ಸಿರಿ ರವಿಕುಮಾರ್ 
ಸಿನಿಮಾ ಸುದ್ದಿ

'ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಜನ ಹೇಳುವ ಮಹಿಳಾ ಕಥೆಗಳ ಅಗತ್ಯವಿದೆ' ಸಿರಿ ರವಿಕುಮಾರ್

'ಸ್ವಾತಿ ಮುತ್ತು ಮಳೆ ಹನಿಯೇ' ಚಿತ್ರದಲ್ಲಿನ ಪ್ರೇರಣಾ ಪಾತ್ರಕ್ಕಾಗಿ 69 ನೇ ಫಿಲಂಫೇರ್ ಅವಾರ್ಡ್ಸ್ ಸೌತ್ ನಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಕಲಾವಿದೆ (ಮಹಿಳೆ) ಪ್ರಶಸ್ತಿಯನ್ನು ಸಿರಿ ರವಿಕುಮಾರ್ ಪಡೆದಿದ್ದಾರೆ.

ಬೆಂಗಳೂರು: ನಮಗೆ ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಜನ ಹೇಳುವ ಮಹಿಳಾ ಚಿತ್ರಗಳ ಅಗತ್ಯವಿದೆ ಎಂದು ಫಿಲಂಫೇರ್ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ನಟಿ ಸಿರಿ ರವಿಕುಮಾರ್ ಹೇಳಿದ್ದಾರೆ.

'ಸ್ವಾತಿ ಮುತ್ತು ಮಳೆ ಹನಿಯೇ' ಚಿತ್ರದಲ್ಲಿನ ಪ್ರೇರಣಾ ಪಾತ್ರಕ್ಕಾಗಿ 69 ನೇ ಫಿಲಂಫೇರ್ ಅವಾರ್ಡ್ಸ್ ಸೌತ್ ನಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಕಲಾವಿದೆ (ಮಹಿಳೆ) ಪ್ರಶಸ್ತಿಯನ್ನು ಸಿರಿ ರವಿಕುಮಾರ್ ಪಡೆದಿದ್ದಾರೆ.

ಚಿತ್ರದಲ್ಲಿನ ತನ್ನ ಪಾತ್ರ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಅನುಭವ ಹಂಚಿಕೊಂಡ ಅವರು, ಪ್ರೇರಣಾಳ ಪಾತ್ರ ವಿವಿಧ ಛಾಯೆ ಹೊಂದಿದ್ದು, ಅದು ಯಾರನ್ನಾದರೂ ಮನುಷ್ಯನನ್ನಾಗಿ ಮಾಡುತ್ತದೆ. ಭಾರತೀಯ ಸಿನಿಮಾದಲ್ಲಿ ಮಹಿಳೆಯರನ್ನು ತೋರಿಸುವ ವಿಷಯದಲ್ಲಿ ಇನ್ನೂ ಸ್ವಲ್ಪ ಬದಲಾವಣೆಯಾಗಬೇಕಿದೆ ಎಂದರು.

ಅವಳು ಯಾವುದರಲ್ಲಿ ಕೆಟ್ಟವಳು, ಅವಳಿಗೆ ಏನು ಕೆಲಸ ಮಾಡಬೇಕು, ಏನು ಕೆಲಸ ಮಾಡಬಾರದು ಮತ್ತು ಅವಳು ಆ ಕೆಲಸ ಮಾಡುತ್ತಾಳೆಯೇ ಅಥವಾ ಇತರರಿಗೆ ಕೆಲಸ ಮಾಡುವುದಿಲ್ಲ ಎಂದು ಸಹ ನೀವು ತೋರಿಸಬೇಕು ಎಂದು ರವಿಕುಮಾರ್ ಪಿಟಿಐಗೆ ತಿಳಿಸಿದರು.

ಸ್ವಾತಿ ಮುತ್ತು ಮಳೆ ಹನಿಯೇ ಚಿತ್ರದಲ್ಲಿನ ಪ್ರೇರಣಾ ಪಾತ್ರ ಸಿಕ್ಕಿದ್ದು, ತನ್ನ ಅದೃಷ್ಟ. ಮೊದಲ ಚಿತ್ರ 'ಸಕುಟುಂಬ ಸಮೇತ'ದಲ್ಲಿ ಹುಡುಗಿ ಪಾತ್ರ, ಆಕೆಯ ಗೊಂದಲ ಚಿತ್ರದ ಕೇಂದ್ರಬಿಂದುವಾಗಿತ್ತು. ಜೀವನದಲ್ಲಿ ತನಗೆ ಏನು ಬೇಕು ಎಂಬ ಬಗ್ಗೆ ಶ್ರದ್ದಾಗೆ ಗೊಂದಲವಿತ್ತು ಎಂದು ಹೇಳುವ ರವಿಕುಮಾರ್, ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯಾ ಕಾಸರವಳ್ಳಿ ಅವರ ಚೊಚ್ಚಲ ನಿರ್ದೇಶನದ 'ಹರಿಕಥಾ ಪ್ರಸಂಗ'ಮೂಲಕ ತನ್ನ ಸಿನಿಮಾ ವೃತ್ತಿಜೀವನ ಆರಂಭಿಸಿದರು.

ಅದೊಂದು ಸಣ್ಣ ಪಾತ್ರವಾಗಿತ್ತು. ನನ್ನ ಗುರುಗಳೂ ಆಗಿರುವ ಪ್ರಕಾಶ್ ಬೆಳವಾಡಿ ನನ್ನನ್ನು ಆ ಚಿತ್ರಕ್ಕೆ ಶಿಫಾರಸು ಮಾಡಿದರು. ಶೂಟಿಂಗ್ ಗೆ ಹೋಗಿದಾಗ ಚಿತ್ರಗಳ ಶೂಟಿಂಗ್ ಹೇಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ 10 ದಿನಗಳ ನಂತರ ಶೂಟಿಂಗ್‌ ಮುಗಿಸಿ ಹಿಂತಿರುಗಿದಾಗಲೂ ಸಿನಿಮಾ ನಿರ್ಮಾಣ ಎಂದರೆ ಏನೆಂದು ಅರ್ಥವಾಗಿರಲಿಲ್ಲ ಎನ್ನುತ್ತಾರೆ ಸಿರಿ ರವಿಕುಮಾರ್ .

ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ನಿರ್ದೇಶಕ ಪಿ ಶೇಷಾದ್ರಿ ಅವರ 'ಬೇಟಿ' (2017) ಮತ್ತು ಹೇಮಂತ್ ರಾವ್ ಅವರ 'ಕವಲುದಾರಿ' (2019) ಒಂದೆರಡು ವೆಬ್ ಚಿತ್ರಗಳಲ್ಲಿ ಅಭಿನಯ ನಂತರ ಚಿತ್ರರಂಗದ ಕಡೆಗೆ ಒಲವು ಹೆಚ್ಚಾಯಿತು. ಆ ಪಾತ್ರಗಳಿಗೆ ಜೀವ ತುಂಬಿದ್ದು ಅದ್ಭುತ ಎನಿಸಿತು. ಈ ಎಲ್ಲಾ ಪ್ರಾಜೆಕ್ಟ್‌ಗಳ ಭಾಗವಾಗಿರುವುದರಿಂದ ನಾನು ಯಾವುದೇ ಪಾತ್ರವನ್ನು ಮಾಡಬಲ್ಲೆ ಎಂಬ ವಿಶ್ವಾಸವನ್ನು ನೀಡಿತು. 'ಸಕುಟುಂಬ ಸಮೇತ' ನಂತರ ಹಿಂತಿರುಗಿ ನೋಡಲಿಲ್ಲ ಎಂದು ಅವರು ಹೇಳಿದರು."ನೀವು ನನ್ನನ್ನು ಕೇಳಿದರೆ, ನಿಜವಾಗಿಯೂ ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಮಹಿಳಾ ಕಥೆ ಕೇಳುವ ಚಿತ್ರಗಳ ಅಗತ್ಯವಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT