ಸಿರಿ ರವಿಕುಮಾರ್ 
ಸಿನಿಮಾ ಸುದ್ದಿ

'ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಜನ ಹೇಳುವ ಮಹಿಳಾ ಕಥೆಗಳ ಅಗತ್ಯವಿದೆ' ಸಿರಿ ರವಿಕುಮಾರ್

'ಸ್ವಾತಿ ಮುತ್ತು ಮಳೆ ಹನಿಯೇ' ಚಿತ್ರದಲ್ಲಿನ ಪ್ರೇರಣಾ ಪಾತ್ರಕ್ಕಾಗಿ 69 ನೇ ಫಿಲಂಫೇರ್ ಅವಾರ್ಡ್ಸ್ ಸೌತ್ ನಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಕಲಾವಿದೆ (ಮಹಿಳೆ) ಪ್ರಶಸ್ತಿಯನ್ನು ಸಿರಿ ರವಿಕುಮಾರ್ ಪಡೆದಿದ್ದಾರೆ.

ಬೆಂಗಳೂರು: ನಮಗೆ ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಜನ ಹೇಳುವ ಮಹಿಳಾ ಚಿತ್ರಗಳ ಅಗತ್ಯವಿದೆ ಎಂದು ಫಿಲಂಫೇರ್ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ನಟಿ ಸಿರಿ ರವಿಕುಮಾರ್ ಹೇಳಿದ್ದಾರೆ.

'ಸ್ವಾತಿ ಮುತ್ತು ಮಳೆ ಹನಿಯೇ' ಚಿತ್ರದಲ್ಲಿನ ಪ್ರೇರಣಾ ಪಾತ್ರಕ್ಕಾಗಿ 69 ನೇ ಫಿಲಂಫೇರ್ ಅವಾರ್ಡ್ಸ್ ಸೌತ್ ನಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಕಲಾವಿದೆ (ಮಹಿಳೆ) ಪ್ರಶಸ್ತಿಯನ್ನು ಸಿರಿ ರವಿಕುಮಾರ್ ಪಡೆದಿದ್ದಾರೆ.

ಚಿತ್ರದಲ್ಲಿನ ತನ್ನ ಪಾತ್ರ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಅನುಭವ ಹಂಚಿಕೊಂಡ ಅವರು, ಪ್ರೇರಣಾಳ ಪಾತ್ರ ವಿವಿಧ ಛಾಯೆ ಹೊಂದಿದ್ದು, ಅದು ಯಾರನ್ನಾದರೂ ಮನುಷ್ಯನನ್ನಾಗಿ ಮಾಡುತ್ತದೆ. ಭಾರತೀಯ ಸಿನಿಮಾದಲ್ಲಿ ಮಹಿಳೆಯರನ್ನು ತೋರಿಸುವ ವಿಷಯದಲ್ಲಿ ಇನ್ನೂ ಸ್ವಲ್ಪ ಬದಲಾವಣೆಯಾಗಬೇಕಿದೆ ಎಂದರು.

ಅವಳು ಯಾವುದರಲ್ಲಿ ಕೆಟ್ಟವಳು, ಅವಳಿಗೆ ಏನು ಕೆಲಸ ಮಾಡಬೇಕು, ಏನು ಕೆಲಸ ಮಾಡಬಾರದು ಮತ್ತು ಅವಳು ಆ ಕೆಲಸ ಮಾಡುತ್ತಾಳೆಯೇ ಅಥವಾ ಇತರರಿಗೆ ಕೆಲಸ ಮಾಡುವುದಿಲ್ಲ ಎಂದು ಸಹ ನೀವು ತೋರಿಸಬೇಕು ಎಂದು ರವಿಕುಮಾರ್ ಪಿಟಿಐಗೆ ತಿಳಿಸಿದರು.

ಸ್ವಾತಿ ಮುತ್ತು ಮಳೆ ಹನಿಯೇ ಚಿತ್ರದಲ್ಲಿನ ಪ್ರೇರಣಾ ಪಾತ್ರ ಸಿಕ್ಕಿದ್ದು, ತನ್ನ ಅದೃಷ್ಟ. ಮೊದಲ ಚಿತ್ರ 'ಸಕುಟುಂಬ ಸಮೇತ'ದಲ್ಲಿ ಹುಡುಗಿ ಪಾತ್ರ, ಆಕೆಯ ಗೊಂದಲ ಚಿತ್ರದ ಕೇಂದ್ರಬಿಂದುವಾಗಿತ್ತು. ಜೀವನದಲ್ಲಿ ತನಗೆ ಏನು ಬೇಕು ಎಂಬ ಬಗ್ಗೆ ಶ್ರದ್ದಾಗೆ ಗೊಂದಲವಿತ್ತು ಎಂದು ಹೇಳುವ ರವಿಕುಮಾರ್, ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯಾ ಕಾಸರವಳ್ಳಿ ಅವರ ಚೊಚ್ಚಲ ನಿರ್ದೇಶನದ 'ಹರಿಕಥಾ ಪ್ರಸಂಗ'ಮೂಲಕ ತನ್ನ ಸಿನಿಮಾ ವೃತ್ತಿಜೀವನ ಆರಂಭಿಸಿದರು.

ಅದೊಂದು ಸಣ್ಣ ಪಾತ್ರವಾಗಿತ್ತು. ನನ್ನ ಗುರುಗಳೂ ಆಗಿರುವ ಪ್ರಕಾಶ್ ಬೆಳವಾಡಿ ನನ್ನನ್ನು ಆ ಚಿತ್ರಕ್ಕೆ ಶಿಫಾರಸು ಮಾಡಿದರು. ಶೂಟಿಂಗ್ ಗೆ ಹೋಗಿದಾಗ ಚಿತ್ರಗಳ ಶೂಟಿಂಗ್ ಹೇಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ 10 ದಿನಗಳ ನಂತರ ಶೂಟಿಂಗ್‌ ಮುಗಿಸಿ ಹಿಂತಿರುಗಿದಾಗಲೂ ಸಿನಿಮಾ ನಿರ್ಮಾಣ ಎಂದರೆ ಏನೆಂದು ಅರ್ಥವಾಗಿರಲಿಲ್ಲ ಎನ್ನುತ್ತಾರೆ ಸಿರಿ ರವಿಕುಮಾರ್ .

ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ನಿರ್ದೇಶಕ ಪಿ ಶೇಷಾದ್ರಿ ಅವರ 'ಬೇಟಿ' (2017) ಮತ್ತು ಹೇಮಂತ್ ರಾವ್ ಅವರ 'ಕವಲುದಾರಿ' (2019) ಒಂದೆರಡು ವೆಬ್ ಚಿತ್ರಗಳಲ್ಲಿ ಅಭಿನಯ ನಂತರ ಚಿತ್ರರಂಗದ ಕಡೆಗೆ ಒಲವು ಹೆಚ್ಚಾಯಿತು. ಆ ಪಾತ್ರಗಳಿಗೆ ಜೀವ ತುಂಬಿದ್ದು ಅದ್ಭುತ ಎನಿಸಿತು. ಈ ಎಲ್ಲಾ ಪ್ರಾಜೆಕ್ಟ್‌ಗಳ ಭಾಗವಾಗಿರುವುದರಿಂದ ನಾನು ಯಾವುದೇ ಪಾತ್ರವನ್ನು ಮಾಡಬಲ್ಲೆ ಎಂಬ ವಿಶ್ವಾಸವನ್ನು ನೀಡಿತು. 'ಸಕುಟುಂಬ ಸಮೇತ' ನಂತರ ಹಿಂತಿರುಗಿ ನೋಡಲಿಲ್ಲ ಎಂದು ಅವರು ಹೇಳಿದರು."ನೀವು ನನ್ನನ್ನು ಕೇಳಿದರೆ, ನಿಜವಾಗಿಯೂ ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಮಹಿಳಾ ಕಥೆ ಕೇಳುವ ಚಿತ್ರಗಳ ಅಗತ್ಯವಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT