ಸತ್ಯಂ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಸಂತೋಷ್ ಬಾಲರಾಜ್ ನಟನೆಯ ಸತ್ಯಂ ಚಿತ್ರದಲ್ಲಿ 'ಭೂತಾರಾಧನೆ' ಪ್ರಮುಖ ಕಥಾವಸ್ತುವಾಗಿದೆ: ನಿರ್ದೇಶಕ ಅಶೋಕ್

ಸಂತೋಷ್ ಬಾಲರಾಜ್ ಅಭಿನಯದ 'ಸತ್ಯಂ' ಚಿತ್ರವು ಸದ್ಯ ಸೆನ್ಸಾರ್ ಮಂಡಳಿಯಿಂದ ಅನುಮತಿಗಾಗಿ ಕಾಯುತ್ತಿದೆ ಮತ್ತು ಫೆಬ್ರುವರಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈಮಧ್ಯೆ, ನಿರ್ದೇಶಕ ಅಶೋಕ್ ಕಡಬ ಅವರು ತೆಲುಗು ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಗೆ ಯೋಜಿಸುತ್ತಿದ್ದಾರೆ. 

ಸಂತೋಷ್ ಬಾಲರಾಜ್ ಅಭಿನಯದ 'ಸತ್ಯಂ' ಚಿತ್ರವು ಸದ್ಯ ಸೆನ್ಸಾರ್ ಮಂಡಳಿಯಿಂದ ಅನುಮತಿಗಾಗಿ ಕಾಯುತ್ತಿದೆ ಮತ್ತು ಫೆಬ್ರುವರಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈಮಧ್ಯೆ, ನಿರ್ದೇಶಕ ಅಶೋಕ್ ಕಡಬ ಅವರು ತೆಲುಗು ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಗೆ ಯೋಜಿಸುತ್ತಿದ್ದಾರೆ. ಈ ಸಿನಿಮಾ ಭೂತಾರಾಧನೆಯ ಅಂಶಗಳನ್ನು ಒಳಗೊಂಡಿದೆ ಮತ್ತು ಸತ್ಯಂನಲ್ಲಿ ನಿರ್ಣಾಯಕ ಕಥಾವಸ್ತುವಾಗಿದೆ ಎನ್ನುತ್ತಾರೆ. 

'ಸತ್ಯಂ ಎರಡು ವಿಭಿನ್ನ ಕಾಲಘಟ್ಟಗಳ ಕಥೆಗಳನ್ನು ತೋರಿಸುತ್ತದೆ. ಭೂತಾರಾಧನೆಯ ಚಿತ್ರದಲ್ಲಿ ಅಗತ್ಯವಾದ ಅಂಶವಾಗಿ ರೂಪುಗೊಂಡಿದೆ. ಸಾಂಪ್ರದಾಯಿಕ ಕೌಟುಂಬಿಕ ನೆಲೆಯಲ್ಲಿ ಅಜ್ಜ ಮತ್ತು ಮೊಮ್ಮಗನ ನಡುವಿನ ಸಂಬಂಧದ ಸುತ್ತ ಕಥೆ ಸುತ್ತುತ್ತದೆ. ಪ್ರಾರ್ಥನೆಯ ಸಮಯದಲ್ಲಿ ತಪ್ಪು ಕಲ್ಪನೆಗಳು ಮತ್ತು ಅವಘಡಗಳು ಸಂಭವಿಸುತ್ತವೆ. ಕುಟುಂಬದ ಮುಖ್ಯಸ್ಥರು 40 ವರ್ಷಗಳ ನಂತರ ಹಳ್ಳಿಗೆ ಹಿಂದಿರುಗುತ್ತಿದ್ದಂತೆ ಕಥಾವಸ್ತುವು ತೆರೆದುಕೊಳ್ಳುತ್ತದೆ ಮತ್ತು ಎಲ್ಲವೂ ಭೂತಾರಾಧನೆಯನ್ನು ಸುತ್ತುವರೆದಿದೆ' ಎಂದು ನಿರ್ದೇಶಕರು ಹೇಳುತ್ತಾರೆ.

'ಕಾಂತಾರ ಚಿತ್ರ ಬಿಡುಗಡೆ ನಂತರ ಭೂತಾರಾಧನೆಯು ಬಹಳ ಜನಪ್ರಿಯವಾಗಿದೆ. ಆದರೆ, ಕಾಂತಾರ ಬಿಡುಗಡೆಗೆ ಮುಂಚೆಯೇ ನಾವು ಈ ನಿರ್ದಿಷ್ಟ ದೃಶ್ಯಗಳನ್ನು ಚಿತ್ರೀಕರಿಸಿದ್ದೆವು ಮತ್ತು ಇದು ನಮ್ಮ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ' ಎಂದು ಅವರು ಹೇಳುತ್ತಾರೆ.

ಚಿತ್ರದ ವಿತರಣೆಯನ್ನು ಕೆಎ ಸುರೇಶ್ ನಿರ್ವಹಿಸಲಿದ್ದಾರೆ. ಸತ್ಯಂ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ಮತ್ತು ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿದೆ. ಮಹಾಂತೇಶ್ ವಿಕೆ ಈ ಯೋಜನೆಗೆ ಬಂಡವಾಳ ಹೂಡುತ್ತಿದ್ದು, ರಂಜಿನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಸುಮನ್, ಸಯಾಜಿ ಶಿಂಧೆ, ಪವಿತ್ರ ಲೋಕೇಶ್, ಅವಿನಾಶ್ ಮತ್ತು ಮುಖ್ಯಮಂತ್ರಿ ಚಂದ್ರು ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT