ಭೀಮಾ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಭೀಮಾ' ಚಿತ್ರದ 'Boom Boom Bangalore' ಸಾಂಗ್ ಜುಲೈ 19ಕ್ಕೆ ರಿಲೀಸ್!

ಯುವ ಪ್ರತಿಭೆ ಅಶ್ವಿನಿ ಭೀಮಾ ಚಿತ್ರದಲ್ಲಿ ವಿಜಯ್ ಜೊತೆಗೆ ನಟಿಸಿದ್ದಾರೆ, ಜೊತೆಗೆ ಅನೇಕ ಯುವ ಕಲಾವಿದರು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.

ಬ್ಯಾಡ್ ಬಾಯ್ಸ್,' 'ಐ ಲವ್ ಯೂ ಕಣೆ,' ಮತ್ತು 'ಡೋಂಟ್ ವರಿ ಬೇಬಿ ಚಿನ್ನಮ್ಮ' ಹಾಡುಗಳ ಮೂಲಕ ಅಲೆ ಎಬ್ಬಿಸಿದ ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ವಿಜಯ್ ಕುಮಾರ್ ಮತ್ತೊಂದು ಹಾಡನ್ನು ಸಂಯೋಜಿಸಿದ್ದು ಶೀಘ್ರವೇ ರಿಲೀಸ್ ಮಾಡಲಿದ್ದಾರೆ.

ಬೂಮ್ ಬೂಮ್ ಬೆಂಗಳೂರು ಟ್ರ್ಯಾಕ್ ಜುಲೈ 19 ರಂದು ಅನಾವರಣಗೊಳ್ಳಲಿದೆ, ಭೀಮಾ ಚಿತ್ರವು ಆಗಸ್ಟ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ.

ಈ ಹಾಡಿನಲ್ಲಿ ನಾಗರಹೊಳೆ ಸಮೀಪದ ಬುಡಕಟ್ಟು ತಂಡದ 30 ಸದಸ್ಯರು ಹಾಡು ಹಾಡಿದ್ದಾರೆ. ಈ ಹಾಡು, ಅವರ ಆಡುಭಾಷೆಯಲ್ಲಿ, ಬೆಂಗಳೂರನ್ನು ಉಲ್ಲೇಖಿಸುತ್ತದೆ.ಈ ಹಿಂದೆ ‘ಸಲಗ’ ಚಿತ್ರದಲ್ಲಿ ಸಿದ್ದಿ ಜನಾಂಗದವರು ಹಾಡಿದ ‘ಟಿನಿಂಗ ಮಿಣಿಂಗ’ ಹಾಡು ಜನಪ್ರಿಯವಾಗಿತ್ತು. ಅದೇ ರೀತಿಯ ಹಾಡೊಂದು ‘ಭೀಮ’ ಚಿತ್ರದಲ್ಲೂ ಇದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಜಯ್‌ , ‘ಈ ಬಾರಿ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದವರು ‘ಅಮ್ಮಾಳೆ’ ಎಂಬ ವಿಶೇಷ ಹಾಡು ಹಾಡಿದ್ದಾರೆ. ‘ಲೇ ಲೇ ಮುನ್ನ ಲೇ ಲೇ..ಬೂಮ್‌ ಬೂಮ್‌ ಬೆಂಗಳೂರು’ ಎಂಬ ಸಾಲುಗಳಿರುವ ಹಾಡಿನಲ್ಲಿ ಆ ಬುಡಕಟ್ಟು ಜನಾಂಗದವರು ಬೆಂಗಳೂರಿನ ಬಗ್ಗೆ ಹೇಳುವಂತಿದೆ. ಶೀಘ್ರದಲ್ಲೇ ಈ ಹಾಡನ್ನು ರಿಲೀಸ್‌ ಮಾಡಲಿದ್ದೇವೆ. ಇನ್ನೊಂದು ಎಮೋಷನಲ್‌ ಹಾಡನ್ನು ನವೀನ್‌ ಸಜ್ಜು ಹಾಡಿದ್ದಾರೆ.

ಭೀಮಾ ಆಲ್ಬಂನ ಪ್ರತಿಯೊಂದು ಹಾಡುಗಳು ಟ್ರೆಂಡ್ ಆಗಿರ, ಜನಪ್ರಿಯ ರೀಲ್ಸ್ ಗಳಿಗೆ ದಾರಿ ಮಾಡಿಕೊಡುತ್ತಿರುವಾಗ, 'ಬೂಮ್ ಬೂಮ್ ಬೆಂಗಳೂರು' ಬಿಡುಗಡೆಯು ಭೀಮಾಗೆ ಮತ್ತೊಂದು ಹಿಟ್‌ನ ಸುಳಿವು ನೀಡುತ್ತದೆ" ಎಂದು ನಿರ್ದೇಶಕ ವಿಜಯ್ ಕುಮಾರ್ ಅಭಿಪ್ರಾಯಪಡುತ್ತಾರೆ.

ಯುವ ಪ್ರತಿಭೆ ಅಶ್ವಿನಿ ಭೀಮಾ ಚಿತ್ರದಲ್ಲಿ ವಿಜಯ್ ಜೊತೆಗೆ ನಟಿಸಿದ್ದಾರೆ, ಜೊತೆಗೆ ಅನೇಕ ಯುವ ಕಲಾವಿದರು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಇದನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದ ಯಾವುದೇ ಹಾಡುಗಳು ಅನಗತ್ಯವಲ್ಲ, ಅವೆಲ್ಲವೂ ಸಂದರ್ಭಕ್ಕೆ ಹೊಂದಿಕೆಯಾಗುತ್ತವೆ ಎಂದು ಕೃಷ್ಣ ಸಾರ್ಥಕ್ ಹೇಳುತ್ತಾರೆ, ಈ ಚಿತ್ರಕ್ಕೆ ಕರ್ನಾಟಕದಾದ್ಯಂತ ವಿತರಕರಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿದು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT