ಸಿನಿಮಾ ಸುದ್ದಿ

ಆ್ಯಕ್ಷನ್ ಎಂಟರ್‌ಟೈನರ್ 'ಆಲ್ಫಾ' ಚಿತ್ರದ ಮೂಲಕ ಸ್ಯಾಂಡಲ್‍ವುಡ್‌ಗೆ ಹೇಮಂತ್ ಕುಮಾರ್ ಪದಾರ್ಪಣೆ!

ಚಿತ್ರತಂಡ ಈಗಾಗಲೇ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ಹೇಮಂತ್ ಕುಮಾರ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಚಿತ್ರವು ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ಕ್ರೈಂ ಸ್ಟೋರಿ ಸುತ್ತ ಸುತ್ತುತ್ತದೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಮತ್ತು ಡಾಲಿ ಧನಂಜಯ್ ನಟನೆಯ ಹೊಯ್ಸಳ ಮುಂತಾದ ಚಿತ್ರಗಳ ನಿರ್ದೇಶಕ ವಿಜಯ್ ಎನ್ ತಮ್ಮ ಮುಂದಿನ ಆಕ್ಷನ್-ಪ್ಯಾಕ್ಡ್ ಚಿತ್ರ 'ಆಲ್ಫಾ' ಮೂಲಕ ಹೇಮಂತ್ ಕುಮಾರ್ ಅವರನ್ನು ನಾಯಕನನ್ನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸಲು ಸಜ್ಜಾಗಿದ್ದಾರೆ. ಚಿತ್ರಕ್ಕೆ 'ಮೆನ್ ಲವ್ ವಯಲೆನ್ಸ್' ಎಂಬ ಆಸಕ್ತಿದಾಯಕ ಟ್ಯಾಗ್‌ಲೈನ್ ಇದೆ. ಆ್ಯಕ್ಷನ್ ಜೊತೆಗೆ ಚಿತ್ರವು ಆಳವಾದ ಭಾವನಾತ್ಮಕ ಕ್ಷಣಗಳನ್ನು ಸಂಯೋಜಿಸುತ್ತದೆ. ವಿಶೇಷವಾಗಿ ತಂದೆ ಮತ್ತು ಮಗನ ನಡುವಿನ ಪ್ರಬಲ ಬಾಂಧವ್ಯವನ್ನು ಒಳಗೊಂಡಿದೆ.

ಚಿತ್ರತಂಡ ಈಗಾಗಲೇ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ಹೇಮಂತ್ ಕುಮಾರ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಚಿತ್ರವು ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ಕ್ರೈಂ ಸ್ಟೋರಿ ಸುತ್ತ ಸುತ್ತುತ್ತದೆ. ಕಥೆಯಲ್ಲಿ ಮೂರು ಪ್ರಮುಖ ಪಾತ್ರಗಳಿದ್ದು, ಅವುಗಳ ಸಂಕೇತವಾಗಿ 'ಆಲ್ಫಾ' ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಲಾಗಿದೆ.

ಚಿತ್ರವನ್ನು LA ಬ್ಯಾನರ್ ಅಡಿಯಲ್ಲಿ ಆನಂದ್ ಕುಮಾರ್ ಅವರು ನಿರ್ಮಿಸಿದ್ದಾರೆ. ಆನಂದ್ ಅವರಿಗೆ ಇದು ಚೊಚ್ಚಲ ಚಿತ್ರವಾಗಿದೆ.

ನಾಯಕನಾಗಿರುವ ಹೇಮಂತ್ ಕುಮಾರ್, ತಮ್ಮ ಪಾತ್ರಕ್ಕಾಗಿ ನಿರ್ದೇಶಕ ಮತ್ತು ನಟ ರಘು ಶಿವಮೊಗ್ಗ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದಾರೆ. ಸಾಹಸ ದೃಶ್ಯಗಳ ತರಬೇತಿಯನ್ನು ಅರ್ಜುನ್ ಅವರಿಂದ ಕಲಿತಿದ್ದಾರೆ ಮತ್ತು ಭೂಷಣ್ ಮಾಸ್ಟರ್ ಅವರ ಪತ್ನಿಯೊಂದಿಗೆ ನೃತ್ಯ ಕಲತಿದ್ದಾರೆ. ಹೆಚ್ಚುವರಿಯಾಗಿ, ಅವರು ಕಠಿಣ ಸಮರ ಕಲೆಗಳ ತರಬೇತಿಯನ್ನು ಪಡೆದಿದ್ದಾರೆ.

ಚಿತ್ರಕ್ಕೆ ಕಾರ್ತಿಕ್ ಅವರ ಅದ್ಭುತ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಮತ್ತು ಮಾಸ್ತಿ ಅವರು ಸಂಭಾಷಣೆಗಳನ್ನು ಬರೆದಿದ್ದಾರೆ. ಚಿತ್ರೀಕರಣ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!