ಸ್ಮೃತಿ ಇರಾನಿ  
ಸಿನಿಮಾ ಸುದ್ದಿ

'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಸೀಸನ್ 2: ಪ್ರತಿ ಎಪಿಸೋಡ್ ಗೆ ಸ್ಮೃತಿ ಇರಾನಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಹೊಸ ಆವೃತ್ತಿಯು ಜುಲೈ 29 ರಂದು ರಾತ್ರಿ 10:30 ಕ್ಕೆ ಸ್ಟಾರ್ ಪ್ಲಸ್‌ನಲ್ಲಿ ಮೂಡಿಬರಲಿದೆ. ಸಹಜವಾಗಿ, ಈ ಬಾರಿ ಇರಾನಿ ಅವರಿಗೆ ಎಷ್ಟು ಸಂಭಾವನೆ ನೀಡಲಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಇದ್ದೇ ಇರುತ್ತದೆ.

ಬಿಜೆಪಿಯ ಮಾಜಿ ಸಂಸದೆ ಸ್ಮೃತಿ ಇರಾನಿ ಹಲವು ವರ್ಷಗಳ ಬಳಿಕ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದು, 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ' ಧಾರವಾಹಿಯ ತುಳಸಿ ವೀರ್ವಾನಿಯಾಗಿ ಮತ್ತೊಮ್ಮೆ ವೀಕ್ಷಕರನ್ನು ರಂಜಿಸಲಿದ್ದಾರೆ. ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ ಸೀಸನ್ 2 ಧಾರವಾಹಿಯ ನಟಿ ಸ್ಮೃತಿ ಇರಾನಿ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ಗೋಲ್ಡ್ ಬಾರ್ಡರ್ ಹೊಂದಿರುವ ಮೆರೂನ್ ಮಿಶ್ರಿತ ಸೀರೆ ಯಲ್ಲಿ ಸಾಂಪ್ರದಾಯಿಕ ಗೃಹಿಣಿ ಲುಕ್ ನಲ್ಲಿ ಇರಾನಿ ಕಾಣಿಸಿಕೊಂಡಿದ್ದಾರೆ. ಮಂಗಳ ಸೂತ್ರ, ಆಭರಣ ಮತ್ತು ಕೆಂಪು ಬಿಂದಿಯೊಂದಿಗೆ ಈ ಸೀರೆಯಲ್ಲಿ ಅಪ್ಪಟ ದೇಶೀಯ ಗ್ರಾಮೀಣ ಮಹಿಳೆಯಂತೆ ಅವರು ಕಂಗೊಳಿಸಿದ್ದಾರೆ.

ಹೊಸ ಆವೃತ್ತಿಯು ಜುಲೈ 29 ರಂದು ರಾತ್ರಿ 10:30 ಕ್ಕೆ ಸ್ಟಾರ್ ಪ್ಲಸ್‌ನಲ್ಲಿ ಮೂಡಿಬರಲಿದೆ. ಸಹಜವಾಗಿ, ಈ ಬಾರಿ ಇರಾನಿ ಅವರಿಗೆ ಎಷ್ಟು ಸಂಭಾವನೆ ನೀಡಲಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಇದ್ದೇ ಇರುತ್ತದೆ.

ಎನ್‌ಡಿಟಿವಿ ವರದಿಯ ಪ್ರಕಾರ, ಹೊಸ ಆವೃತ್ತಿಯಲ್ಲಿ ಆಕೆಗೆ ಪ್ರತಿ ಎಪಿಸೋಡ್ ಗೆ ರೂ. 14 ಲಕ್ಷ ನೀಡಲಾಗುತ್ತದೆ ಎನ್ನಲಾಗಿದೆ.

2000 ಇಸವಿಯ ಆರಂಭದಲ್ಲಿ ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್ 1 ರಲ್ಲಿ ತುಳಸಿ ವೀರ್ವಾನಿ ಪ್ರದಾನ ಪಾತ್ರದಲ್ಲಿ ವೀಕ್ಷಕರನ್ನು ರಂಜಿಸಿದ್ದ ಸ್ಮೃತಿ ಅವರು ಪ್ರತಿ ಎಪಿಸೋಡ್ ಗೆ ರೂ 1,800 ಸಂಭಾವನೆ ಪಡೆದಿದ್ದರು ಎಂದು ವರದಿಗಳು ಹೇಳುತ್ತವೆ.

2000 ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಆರಂಭವಾದ 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್-1 2008 ರವರೆಗೆ ಮೂಡಿಬಂದಿತ್ತು.

ಧಾರವಾಹಿ ನಿರ್ಮಾಕರು ಇದೀಗ ಎರಡನೇ ಸೀಸನ್‌ನೊಂದಿಗೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ತುಳಸಿ ಪಾತ್ರದಲ್ಲಿ ಸ್ಮೃತಿ ಅವರ ಅಭಿನಯ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಪ್ರೋಮೋವನ್ನು ಸ್ಟಾರ್ ಪ್ಲಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

SCROLL FOR NEXT