ಸಿರಿ ರವಿಕುಮಾರ್ 
ಸಿನಿಮಾ ಸುದ್ದಿ

'ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಜನ ಹೇಳುವ ಮಹಿಳಾ ಕಥೆಗಳ ಅಗತ್ಯವಿದೆ' ಸಿರಿ ರವಿಕುಮಾರ್

'ಸ್ವಾತಿ ಮುತ್ತು ಮಳೆ ಹನಿಯೇ' ಚಿತ್ರದಲ್ಲಿನ ಪ್ರೇರಣಾ ಪಾತ್ರಕ್ಕಾಗಿ 69 ನೇ ಫಿಲಂಫೇರ್ ಅವಾರ್ಡ್ಸ್ ಸೌತ್ ನಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಕಲಾವಿದೆ (ಮಹಿಳೆ) ಪ್ರಶಸ್ತಿಯನ್ನು ಸಿರಿ ರವಿಕುಮಾರ್ ಪಡೆದಿದ್ದಾರೆ.

ಬೆಂಗಳೂರು: ನಮಗೆ ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಜನ ಹೇಳುವ ಮಹಿಳಾ ಚಿತ್ರಗಳ ಅಗತ್ಯವಿದೆ ಎಂದು ಫಿಲಂಫೇರ್ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ನಟಿ ಸಿರಿ ರವಿಕುಮಾರ್ ಹೇಳಿದ್ದಾರೆ.

'ಸ್ವಾತಿ ಮುತ್ತು ಮಳೆ ಹನಿಯೇ' ಚಿತ್ರದಲ್ಲಿನ ಪ್ರೇರಣಾ ಪಾತ್ರಕ್ಕಾಗಿ 69 ನೇ ಫಿಲಂಫೇರ್ ಅವಾರ್ಡ್ಸ್ ಸೌತ್ ನಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಕಲಾವಿದೆ (ಮಹಿಳೆ) ಪ್ರಶಸ್ತಿಯನ್ನು ಸಿರಿ ರವಿಕುಮಾರ್ ಪಡೆದಿದ್ದಾರೆ.

ಚಿತ್ರದಲ್ಲಿನ ತನ್ನ ಪಾತ್ರ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಅನುಭವ ಹಂಚಿಕೊಂಡ ಅವರು, ಪ್ರೇರಣಾಳ ಪಾತ್ರ ವಿವಿಧ ಛಾಯೆ ಹೊಂದಿದ್ದು, ಅದು ಯಾರನ್ನಾದರೂ ಮನುಷ್ಯನನ್ನಾಗಿ ಮಾಡುತ್ತದೆ. ಭಾರತೀಯ ಸಿನಿಮಾದಲ್ಲಿ ಮಹಿಳೆಯರನ್ನು ತೋರಿಸುವ ವಿಷಯದಲ್ಲಿ ಇನ್ನೂ ಸ್ವಲ್ಪ ಬದಲಾವಣೆಯಾಗಬೇಕಿದೆ ಎಂದರು.

ಅವಳು ಯಾವುದರಲ್ಲಿ ಕೆಟ್ಟವಳು, ಅವಳಿಗೆ ಏನು ಕೆಲಸ ಮಾಡಬೇಕು, ಏನು ಕೆಲಸ ಮಾಡಬಾರದು ಮತ್ತು ಅವಳು ಆ ಕೆಲಸ ಮಾಡುತ್ತಾಳೆಯೇ ಅಥವಾ ಇತರರಿಗೆ ಕೆಲಸ ಮಾಡುವುದಿಲ್ಲ ಎಂದು ಸಹ ನೀವು ತೋರಿಸಬೇಕು ಎಂದು ರವಿಕುಮಾರ್ ಪಿಟಿಐಗೆ ತಿಳಿಸಿದರು.

ಸ್ವಾತಿ ಮುತ್ತು ಮಳೆ ಹನಿಯೇ ಚಿತ್ರದಲ್ಲಿನ ಪ್ರೇರಣಾ ಪಾತ್ರ ಸಿಕ್ಕಿದ್ದು, ತನ್ನ ಅದೃಷ್ಟ. ಮೊದಲ ಚಿತ್ರ 'ಸಕುಟುಂಬ ಸಮೇತ'ದಲ್ಲಿ ಹುಡುಗಿ ಪಾತ್ರ, ಆಕೆಯ ಗೊಂದಲ ಚಿತ್ರದ ಕೇಂದ್ರಬಿಂದುವಾಗಿತ್ತು. ಜೀವನದಲ್ಲಿ ತನಗೆ ಏನು ಬೇಕು ಎಂಬ ಬಗ್ಗೆ ಶ್ರದ್ದಾಗೆ ಗೊಂದಲವಿತ್ತು ಎಂದು ಹೇಳುವ ರವಿಕುಮಾರ್, ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯಾ ಕಾಸರವಳ್ಳಿ ಅವರ ಚೊಚ್ಚಲ ನಿರ್ದೇಶನದ 'ಹರಿಕಥಾ ಪ್ರಸಂಗ'ಮೂಲಕ ತನ್ನ ಸಿನಿಮಾ ವೃತ್ತಿಜೀವನ ಆರಂಭಿಸಿದರು.

ಅದೊಂದು ಸಣ್ಣ ಪಾತ್ರವಾಗಿತ್ತು. ನನ್ನ ಗುರುಗಳೂ ಆಗಿರುವ ಪ್ರಕಾಶ್ ಬೆಳವಾಡಿ ನನ್ನನ್ನು ಆ ಚಿತ್ರಕ್ಕೆ ಶಿಫಾರಸು ಮಾಡಿದರು. ಶೂಟಿಂಗ್ ಗೆ ಹೋಗಿದಾಗ ಚಿತ್ರಗಳ ಶೂಟಿಂಗ್ ಹೇಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ 10 ದಿನಗಳ ನಂತರ ಶೂಟಿಂಗ್‌ ಮುಗಿಸಿ ಹಿಂತಿರುಗಿದಾಗಲೂ ಸಿನಿಮಾ ನಿರ್ಮಾಣ ಎಂದರೆ ಏನೆಂದು ಅರ್ಥವಾಗಿರಲಿಲ್ಲ ಎನ್ನುತ್ತಾರೆ ಸಿರಿ ರವಿಕುಮಾರ್ .

ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ನಿರ್ದೇಶಕ ಪಿ ಶೇಷಾದ್ರಿ ಅವರ 'ಬೇಟಿ' (2017) ಮತ್ತು ಹೇಮಂತ್ ರಾವ್ ಅವರ 'ಕವಲುದಾರಿ' (2019) ಒಂದೆರಡು ವೆಬ್ ಚಿತ್ರಗಳಲ್ಲಿ ಅಭಿನಯ ನಂತರ ಚಿತ್ರರಂಗದ ಕಡೆಗೆ ಒಲವು ಹೆಚ್ಚಾಯಿತು. ಆ ಪಾತ್ರಗಳಿಗೆ ಜೀವ ತುಂಬಿದ್ದು ಅದ್ಭುತ ಎನಿಸಿತು. ಈ ಎಲ್ಲಾ ಪ್ರಾಜೆಕ್ಟ್‌ಗಳ ಭಾಗವಾಗಿರುವುದರಿಂದ ನಾನು ಯಾವುದೇ ಪಾತ್ರವನ್ನು ಮಾಡಬಲ್ಲೆ ಎಂಬ ವಿಶ್ವಾಸವನ್ನು ನೀಡಿತು. 'ಸಕುಟುಂಬ ಸಮೇತ' ನಂತರ ಹಿಂತಿರುಗಿ ನೋಡಲಿಲ್ಲ ಎಂದು ಅವರು ಹೇಳಿದರು."ನೀವು ನನ್ನನ್ನು ಕೇಳಿದರೆ, ನಿಜವಾಗಿಯೂ ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಮಹಿಳಾ ಕಥೆ ಕೇಳುವ ಚಿತ್ರಗಳ ಅಗತ್ಯವಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT