾವಳಿ ಪ್ರದೇಶವು ಚಲನಚಿತ್ರ ನಿರ್ಮಾಪಕರ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿದೆ, ಅದರ ರಮಣೀಯ ಸೌಂದರ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅನೇಕ ಚಿತ್ರಗಳನ್ನು ಚಿತ್ರಿಸಲಾಗುತ್ತಿದೆ. ಇಲ್ಲಿನ ಮೂಲಸೌಕರ್ಯ ಮತ್ತು ಸ್ಥಳೀಯ ಪ್ರತಿಭೆಗಳಿಗೆ ಅವಕಾಶಗಳನ್ನು ಉತ್ತೇಜಿಸುವ ಮೂಲಕ ಅದರ ಬೆಳವಣಿಗೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

ಕಾಂತಾರ ಅಧ್ಯಾಯ 1 ಕ್ಕೆ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ ಸ್ಕ್ರಿಪ್ಟ್ ಬರೆದಿದ್ದಾರೆ, ಬರಹಗಾರರಾದ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಸ್ಕ್ರಿಪ್ಟ್‌ಗೆ ಕೊಡುಗೆ ನೀಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಮೂಲ ಕಾಂತಾರದ ಕೆಲವು ನಟರು ಮುಂದುವರಿದ ಭಾಗದಲ್ಲಿ ಕೂಡ ಇರಲಿದ್ದು, ಪೂರ್ಣ ಪಾತ್ರವರ್ಗವನ್ನು ಇನ್ನೂ ಅಧಿಕೃತವಾಗಿ ತಂಡ ಘೋಷಿಸಬೇಕಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

SCROLL FOR NEXT