ಅನಾಮಧೇಯ ಅಶೋಕ್ ಕುಮಾರ್ ಸ್ಟಿಲ್ 
ಸಿನಿಮಾ ಸುದ್ದಿ

ಕಿಶೋರ್ ಕುಮಾರ್ ನಟನೆಯ 'ಅನಾಮಧೇಯ ಅಶೋಕ್ ಕುಮಾರ್' ತೆರೆಗೆ ಬರಲು ಸಿದ್ಧ

ಐಟಿ ವೃತ್ತಿಪರರಾಗಿರುವ ಸಾಗರ್ ಕುಮಾರ್ ಇದೀಗ ಚಿತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಕಿಶೋರ್ ಕುಮಾರ್ ನಟನೆಯ, ಸಾಗರ್ ಕುಮಾರ್ ನಿರ್ದೇಶನದ 'ಅನಾಮಧೇಯ ಅಶೋಕ್ ಕುಮಾರ್' ಚಿತ್ರವು ಕ್ರೈಮ್ ಥ್ರಿಲ್ಲರ್ ಆಗಿದ್ದು, ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌ಕೆಎನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಲಾ ಕುಮಾರ್ ಮತ್ತು ರಮ್ಯಾ ಸಾಗರ್ ಕುಮಾರ್ ನಿರ್ಮಿಸಿರುವ ಈ ಬಹು ನಿರೀಕ್ಷಿತ ಯೋಜನೆ ಫೆಬ್ರುವರಿ 7ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.

ಐಟಿ ವೃತ್ತಿಪರರಾಗಿರುವ ಸಾಗರ್ ಕುಮಾರ್ ಇದೀಗ ಚಿತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಿಜ ಜೀವನದ ಕ್ರೈಂ ಪ್ರಕರಣಗಳು ಮತ್ತು ಮಾಜಿ ಪೋಲೀಸ್ ಅಧಿಕಾರಿಯಿಂದ ಸ್ಫೂರ್ತಿ ಪಡೆದ ಕಥಾವಸ್ತುವನ್ನು ಒಳಗೊಂಡಿದ್ದು, ಸಂಜೆಯಿಂದ ಬೆಳಗಿನವರೆಗೆ ಪ್ರಸಿದ್ಧ ವಕೀಲರ ಹತ್ಯೆಯ ಸುತ್ತ ಕೇಂದ್ರೀಕೃತವಾಗಿದೆ. ಸಾಗರ್ ಕುಮಾರ್ ಮತ್ತು ಬೆನ್ನಿ ಥಾಮಸ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕಿಶೋರ್ ಕುಮಾರ್ ಪತ್ರಕರ್ತನಾಗಿ ನಟಿಸಿದರೆ, ಹರ್ಷಿಲ್ ಕೌಶಿಕ್ ಸರ್ಕಲ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರೋದ್ಯಮದಲ್ಲಿ ಸವಾಲುಗಳ ನಡುವೆಯೂ, ಗುಣಮಟ್ಟದ ಕಂಟೆಂಟ್ ಮೆಚ್ಚುಗೆಯನ್ನು ಪಡೆಯುತ್ತಿದೆ ಎಂದು ಸಾಗರ್ ಕುಮಾರ್ ಹೇಳುತ್ತಾರೆ. ಅನಾಮಧೇಯ ಎಂದರೆ 'ಹೆಸರಿಲ್ಲದವನು' ಎಂದರ್ಥ. ಅನಾಮಧೇಯ ಅಶೋಕ್ ಕುಮಾರ್ ಚಿತ್ರದಲ್ಲಿನ ರಹಸ್ಯವು ಪ್ರೇಕ್ಷಕರನ್ನು ಕೊನೆಯವರೆಗೂ ಊಹಿಸುವಂತೆ ಮಾಡುತ್ತದೆ ಎನ್ನುತ್ತದೆ ಚಿತ್ರತಂಡ.

ಚಿತ್ರದ ತಾರಾಗಣದಲ್ಲಿ ಸುಧೀಂದ್ರ ನಾಯರ್, ಕಾಂತರಾಜ್ ಕಡ್ಡಿಪುಡಿ, ವೀರೇಶ್, ಸುಷ್ಮಾ, ಗಗನ್ ಮತ್ತು ದೀಪಕ್ ಇದ್ದಾರೆ. ಚಿತ್ರಕ್ಕೆ ಆಜಾದ್ ಅವರ ಸಂಗೀತ ಸಂಯೋಜನೆ, ಸುನಿಲ್ ಹೊನಳ್ಳಿ ಅವರ ಛಾಯಾಗ್ರಹಣ, ಯೇಸು ಅವರ ಸಂಕಲನವಿದೆ. ಚಿತ್ರವನ್ನು ಕುನಾಲ್ ಮತ್ತು ರವಿಚಂದ್ರನ್ ವಿತರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT