ತೋಳ ಹಾಡಿನ ಪೋಸ್ಟರ್ 
ಸಿನಿಮಾ ಸುದ್ದಿ

ನಟನೆಯಂತೆಯೇ ಆಲ್ಬಂ ಸಾಂಗ್‌ನಲ್ಲೂ ಅರ್ಜುನ್ ಕಿಶೋರ್ ಚಂದ್ರ ಮಿಂಚು; 'ತೋಳ' ಮೂಲಕ ಎಂಟ್ರಿ

ಸಿನಿಮಾದಲ್ಲಿ ನಟನೆಯನ್ನು ಇಷ್ಟಪಡುವಂತೆಯೇ ನಟ ಅರ್ಜುನ್ ಕಿಶೋರ್ ಚಂದ್ರ ಅವರು ಮ್ಯೂಸಿಕ್ ಆಲ್ಬಂಗಳಲ್ಲಿಯೂ ತಮ್ಮ ಛಾಪು ಮೂಡಿಸುವುದನ್ನು ಇಷ್ಟಪಡುತ್ತಾರೆ. ಸದ್ಯ ಅವರ ಮುಂಬರುವ ಚಿತ್ರ 'ಮಾಯೆ & ಕಂಪನಿ' ಬಿಡುಗಡೆಗೆ ಕಾಯುತ್ತಿರುವ ಅರ್ಜುನ್, ತಮ್ಮ ಮುಂದಿನ ಸಿಂಗಲ್ ತೋಳಾಗೆ ಸಜ್ಜಾಗುತ್ತಿದ್ದಾರೆ. 

ಅರ್ಜುನ್ ಕಿಶೋರ್ ಚಂದ್ರ ಸಿನಿಮಾದಲ್ಲಿ ನಟನೆಯನ್ನು ಇಷ್ಟಪಡುವಂತೆಯೇ ನಟ ಅರ್ಜುನ್ ಕಿಶೋರ್ ಚಂದ್ರ ಅವರು ಮ್ಯೂಸಿಕ್ ಆಲ್ಬಂಗಳಲ್ಲಿಯೂ ತಮ್ಮ ಛಾಪು ಮೂಡಿಸುವುದನ್ನು ಇಷ್ಟಪಡುತ್ತಾರೆ. ನಟ ಸದ್ಯ ಐರ್ಲೆಂಡ್‌ನಲ್ಲಿ ವೃತ್ತಿಪರ ಉದ್ಯೋಗದ ನಡುವೆಯೇ ಕ್ರಿಯೇಟಿವ್ ಆರ್ಟ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ಅವರ ಮುಂಬರುವ ಚಿತ್ರ 'ಮಾಯೆ & ಕಂಪನಿ' ಬಿಡುಗಡೆಗೆ ಕಾಯುತ್ತಿರುವ ಅರ್ಜುನ್, ತಮ್ಮ ಮುಂದಿನ ಸಿಂಗಲ್ ತೋಳಾಗೆ ಸಜ್ಜಾಗುತ್ತಿದ್ದಾರೆ. ಕೆನಡಾದಲ್ಲಿ ಎನ್‌ಆರ್‌ಐ ಆಗಿರುವ ಟೆಕ್ಕಿ ದೀಪಕ್ ಆರ್ ನಿರ್ಮಿಸಿರುವ ಈ ಹಾಡನ್ನು ಡಬ್ಲಿನ್‌ನಲ್ಲಿ ಚಿತ್ರೀಕರಿಸಲಾಗುವುದು ಮತ್ತು ಪ್ರಸಿದ್ಧ ರಾಪರ್ ಎಸ್‌.ಐ.ಡಿ ಸಂಗೀತ ಸಂಯೋಜಿಸಿದ್ದಾರೆ.

'ಸೇರು ನನ್ನ ತೋಳಲ್ಲಿ, Trippyaana ಮತ್ತು ಎತ್ತರದಿಂದ ಪ್ರಾರಂಭಿಸಿ ಸಿಂಗಲ್ಸ್‌ನ ಭಾಗವಾಗಿರುವುದನ್ನು ನಾನು ಆನಂದಿಸುತ್ತೇನೆ. ತೋಳ ನನ್ನ ನಾಲ್ಕನೇ ಸಿಂಗಲ್ ಆಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ' ಎಂದು ಈ ಹಿಂದೆ 'ನಿನ್ನ ಗುಂಗಲ್ಲಿ' ಹಾಡಿನ ಸಾಹಿತ್ಯ ರಚನೆಯ ತಂಡದ ಭಾಗವಾಗಿದ್ದ ಅರ್ಜುನ್ ಹೇಳುತ್ತಾರೆ. 

ತೋಳದ ಹಿಂದಿನ ಸ್ಫೂರ್ತಿಯ ಬಗ್ಗೆ ಮಾತನಾಡುವ ಅರ್ಜುನ್, 'ಹುಲಿಗಳು, ಸಿಂಹಗಳು ಮತ್ತು ಆನೆಗಳು ಸರ್ಕಸ್‌ನಲ್ಲಿ ತರಬೇತಿ ಪಡೆಯುತ್ತವೆ ಮತ್ತು ಪ್ರದರ್ಶನ ನೀಡುತ್ತವೆ. ಆದರೆ, ತೋಳ ಎಂದಿಗೂ ಇದನ್ನು ಮಾಡುವುದಿಲ್ಲ. ತೋಳ ನಿಜಕ್ಕೂ ಅತ್ಯಂತ ಬುದ್ಧಿವಂತ ಮತ್ತು ಹೊಂದಿಕೊಳ್ಳುವ ಪ್ರಾಣಿ, ನಿಜವಾದ ಹೋರಾಟಗಾರ ಮತ್ತು ಎಲ್ಲಾ ಹೋರಾಟಗಳನ್ನು ಎದುರಿಸಿ ಬದುಕುಳಿದಿದೆ. ಈ ಸಿಂಗಲ್ ಆ ಥೀಮ್ ಅನ್ನು ಆಧರಿಸಿದೆ' ಎಂದು ಅವರು ಹೇಳುತ್ತಾರೆ.

ಸಂದೀಪ್ ಕುಮಾರ್ ನಿರ್ದೇಶನದ ಮತ್ತು ರವೀಂದ್ರ ರಾವ್ ಅವರ ನಿರ್ಮಾಣದ ಮಾಯೆ & ಕಂಪನಿ ಚಿತ್ರತಂಡ ಸದ್ಯದಲ್ಲೇ ಚಿತ್ರಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT