ಸಾಂಡ್ರಾ ಥಾಮಸ್ 
ಸಿನಿಮಾ ಸುದ್ದಿ

'ಸಿನಿಮಾ ಸೆಟ್‌ನಲ್ಲಿ ಪುರುಷರು ಮಾತ್ರ ಗೋಮಾಂಸ ತಿಂದು, ನನಗೆ ಕೊಟ್ಟಿಲ್ಲ': ತಾರತಮ್ಯದ ಬಗ್ಗೆ ನಿರ್ಮಾಪಕಿ ಅಳಲು!

ಚಲನಚಿತ್ರ ಸೆಟ್‌ಗಳಲ್ಲಿ ಹೆಚ್ಚಿನ ಸ್ಟೈಲಿಸ್ಟ್‌ಗಳು ಮತ್ತು ಮೇಕಪ್ ಕಲಾವಿದರು ಮಹಿಳೆಯರು ಎಂದು ಸಾಂಡ್ರಾ ಹೇಳುತ್ತಾರೆ.

'ಫ್ರೀಡ್' ಚಿತ್ರದ ಮೂಲಕ ಸಾಂಡ್ರಾ ಥಾಮಸ್ ಮಲಯಾಳಂ ಚಲನಚಿತ್ರ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಂಡ್ರಾ ಥಾಮಸ್ ತಮ್ಮ ನಿರ್ಮಾಣದ ಅಡಿಯಲ್ಲಿ ಆಡು, ಆದಿ ಕಪ್ಯಾರೆ ಕೂಟಮಣಿ, ಪೆರುಚಾಳಿ, ಫಿಲಿಪ್ ಅಂಡ್ ದಿ ಮಂಕಿ ಪೆನ್, ನಲ್ಲ ನೀಲವುಲ್ಲ ರಾತ್ರಿ ಮತ್ತು ಮುದ್ದುಗೌ ಸೇರಿದಂತೆ ಬೆರಳೆಣಿಕೆಯಷ್ಟು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇನ್ನು ಸಾಂಡ್ರಾ ಆಗಾಗ್ಗೆ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ.

ಸಾಂಡ್ರಾ ಚಲನಚಿತ್ರೋದ್ಯಮದಲ್ಲಿನ ತನ್ನ ಅನುಭವಗಳನ್ನು ಮತ್ತು ವಲಯವನ್ನು ಸುಧಾರಿಸಲು ಸಹಾಯ ಮಾಡುವ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಈಗ, ಸಾಂಡ್ರಾ ತನ್ನದೇ ಆದ ಚಲನಚಿತ್ರ ಸೆಟ್‌ನಲ್ಲಿ ಎದುರಿಸಿದ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 'ನಾನು ನಿರ್ಮಾಪಕಿ. ನನ್ನ ಸಿನಿಮಾ ಸೆಟ್‌ನಲ್ಲಿ ಎಲ್ಲವನ್ನೂ ನಾನೇ ನಿರ್ಧರಿಸುತ್ತೇನೆ. ನಾನು ಆ ಸೆಟ್‌ನಲ್ಲಿ ದುಡ್ಡು ಕೊಟ್ಟು ಆಹಾರವನ್ನು ತರಿಸುತ್ತೇವೆ. ಅದನ್ನೇ ಎಲ್ಲರೂ ತಿನ್ನುತ್ತಾರೆ. ಕಳೆದ ಸಿನಿಮಾದ ಕ್ಯಾಮೆರಾಮನ್. ನಿನ್ನೆ ಗೋಮಾಂಸ ತುಂಬಾ ರುಚಿಯಾಗಿತ್ತು ಅಂತ ಸೆಟ್‌ನಲ್ಲಿ ಮಾತನಾಡುತ್ತಿದ್ದರು. ಆ ವಿಚಾರ ನನಗೆ ಅರ್ಥವಾಗಲಿಲ್ಲ. ನಾನು ನಿರ್ದೇಶಕರನ್ನು ಕೇಳಿದಾಗ, ಅವರಿಗೂ ಒಂದು ರೀತಿಯ ಸನ್ನೆ ಮಾಡಿದರು. ಇದರರ್ಥ ಸೆಟ್‌ನಲ್ಲಿ ಎಲ್ಲಾ ಪುರುಷರು ಗೋಮಾಂಸವನ್ನು ತಿಂದಿದ್ದಾರೆ ಎಂದು ಅರ್ಥವಾಯಿತು. ಒಬ್ಬ ನಿರ್ಮಾಪಕನಾಗಿ ನನಗೆ ಕೊಟ್ಟಿಲ್ಲ.. ಕೊನೆಗೆ, ನಾನು ಮೆಸ್ ನಡೆಸುತ್ತಿದ್ದ ವ್ಯಕ್ತಿಗೆ ಕರೆ ಮಾಡಿ ಎಚ್ಚರಿಕೆ ನೀಡಿದೆ ಎಂದು ಹೇಳಿದರು.

ಚಲನಚಿತ್ರ ಸೆಟ್‌ಗಳಲ್ಲಿ ಹೆಚ್ಚಿನ ಸ್ಟೈಲಿಸ್ಟ್‌ಗಳು ಮತ್ತು ಮೇಕಪ್ ಕಲಾವಿದರು ಮಹಿಳೆಯರೇ ಇದ್ದಾರೆ. ಅವರು ದೂರು ನೀಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆೆ. 'ನಾನು 23ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದವಳು. ಇದು ನಾನು ಮಾಡಿದ ಮೊದಲ ವ್ಯವಹಾರವಾಗಿತ್ತು. ಅದೃಷ್ಟವಶಾತ್, ಅದು ಚೆನ್ನಾಗಿ ಮೂಡಿಬಂತು. ನಾನು ಎಲ್ಲವನ್ನೂ ಸಿನಿಮಾಗಳಿಂದ ಕಲಿತಿದ್ದೇನೆ. ಎಲ್ಲವೂ ಉತ್ತಮ ಪಾಠಗಳಾಗಿದ್ದವು ಎಂದು ಸಾಂಡ್ರಾ ಥಾಮಸ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT