ಸಾಂಡ್ರಾ ಥಾಮಸ್ 
ಸಿನಿಮಾ ಸುದ್ದಿ

'ಸಿನಿಮಾ ಸೆಟ್‌ನಲ್ಲಿ ಪುರುಷರು ಮಾತ್ರ ಗೋಮಾಂಸ ತಿಂದು, ನನಗೆ ಕೊಟ್ಟಿಲ್ಲ': ತಾರತಮ್ಯದ ಬಗ್ಗೆ ನಿರ್ಮಾಪಕಿ ಅಳಲು!

ಚಲನಚಿತ್ರ ಸೆಟ್‌ಗಳಲ್ಲಿ ಹೆಚ್ಚಿನ ಸ್ಟೈಲಿಸ್ಟ್‌ಗಳು ಮತ್ತು ಮೇಕಪ್ ಕಲಾವಿದರು ಮಹಿಳೆಯರು ಎಂದು ಸಾಂಡ್ರಾ ಹೇಳುತ್ತಾರೆ.

'ಫ್ರೀಡ್' ಚಿತ್ರದ ಮೂಲಕ ಸಾಂಡ್ರಾ ಥಾಮಸ್ ಮಲಯಾಳಂ ಚಲನಚಿತ್ರ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಂಡ್ರಾ ಥಾಮಸ್ ತಮ್ಮ ನಿರ್ಮಾಣದ ಅಡಿಯಲ್ಲಿ ಆಡು, ಆದಿ ಕಪ್ಯಾರೆ ಕೂಟಮಣಿ, ಪೆರುಚಾಳಿ, ಫಿಲಿಪ್ ಅಂಡ್ ದಿ ಮಂಕಿ ಪೆನ್, ನಲ್ಲ ನೀಲವುಲ್ಲ ರಾತ್ರಿ ಮತ್ತು ಮುದ್ದುಗೌ ಸೇರಿದಂತೆ ಬೆರಳೆಣಿಕೆಯಷ್ಟು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇನ್ನು ಸಾಂಡ್ರಾ ಆಗಾಗ್ಗೆ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ.

ಸಾಂಡ್ರಾ ಚಲನಚಿತ್ರೋದ್ಯಮದಲ್ಲಿನ ತನ್ನ ಅನುಭವಗಳನ್ನು ಮತ್ತು ವಲಯವನ್ನು ಸುಧಾರಿಸಲು ಸಹಾಯ ಮಾಡುವ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಈಗ, ಸಾಂಡ್ರಾ ತನ್ನದೇ ಆದ ಚಲನಚಿತ್ರ ಸೆಟ್‌ನಲ್ಲಿ ಎದುರಿಸಿದ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 'ನಾನು ನಿರ್ಮಾಪಕಿ. ನನ್ನ ಸಿನಿಮಾ ಸೆಟ್‌ನಲ್ಲಿ ಎಲ್ಲವನ್ನೂ ನಾನೇ ನಿರ್ಧರಿಸುತ್ತೇನೆ. ನಾನು ಆ ಸೆಟ್‌ನಲ್ಲಿ ದುಡ್ಡು ಕೊಟ್ಟು ಆಹಾರವನ್ನು ತರಿಸುತ್ತೇವೆ. ಅದನ್ನೇ ಎಲ್ಲರೂ ತಿನ್ನುತ್ತಾರೆ. ಕಳೆದ ಸಿನಿಮಾದ ಕ್ಯಾಮೆರಾಮನ್. ನಿನ್ನೆ ಗೋಮಾಂಸ ತುಂಬಾ ರುಚಿಯಾಗಿತ್ತು ಅಂತ ಸೆಟ್‌ನಲ್ಲಿ ಮಾತನಾಡುತ್ತಿದ್ದರು. ಆ ವಿಚಾರ ನನಗೆ ಅರ್ಥವಾಗಲಿಲ್ಲ. ನಾನು ನಿರ್ದೇಶಕರನ್ನು ಕೇಳಿದಾಗ, ಅವರಿಗೂ ಒಂದು ರೀತಿಯ ಸನ್ನೆ ಮಾಡಿದರು. ಇದರರ್ಥ ಸೆಟ್‌ನಲ್ಲಿ ಎಲ್ಲಾ ಪುರುಷರು ಗೋಮಾಂಸವನ್ನು ತಿಂದಿದ್ದಾರೆ ಎಂದು ಅರ್ಥವಾಯಿತು. ಒಬ್ಬ ನಿರ್ಮಾಪಕನಾಗಿ ನನಗೆ ಕೊಟ್ಟಿಲ್ಲ.. ಕೊನೆಗೆ, ನಾನು ಮೆಸ್ ನಡೆಸುತ್ತಿದ್ದ ವ್ಯಕ್ತಿಗೆ ಕರೆ ಮಾಡಿ ಎಚ್ಚರಿಕೆ ನೀಡಿದೆ ಎಂದು ಹೇಳಿದರು.

ಚಲನಚಿತ್ರ ಸೆಟ್‌ಗಳಲ್ಲಿ ಹೆಚ್ಚಿನ ಸ್ಟೈಲಿಸ್ಟ್‌ಗಳು ಮತ್ತು ಮೇಕಪ್ ಕಲಾವಿದರು ಮಹಿಳೆಯರೇ ಇದ್ದಾರೆ. ಅವರು ದೂರು ನೀಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆೆ. 'ನಾನು 23ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದವಳು. ಇದು ನಾನು ಮಾಡಿದ ಮೊದಲ ವ್ಯವಹಾರವಾಗಿತ್ತು. ಅದೃಷ್ಟವಶಾತ್, ಅದು ಚೆನ್ನಾಗಿ ಮೂಡಿಬಂತು. ನಾನು ಎಲ್ಲವನ್ನೂ ಸಿನಿಮಾಗಳಿಂದ ಕಲಿತಿದ್ದೇನೆ. ಎಲ್ಲವೂ ಉತ್ತಮ ಪಾಠಗಳಾಗಿದ್ದವು ಎಂದು ಸಾಂಡ್ರಾ ಥಾಮಸ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT