ರುಧಿರಂ ಚಿತ್ರದ ಫಸ್ಟ್ ಲುಕ್ 
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ - ಅಪರ್ಣಾ ಬಾಲಮುರಳಿ ಅಭಿನಯದ 'ರುಧಿರಂ' ಚಿತ್ರದ ಫಸ್ಟ್ ಲುಕ್ ಬಿಡುಗಡೆ!

ರುಧಿರಂ, ಜಿಶೋ ಮತ್ತು ಜೋಸೆಫ್ ಕಿರಣ್ ಜಾರ್ಜ್ ಸ್ಕ್ರಿಪ್ಟ್ ಬರೆದಿದ್ದು ವೈದ್ಯರ ಜೀವನದಲ್ಲಿ ನಡೆಯುವ ನಿಗೂಢ ಘಟನೆಗಳ ಬಗ್ಗೆ ವಿವರಿಸುತ್ತದೆ.

ಜಿಶೋ ಲೋನ್ ಆಂಟೋನಿ ಚೊಚ್ಚಲ ನಿರ್ದೇಶನದ ರುಧಿರಂ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಅಪರ್ಣಾ ಬಾಲಮುರಳಿ ಅಭಿನಯಿಸಿದ್ದಾರೆ. ರುಧಿರಂ ಚಿತ್ರದ ಫಸ್ಟ್ ಲುಕ್ ಮಂಗಳವಾರ ಅನಾವರಣಗೊಂಡಿದೆ.

ಎದ್ದುಕಾಣುವ ಕೆಂಪು ಹಿನ್ನೆಲೆಯಲ್ಲಿ ಹೊಂದಿಸಲಾದ ಪೋಸ್ಟರ್, ಬಿಳಿ PPE ಕವರ್‌ನಲ್ಲಿ ಕುಳಿತಿರುವ ರಾಜ್‌ನನ್ನು ಚಿತ್ರಿಸುತ್ತದೆ, ಆದರೆ ಅಪರ್ಣಾ ಆತನ ಪಕ್ಕದಲ್ಲಿ ಬಂಡೆಯಂತೆ ಒರಟಾದ ಅವತಾರದಲ್ಲಿ ನಿಂತಿದ್ದಾರೆ. ರುಧಿರಂ, ಜಿಶೋ ಮತ್ತು ಜೋಸೆಫ್ ಕಿರಣ್ ಜಾರ್ಜ್ ಸ್ಕ್ರಿಪ್ಟ್ ಬರೆದಿದ್ದು ವೈದ್ಯರ ಜೀವನದಲ್ಲಿ ನಡೆಯುವ ನಿಗೂಢ ಘಟನೆಗಳ ಬಗ್ಗೆ ವಿವರಿಸುತ್ತದೆ. 2023 ರಲ್ಲಿ ಪ್ರಾರಂಭಿವಾದ ಈ ಚಿತ್ರವು ಆರಂಭದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ರಾಜ್ ಅವರ ಚೊಚ್ಚಲ ಚಿತ್ರ ಎಂದು ಪ್ಲಾನ್ ಮಾಡಲಾಗಿತ್ತು. ರಾಜ್ ಬಿ ಶೆಟ್ಟಿ ಟರ್ಬೋ ಮತ್ತು ಕೊಂಡಲ್‌ನಂತಹ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ನಮ್ಮೊಂದಿಗೆ ಮಾತನಾಡಿದ ಜಿಶೋ, ರುಧಿರಂ ಒಂದು ಸೇಡಿನ ಕಥೆಯಾಗಿದೆ, ತಾಂತ್ರಿಕವಾಗಿ ಹೇಳುವುದಾದರೆ, ಚಿತ್ರಕ್ಕೆ ಸಾಜದ್ ಕಾಕ್ಕು ಅವರ ಛಾಯಾಗ್ರಹಣ, ಬವನ್ ಶ್ರೀಕುಮಾರ್ ಅವರ ಸಂಕಲನ ಮತ್ತು 4 ಮ್ಯೂಸಿಕ್ ಸಂಗೀತ ಸಂಯೋಜನೆಯಿದೆ. ಇದು ಮಲಯಾಳಂ ಜೊತೆಗೆ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ಬಿಂಗ್ ಆಗಿ ಬಿಡುಗಡೆಯಾಗಲಿದೆ. ರುಧಿರಂ ಅನ್ನು ರೈಸಿಂಗ್ ಸನ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿಎಸ್ ಲಾಲನ್ ನಿರ್ಮಿಸಿದ್ದಾರೆ, ಗೋಕುಲಂ ಗೋಪಾಲನ್ ಅವರ ಶ್ರೀ ಗೋಕುಲಂ ಮೂವೀಸ್ ವಿತರಣೆ ನಿರ್ವಹಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

SCROLL FOR NEXT