ಪಾರು ಪಾರ್ವತಿ ಚಿತ್ರದಲ್ಲಿ ನಟಿ ದೀಪಿಕಾ ದಾಸ್ 
ಸಿನಿಮಾ ಸುದ್ದಿ

ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ನಟನೆಯ 'ಪಾರು ಪಾರ್ವತಿ' ಬಿಡುಗಡೆಗೆ ಸಿದ್ದ; ದಿನಾಂಕ ಘೋಷಣೆ

'ಈ ಕಾರು ಕೇವಲ ವಸ್ತುವಲ್ಲ; ಇದು ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ಕಾರಿನ ಪ್ರಯಾಣವು ಚಿತ್ರದ ಸಾರವನ್ನು ಪ್ರತಿಬಿಂಬಿಸುತ್ತದೆ' ಎಂದು ನಿರ್ದೇಶಕ ರೋಹಿತ್ ಕೀರ್ತಿ ಹಂಚಿಕೊಂಡಿದ್ದಾರೆ.

ರೋಹಿತ್ ಕೀರ್ತಿ ನಿರ್ದೇಶನದ ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿ ದೀಪಿಕಾ ದಾಸ್ ಅಭಿನಯದ ಮುಂಬರುವ 'ಪಾರು ಪಾರ್ವತಿ' ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಚಿತ್ರದ ನಾಲ್ಕನೇ ಪ್ರಮುಖ ಪಾತ್ರದ ಹೈ-ಎಂಡ್ ISUZU V ಕ್ರಾಸ್ ಮಾಡೆಲ್ ಕಾರನ್ನು ಅನಾವರಣಗೊಳಿಸಿದ್ದು, ಚಿತ್ರವು ಜನವರಿ 31 ರಾಜ್ಯದಾದ್ಯಂತ ಚಿತ್ರಮಂಗದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದೆ.

'ಈ ಕಾರು ಕೇವಲ ವಸ್ತುವಲ್ಲ; ಇದು ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ಕಾರಿನ ಪ್ರಯಾಣವು ಚಿತ್ರದ ಸಾರವನ್ನು ಪ್ರತಿಬಿಂಬಿಸುತ್ತದೆ' ಎಂದು ನಿರ್ದೇಶಕ ರೋಹಿತ್ ಕೀರ್ತಿ ಹಂಚಿಕೊಂಡಿದ್ದಾರೆ. ವಿಶೇಷವಾಗಿ ವಿನ್ಯಾಸಗೊಳಿಸಿದ ISUZU ಕಾರು 20 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ಬೆಂಗಳೂರಿನ ಉತ್ತರಹಳ್ಳಿಯಿಂದ ಉತ್ತರಾಖಂಡದವರೆಗೆ ಎಂಟು ರಾಜ್ಯಗಳಾದ್ಯಂತ 1.1 ಲಕ್ಷ ಕಿಲೋಮೀಟರ್‌ಗಳಷ್ಟು ಪ್ರಯಾಣಿಸಿದೆ. ಇದು ಚಿತ್ರದ ನಿರೂಪಣೆಗೆ ಅವಿಭಾಜ್ಯವಾಗಿದೆ.

ದೀಪಿಕಾ ದಾಸ್ ಹೊರತಾಗಿ, ಚಿತ್ರದ ತಾರಾಗಣದಲ್ಲಿ ಪೂನಂ ಸಿರ್ನಾಯಕ್ ಮತ್ತು ಫವಾಜ್ ಅಶ್ರಫ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 'ಈ ಪ್ರಯಾಣ ಆಧರಿತ ಚಲನಚಿತ್ರವು ಭಾವನೆಗಳು, ಸಂಸ್ಕೃತಿ ಮತ್ತು ಅನ್ವೇಷಿಸದ ಸ್ಥಳಗಳನ್ನು ಪರಿಶೋಧಿಸುತ್ತದೆ. ಇದು ಮನರಂಜನೆ, ಮಾಹಿತಿ ಮತ್ತು ಪ್ರೇಕ್ಷಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುತ್ತದೆ' ಎಂದು ದೀಪಿಕಾ ಹೇಳುತ್ತಾರೆ.

ಆರ್ ಹರಿ ಸಂಯೋಜಿಸಿದ ಒಂಬತ್ತು ಹಾಡುಗಳು ಚಿತ್ರದಲ್ಲಿವೆ. ಅಬಿನ್ ರಾಜೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಸಾಹಸ ಮತ್ತು ಭಾವನೆಗಳನ್ನು ಪಾರು ಪಾರ್ವತಿ ಚಿತ್ರ ಸಂಯೋಜಿಸುತ್ತದೆ. Eighteen Thirty Six Pictures ಅಡಿಯಲ್ಲಿ ಈ ಯೋಜನೆಯನ್ನು ನಿರ್ಮಿಸುತ್ತಿರುವ ನಿರ್ಮಾಪಕ ಪಿಬಿ ಪ್ರೇಮನಾಥ್ ಅವರು ಕನ್ನಡ ಚಿತ್ರರಂಗವನ್ನು ಉನ್ನತೀಕರಿಸುವ ಉತ್ಸಾಹವನ್ನು ವ್ಯಕ್ತಪಡಿಸಿದರು. ಇದು ಅವರ ಕನಸು ನನಸಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT