ಅನ್‌ಲಾಕ್ ರಾಘವ ಚಿತ್ರದ ಹಾಡು ಬಿಡುಗಡೆ ಮಾಡಿದ ನಟಿ ಸಪ್ತಮಿ ಗೌಡ 
ಸಿನಿಮಾ ಸುದ್ದಿ

'ಅನ್‌ಲಾಕ್ ರಾಘವ' ಚಿತ್ರದ ಮೂರನೇ ಹಾಡು ಬಿಡುಗಡೆ: ಶುಭಾಶಯ ಕೋರಿದ ನಟಿ ಸಪ್ತಮಿ ಗೌಡ

ನಾಯಕಿಯಾಗಿ ನಟಿಸಿರುವ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ.

ಅನ್‌ಲಾಕ್ ರಾಘವ ಚಿತ್ರದ 'ರಾಘವ ರಾಘವ' ಶೀರ್ಷಿಕೆಯು ಮೂರನೇ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಅಂಕಿತಾ ಕುಂಡು ಧ್ವನಿ ನೀಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಹಾಡನ್ನು ಬಿಡುಗಡೆ ಮಾಡಿದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ, ಚಿತ್ರಕ್ಕೆ ಶುಭ ಕೋರಿದರು.

ನಾಯಕಿಯಾಗಿ ನಟಿಸಿರುವ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ. ಹಾಡಿಗೆ ಧನಂಜಯ ಅವರ ನೃತ್ಯ ನಿರ್ದೇಶನವಿದ್ದು, ಜೋಡಿಯ ನಡುವಿನ ಕೆಮಿಸ್ಟ್ರಿ ಸಖತ್ ವರ್ಕ್ ಆಗಿದೆ. ಕೋಟೆ ನಗರ ಚಿತ್ರದುರ್ಗದ ರಮಣೀಯ ದೃಶ್ಯಗಳ ನಡುವೆ ಸುಂದರವಾಗಿ ಮೂಡಿಬಂದಿದೆ. ಬೆಟ್ಟಗಳು, ಬಂಡೆಗಳು ಮತ್ತು ಗಲ್ಲಿಗಳಲ್ಲಿನ ದೃಶ್ಯಗಳು ಹಾಡಿನ ಸೌಂದರ್ಯವನ್ನು ಹೆಚ್ಚಿಸಿವೆ.

ಈ ಹಿಂದೆ ಬಿಡುಗಡೆಯಾದ 'ನನ್ ಹುಡುಗಿ' ಮತ್ತು 'ಲಾಕ್ ಲಾಕ್' ಹಾಡುಗಳು ಈಗಾಗಲೇ ಯುವಜನರ ಮೆಚ್ಚಿನವುಗಳಾಗಿವೆ ಮತ್ತು A2 ಮ್ಯೂಸಿಕ್‌ ಚಾನಲ್‌ನಲ್ಲಿ ಬಿಡುಗಡೆಯಾದ 'ರಾಘವ ರಾಘವ' ಹಾಡು ಇದೀಗ ವೀಕ್ಷಣೆಗೆ ಸಿದ್ಧವಾಗಿದೆ.

ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಡಿ ಮತ್ತು ಗಿರೀಶ್ ಕುಮಾರ್ ನಿರ್ಮಿಸಿರುವ ಅನ್‌ಲಾಕ್ ರಾಘವ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರೋಮ್ಯಾನ್ಸ್, ಆ್ಯಕ್ಷನ್ ಮತ್ತು ಮನರಂಜನೆಯ ಭರವಸೆ ನೀಡಿದ್ದಾರೆ. ಫೆಬ್ರುವರಿ 7 ರಂದು ತೆರೆಗೆ ಬರಲಿರುವ ಈ ಚಿತ್ರ ರಾಮ ರಾಮ ರೇ ಖ್ಯಾತಿಯ ಡಿ ಸತ್ಯ ಪ್ರಕಾಶ್ ಅವರ ಕಥೆ ಮತ್ತು ಚಿತ್ರಕಥೆಯನ್ನು ಒಳಗೊಂಡಿದೆ.

ಲವಿತ್ ಛಾಯಾಗ್ರಾಹಕರಾಗಿ, ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನವನ್ನು ನಿರ್ವಹಿಸುತ್ತಿದ್ದಾರೆ. ವಿನೋದ್ ಮತ್ತು ಅರ್ಜುನ್ ಅವರ ಸಾಹಸ ಸಂಯೋಜನೆ ಹೊಂದಿರುವ ಈ ಚಿತ್ರದ ತಾರಾಗಣದಲ್ಲಿ ಸಾಧು ಕೋಕಿಲ, ಶೋಭರಾಜ್, ಅವಿನಾಶ್ ಮತ್ತು ಭೂಮಿ ಶೆಟ್ಟಿ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT