ನಾ ನಿನ್ನ ಬಿಡಲಾರೆ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಮತ್ತೆ ಬರಲಿದೆ 'ನಾ ನಿನ್ನ ಬಿಡಲಾರೆ': ಹಾರರ್ ಸಿನಿಮಾ ನಿರ್ದೇಶನಕ್ಕಿಳಿದ ಹೇಮಂತ್ ಹೆಗಡೆ

1989ರ ದಶಕದಲ್ಲಿ ತೆರೆ ಕಂಡ ನಾ ನಿನ್ನ ಬಿಡಲಾರೆ ಸಿನಿಮಾದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ನಟಿಸಿದ್ದರು. ಶೀರ್ಷಿಕೆ ಹೊರತುಪಡಿಸಿ ಮೂಲ ಚಿತ್ರಕ್ಕೂ ತಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಮಂತ್ ಹೆಗಡೆ ಸ್ಪಷ್ಟಪಡಿಸಿದ್ದಾರೆ.

ನಟ-ನಿರ್ದೇಶಕ ಹೇಮಂತ್ ಹೆಗಡೆ ಅವರ ಇತ್ತೀಚಿನ ಚಿತ್ರ ನಾ ನಿನ್ನ ಬಿಡಲಾರೆ ಮೂಲಕ ಹಾಸ್ಯದಿಂದ ಹಾರರ್‌ಗೆ ಪರಿವರ್ತನೆಯಾಗುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ಹೇಮಂತ್‌ ಹೆಗಡೆ ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರ ಕೂಡಾ ಮಾಡುತ್ತಿದ್ದಾರೆ.

1989ರ ದಶಕದಲ್ಲಿ ತೆರೆ ಕಂಡ ನಾ ನಿನ್ನ ಬಿಡಲಾರೆ ಸಿನಿಮಾದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ನಟಿಸಿದ್ದರು, ಇದೊಂದು ಹಾರರ್ ಸಿನಿಮಾವಾಗಿತ್ತು. ಶೀರ್ಷಿಕೆ ಹೊರತುಪಡಿಸಿ ಮೂಲ ಚಿತ್ರಕ್ಕೂ ತಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಮಂತ್ ಹೆಗಡೆ ಸ್ಪಷ್ಟಪಡಿಸಿದ್ದಾರೆ.

ಅವರು ಆರಂಭದಲ್ಲಿ ನೆಟ್‌ವರ್ಕ್ ಎಂಬ ಹೆಸರಿನ ಕೊಲೆ ರಹಸ್ಯವನ್ನು ನಿರ್ದೇಶಿಸಲು ಯೋಜಿಸಿದ್ದರು. ಕನ್ನಡದ ಮಹತ್ವದ ಹಾರರ್ ಚಿತ್ರವೊಂದು ತಯಾರಾಗಿ ಸ್ವಲ್ಪ ಸಮಯವಾಯಿತು’ ಎಂದು ಹೆಗ್ಡೆ ವಿವರಿಸುತ್ತಾರೆ. ನಾ ನಿನ್ನ ಬಿಡಲಾರೆ ಘೋಸ್ಟ್ 2.0 ಎಂಬ ಅಡಿಬರಹವನ್ನು ಹೊಂದಿದೆ ಎಂದು ಅವರು ಹೇಳಿದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಹೇಮಂತ್, ಗಜೇಂದ್ರ ಗುಂಜೂರ್ ಜೊತೆಗೆ ಚಿತ್ರಕಥೆ ಬರೆದಿದ್ದಾರೆ.

ಸಿನಿಮಾದಲ್ಲಿ ಭಾವನಾ ರಾಮಣ್ಣ ದೆವ್ವದ ಪಾತ್ರದಲ್ಲಿ ನಟಿಸಲಿದ್ದಾರೆ. "ಶಿವಮೊಗ್ಗದ ಬ್ರಾಹ್ಮಣರ ಮನೆಯಲ್ಲಿ ಬೆಳೆದ ನನಗೆ ಈ ಪಾತ್ರವು ತುಂಬಾ ವೈಯಕ್ತಿಕವಾಗಿದೆ. ನಾನು ಹೇಮಂತ್ ಅವರನ್ನು ಬಹಳ ಸಮಯದಿಂದ ತಿಳಿದಿದ್ದರೂ, ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ಇದು ನನಗೆ ಮೊದಲ ಅವಕಾಶ" ಎಂದು ಹೇಳಿದ್ದಾರೆ.

ನಾ ನಿನ್ನ ಬಿಡಲಾರೆ ಸಿನಿಮಾದಲ್ಲಿ ಹೇಮಂತ್ ಜೊತೆ ಅಪೂರ್ವ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಮಕರಂದ್ ದೇಶಪಾಂಡೆ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಕಿಶೋರ್ ಮತ್ತು ನಾಸರ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಅನ್ವಿತಾ ಆರ್ಟ್ಸ್ ಅಡಿಯಲ್ಲಿ ಶಶಿಕಿರಣ್ ರಂಗನಾಥ್, ಕಿರಣ್ ನಾಗರಾಜ್ ಮತ್ತು ಬಾಲಕೃಷ್ಣ ಪೆರುಂಬಳ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾ ನಿನ್ನ ಬಿಡಲಾರೆ ಚಿತ್ರದ ತಾಂತ್ರಿಕ ತಂಡದಲ್ಲಿ ಸಂಗೀತ ಸಂಯೋಜಕ ವಾಸುಕಿ ವೈಭವ್ ಮತ್ತು ಛಾಯಾಗ್ರಾಹಕ ಕೃಷ್ಣ ಹಂಜನ್ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಮಂಡ್ಯ: 1,844 ಅಕ್ರಮ ಇ-ಖಾತಾ ವಿತರಣೆ: ಮೂವರು ಪಿಡಿಒಗಳು ಸೇರಿ ನಾಲ್ವರು ಅಧಿಕಾರಿಗಳ ಅಮಾನತು

ಹಾರ್ಡ್‌ವೇರ್ ಗೋಡೌನ್ ನಲ್ಲಿ ಅಗ್ನಿದುರಂತ: ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೂ ಗಾಯ!

Ranji Trophy final: ಕರ್ನಾಟಕದ ಕೆವಿ ಅನೀಶ್‌ಗೆ ಡಿಚ್ಚಿ ಹೊಡೆದ ಜಮ್ಮು ಮತ್ತು ಕಾಶ್ಮೀರದ ನಾಯಕ, Video

ಸಿಪಿಐ ಹಿರಿಯ ನಾಯಕ, ಶತಾಯುಷಿ ಆರ್. ನಲ್ಲಕಣ್ಣು ನಿಧನ

SCROLL FOR NEXT