ಭೀಮಾ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಭೀಮಾ' ಚಿತ್ರದ 'Boom Boom Bangalore' ಸಾಂಗ್ ಜುಲೈ 19ಕ್ಕೆ ರಿಲೀಸ್!

ಯುವ ಪ್ರತಿಭೆ ಅಶ್ವಿನಿ ಭೀಮಾ ಚಿತ್ರದಲ್ಲಿ ವಿಜಯ್ ಜೊತೆಗೆ ನಟಿಸಿದ್ದಾರೆ, ಜೊತೆಗೆ ಅನೇಕ ಯುವ ಕಲಾವಿದರು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.

ಬ್ಯಾಡ್ ಬಾಯ್ಸ್,' 'ಐ ಲವ್ ಯೂ ಕಣೆ,' ಮತ್ತು 'ಡೋಂಟ್ ವರಿ ಬೇಬಿ ಚಿನ್ನಮ್ಮ' ಹಾಡುಗಳ ಮೂಲಕ ಅಲೆ ಎಬ್ಬಿಸಿದ ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ವಿಜಯ್ ಕುಮಾರ್ ಮತ್ತೊಂದು ಹಾಡನ್ನು ಸಂಯೋಜಿಸಿದ್ದು ಶೀಘ್ರವೇ ರಿಲೀಸ್ ಮಾಡಲಿದ್ದಾರೆ.

ಬೂಮ್ ಬೂಮ್ ಬೆಂಗಳೂರು ಟ್ರ್ಯಾಕ್ ಜುಲೈ 19 ರಂದು ಅನಾವರಣಗೊಳ್ಳಲಿದೆ, ಭೀಮಾ ಚಿತ್ರವು ಆಗಸ್ಟ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ.

ಈ ಹಾಡಿನಲ್ಲಿ ನಾಗರಹೊಳೆ ಸಮೀಪದ ಬುಡಕಟ್ಟು ತಂಡದ 30 ಸದಸ್ಯರು ಹಾಡು ಹಾಡಿದ್ದಾರೆ. ಈ ಹಾಡು, ಅವರ ಆಡುಭಾಷೆಯಲ್ಲಿ, ಬೆಂಗಳೂರನ್ನು ಉಲ್ಲೇಖಿಸುತ್ತದೆ.ಈ ಹಿಂದೆ ‘ಸಲಗ’ ಚಿತ್ರದಲ್ಲಿ ಸಿದ್ದಿ ಜನಾಂಗದವರು ಹಾಡಿದ ‘ಟಿನಿಂಗ ಮಿಣಿಂಗ’ ಹಾಡು ಜನಪ್ರಿಯವಾಗಿತ್ತು. ಅದೇ ರೀತಿಯ ಹಾಡೊಂದು ‘ಭೀಮ’ ಚಿತ್ರದಲ್ಲೂ ಇದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಜಯ್‌ , ‘ಈ ಬಾರಿ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದವರು ‘ಅಮ್ಮಾಳೆ’ ಎಂಬ ವಿಶೇಷ ಹಾಡು ಹಾಡಿದ್ದಾರೆ. ‘ಲೇ ಲೇ ಮುನ್ನ ಲೇ ಲೇ..ಬೂಮ್‌ ಬೂಮ್‌ ಬೆಂಗಳೂರು’ ಎಂಬ ಸಾಲುಗಳಿರುವ ಹಾಡಿನಲ್ಲಿ ಆ ಬುಡಕಟ್ಟು ಜನಾಂಗದವರು ಬೆಂಗಳೂರಿನ ಬಗ್ಗೆ ಹೇಳುವಂತಿದೆ. ಶೀಘ್ರದಲ್ಲೇ ಈ ಹಾಡನ್ನು ರಿಲೀಸ್‌ ಮಾಡಲಿದ್ದೇವೆ. ಇನ್ನೊಂದು ಎಮೋಷನಲ್‌ ಹಾಡನ್ನು ನವೀನ್‌ ಸಜ್ಜು ಹಾಡಿದ್ದಾರೆ.

ಭೀಮಾ ಆಲ್ಬಂನ ಪ್ರತಿಯೊಂದು ಹಾಡುಗಳು ಟ್ರೆಂಡ್ ಆಗಿರ, ಜನಪ್ರಿಯ ರೀಲ್ಸ್ ಗಳಿಗೆ ದಾರಿ ಮಾಡಿಕೊಡುತ್ತಿರುವಾಗ, 'ಬೂಮ್ ಬೂಮ್ ಬೆಂಗಳೂರು' ಬಿಡುಗಡೆಯು ಭೀಮಾಗೆ ಮತ್ತೊಂದು ಹಿಟ್‌ನ ಸುಳಿವು ನೀಡುತ್ತದೆ" ಎಂದು ನಿರ್ದೇಶಕ ವಿಜಯ್ ಕುಮಾರ್ ಅಭಿಪ್ರಾಯಪಡುತ್ತಾರೆ.

ಯುವ ಪ್ರತಿಭೆ ಅಶ್ವಿನಿ ಭೀಮಾ ಚಿತ್ರದಲ್ಲಿ ವಿಜಯ್ ಜೊತೆಗೆ ನಟಿಸಿದ್ದಾರೆ, ಜೊತೆಗೆ ಅನೇಕ ಯುವ ಕಲಾವಿದರು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಇದನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದ ಯಾವುದೇ ಹಾಡುಗಳು ಅನಗತ್ಯವಲ್ಲ, ಅವೆಲ್ಲವೂ ಸಂದರ್ಭಕ್ಕೆ ಹೊಂದಿಕೆಯಾಗುತ್ತವೆ ಎಂದು ಕೃಷ್ಣ ಸಾರ್ಥಕ್ ಹೇಳುತ್ತಾರೆ, ಈ ಚಿತ್ರಕ್ಕೆ ಕರ್ನಾಟಕದಾದ್ಯಂತ ವಿತರಕರಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿದು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT