ಶೀರ್ಷಿಕೆ ಅನಾವರಣ ಮಾಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಲೇಖಕ ಚಂದ್ರಶೇಖರ ಕಂಬಾರ 
ಸಿನಿಮಾ ಸುದ್ದಿ

ವಿನೂತನ ಶೀರ್ಷಿಕೆ 'KA-11-1977' ಬಿಡುಗಡೆ; ಚಿತ್ರತಂಡಕ್ಕೆ ಶುಭಕೋರಿದ ಚಂದ್ರಶೇಖರ ಕಂಬಾರ

ಚಿತ್ರದ ಶೀರ್ಷಿಕೆ ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಹುತೇಕ ಚಿತ್ರಗಳು ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡುತ್ತವೆ. ಅದೇ ಸಾಲಿಗೆ ಸೇರಿದೆ ಇತ್ತೀಚಿನ ಚಿತ್ರ KA-11-1977.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಲೇಖಕ ಚಂದ್ರಶೇಖರ ಕಂಬಾರ ಅವರು ಮುಂಬರುವ 'ಕೆಎ-11-1977' ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದರು. ಜಗದೀಶ್ ಕೊಪ್ಪ ನಿರ್ದೇಶನದ ಈ ಚಿತ್ರಕ್ಕೆ ಶೀಘ್ರದಲ್ಲೇ ಮುಹೂರ್ತ ಸಮಾರಂಭ ನಡೆಯಲಿದೆ.

ಚಿತ್ರದ ಶೀರ್ಷಿಕೆ ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಹುತೇಕ ಚಿತ್ರಗಳು ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡುತ್ತವೆ. ಹೀಗಾಗಿಯೇ ಚಿತ್ರತಂಡ ಶೀರ್ಷಿಕೆ ಆಯ್ಕೆಗೆ ಮಹತ್ವ ನೀಡುತ್ತಿದೆ. ಅದೇ ಸಾಲಿಗೆ ಸೇರಿದೆ ಇತ್ತೀಚಿನ ಚಿತ್ರ KA-11-1977.

ಶೀರ್ಷಿಕೆ ಅನಾವರಣಗೊಳಿಸಿ ಮಾತನಾಡಿದ ಚಂದ್ರಶೇಖರ್ ಕಂಬಾರ ಅವರು, 'ಶೀರ್ಷಿಕೆ ನೋಡಿದಾಗ, ಈ ಚಿತ್ರವು ಹೊಸದನ್ನು ತರಬಹುದು ಎಂಬುದು ಸ್ಪಷ್ಟವಾಗಿದೆ. ಇಂದಿನ ಪ್ರೇಕ್ಷಕರು ಅಂತಹ ಚಿತ್ರಗಳನ್ನು ಆನಂದಿಸುತ್ತಾರೆ. ಸಿನಿಮಾವು ಮನರಂಜನೆಯ ವಿಷಯವಾಗಿದೆ ಮತ್ತು ಈ ತಂಡವು ಅದನ್ನು ನೀಡುತ್ತದೆ ಎಂಬ ಸಂಪೂರ್ಣ ನಂಬಿಕೆ ಇದೆ' ಎಂದರು.

ಇತರ ಹಲವರಂತೆ ನಾನೂ ಕೂಡ ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದೇನೆ. ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು ಎಂದು ಕಂಬಾರ ಹೇಳಿದರು.

ಕಾಲೇಜು ಕಾಲೇಜು, ಥ್ಯಾಂಕ್ಸ್ ಚಿತ್ರಗಳ ನಿರ್ದೇಶನಕ್ಕೆ ಹೆಸರುವಾಸಿಯಾದ ಜಗದೀಶ್ ಕೊಪ್ಪ ಅವರು ಸುದೀರ್ಘ ವಿರಾಮದ ನಂತರ ನಿರ್ದೇಶಕ ಟೋಪಿ ತೊಡುತ್ತಿದ್ದಾರೆ. ಕೆಎ-11-1977 ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಸಹ ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಪ್ರಕಾಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬೆಂಗಳೂರಿನ ಉದ್ಯಮಿ ಎಚ್ ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆಎ-11-1977 ಅಚ್ಚರಿಗಳಿಂದ ಕೂಡಿದ ವಿನೂತನ ಚಿತ್ರವಾಗಲಿದೆ ಎಂದು ಚಿತ್ರತಂಡ ಹೇಳುತ್ತದೆ.

ನಟ ನವೀನ್ ಕೃಷ್ಣ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಸಂಭಾಷಣೆ ಬರಹಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಸಂಗಮೇಶ್ ಉಪಾಸೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಶಿವಕುಮಾರ್ ಆರಾಧ್ಯ, ತಾರಾ, ರೀಮಾ, ಬೇಬಿ ರಚನಾ ಮತ್ತು ಇತರರು ಇದ್ದಾರೆ. ಚಿತ್ರಕ್ಕೆ ಪಲಿನಿ ಡಿ ಸೇನಾಪತಿ ಸಂಗೀತ ನೀಡಿದ್ದು, ರೇಣುಕುಮಾರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT