ಭೈರಾದೇವಿ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ 
ಸಿನಿಮಾ ಸುದ್ದಿ

'ಭೈರಾದೇವಿ'ಯಲ್ಲಿ ತೋರಿಸಲಾದ ಪ್ರತಿಯೊಂದು ಆಚರಣೆ, ಮಂತ್ರ ವಾಸ್ತವದಲ್ಲಿ ಬೇರೂರಿದೆ: ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ಭೈರಾದೇವಿ'' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಚಿತ್ರದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್, ಶಿವರಾಮ್ ಮತ್ತು ರಾಗಾಯಣ ರಘು ಕೂಡ ನಟಿಸಿದ್ದಾರೆ.

ನನಗೆ ಸ್ಮಶಾನ ಅಂದ್ರೆ ಭಯ ಆಗುತ್ತಿತ್ತು. ಆದರೆ ಭೈರಾದೇವಿಯ ಸಿನಿಮಾ ನಂತರ, ನಾನು ದೆವ್ವಗಳ ಬಗ್ಗೆ ಇದ್ದ ಭಯ ಹೋಗಿದೆ. ರಾತ್ರಿ ಹೊತ್ತು ಒಬ್ಬಳೇ ಸ್ಮಶಾನಕ್ಕೆ ಹೋಗಿ ಬರುವ ಧೈರ್ಯ ಬಂದಿದೆ ಎಂದು ಶ್ರೀಜೈ ನಿರ್ದೇಶನದ ಹಾರರ್ ಸಿನಿಮಾ ಭೈರಾದೇವಿ ನಾಯಕ ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ಭೈರಾದೇವಿ'' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಚಿತ್ರದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್, ಶಿವರಾಮ್ ಮತ್ತು ರಾಗಾಯಣ ರಘು ಕೂಡ ನಟಿಸಿದ್ದಾರೆ.

ರಾಧಿಕಾ ತಮ್ಮ ಬ್ಯಾನರ್, ಶಮಿಕಾ ಎಂಟರ್‌ಪ್ರೈಸಸ್ ಅಡಿಯಲ್ಲಿ ನಿರ್ಮಿಸಿದ ಈ ಚಿತ್ರದ ಬಗ್ಗೆ ಮಾತನಾಡಿದ್ದು, 'ಭೈರಾದೇವಿ'ಯಲ್ಲಿ ತೋರಿಸಲಾದ ಪ್ರತಿಯೊಂದು ಆಚರಣೆ ಮತ್ತು ಮಂತ್ರ ವಾಸ್ತವದಲ್ಲಿ ಬೇರೂರಿದೆ ಎಂದರು.

"ಚಿತ್ರೀಕರಣದ ಮೊದಲು, ನನಗೆ ದೆವ್ವಗಳ ಬಗ್ಗೆ ಭಯ ಇತ್ತು. ಮನೆಯಲ್ಲಿರುವ ಒಂದು ರೂಮ್​​ನಿಂದ ಮತ್ತೊಂದು ರೂಮ್​​ಗೆ ಹೋಗಲು ಸಹ ಭಯ ಪಡುತ್ತಿದ್ದೆ. ರಾತ್ರಿ ಹೊತ್ತು ಸ್ಮಶಾನ ಅಂದ್ರೆ ಭಯ ಆಗುತ್ತಿತ್ತು. ಈಗ ಭೈರಾದೇವಿ ಸಿನಿಮಾ ಮಾಡಿದ ಬಳಿಕ ದೆವ್ವದ ಬಗ್ಗೆ ಇದ್ದ ಭಯ ಹೋಗಿದೆ ಎಂದಿದ್ದಾರೆ.

ಸ್ಮಶಾನದಲ್ಲಿ ಶೂಟಿಂಗ್ ಮಾಡುವ ವಿಚಾರ ಬಂದಾಗ ನನಗೆ ತುಂಬಾ ಭಯವಾಗಿತ್ತು. ನಾವು ಸ್ಮಶಾನದ ಸೆಟ್ ಹಾಕುವಂತೆ ಸಲಹೆ ನೀಡಿದ್ದೆವು. ಆದರೆ ನಿರ್ದೇಶಕರು ನಿಜವಾದ ಸ್ಮಶಾನದಲ್ಲೇ ಚಿತ್ರೀಕರಣ ಮಾಡಬೇಕು ಎಂದರು. ಇನ್ನೂ ಶೂಟಿಂಗ್ ಟೈಮಲ್ಲಿ ಕಾಳಿ ಪಾತ್ರಕ್ಕೆ ಮೇಕಪ್ ಮಾಡಿಕೊಳ್ಳುವುದಕ್ಕೆ 4 ಗಂಟೆ ಹಿಡಿಯುತ್ತಿತ್ತು ಎಂದು ಹೇಳಿದ್ದಾರೆ.

ಒಮ್ಮೆ ಈ ಮೇಕಪ್ ಹಾಕಿ ಶೂಟಿಂಗ್ ಮಾಡಬೇಕು ಅನ್ನುವಷ್ಟರಲ್ಲಿ ನನಗೆ ತಲೆ ಎತ್ತುವುದಕ್ಕೆ ಆಗುತ್ತಿರಲಿಲ್ಲ. ಆಗ ನನ್ನ ಅಣ್ಣ ಹಾಗೂ ಡೈರೆಕ್ಟರ್ ಬಂದು ಪೂಜೆ ಮಾಡಿ ನಿಂಬೆ ಹಣ್ಣು ತುಳಿದ ಬಳಿಕ ನನಗೆ ತಲೆ ಎತ್ತಲು ಆಯಿತು ಎಂದು ಶೂಟಿಂಗ್ ಕ್ಷಣಗಳನ್ನು ಹಂಚಿಕೊಂಡರು.

"ಭೈರಾದೇವಿ ನನ್ನ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ರಾಧಿಕಾ ಕುಮಾರಸ್ವಾಮಿ ಅವರು ವಿಶ್ವಾಸದಿಂದ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT