ನಟಿ ಆಲಿಯಾ ಭಟ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

Sandalwood ನತ್ತ Alia Bhat?: ಕನ್ನಡ ಚಿತ್ರರಂಗದ ಬಗ್ಗೆ ಹೇಳಿದ್ದೇನು?

ಕರ್ನಾಟಕದಿಂದ ಹೊರಬರುವ ಕಥೆ ಹೇಳುವಿಕೆ ಮತ್ತು ಸೃಜನಶೀಲತೆಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ.

ಬೆಂಗಳೂರು: "ಸ್ಟೂಡೆಂಟ್ ಆಫ್ ದಿ ಇಯರ್" ಚಿತ್ರದ ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ಆಲಿಯಾ ಭಟ್ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ನಟಿ ಆಲಿಯಾ ಭಟ್ ಆರಂಭಿಸಿರುವ ಉಪಕ್ರಮ Ed-a-Mamma ಗಾಗಿ ಆಲಿಯಾ ಭಟ್ ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿ ರಿಲಯನ್ಸ್ ರಿಟೇಲ್ ಜೊತೆಗಿನ ಪಾಲದಾರಿಕೆ ಮೂಲಕ ತಮ್ಮ ಮೊದಲ ಅಂಗಡಿ ತೆರೆದಿದ್ದಾರೆ. ಇದು ಮಕ್ಕಳು ಮತ್ತು ತಾಯಂದಿರಿಗಾಗಿ ಸುಸ್ಥಿರ ಬಟ್ಟೆ ಬ್ರಾಂಡ್ ಅನ್ನು ಪ್ರಾರಂಭಿಸುವ ಅವರ ಉಪ ಕ್ರಮವಾಗಿದೆ.

ಈ ವೇಳೆ ಮಾತನಾಡಿದ ಆಲಿಯಾ, ತಮ್ಮ ಈ ಉಪ ಕ್ರಮವು ಮತ್ತೊಂದು ಬ್ರ್ಯಾಂಡ್‌ಗಿಂತ ಹೆಚ್ಚಿನದಾಗುತ್ತದೆ ಎಂದು ನಾನು ಭಾವಿಸುತ್ತೇನೆ; ಇದು ಚಿಂತನಶೀಲ, ಸುಸ್ಥಿರ ಜೀವನದ ಕುರಿತು ನಗರದ ದೊಡ್ಡ ಸಂಭಾಷಣೆಯ ಭಾಗವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂತೆಯೇ ಓರ್ವ ನಟಿಯಾಗಿ, ತಾಯಿಯಾಗಿ, ಗಾಯಕಿಯಾಗಿ ಮತ್ತು ಉದ್ಯಮಿಯಾಗಿ ಅನೇಕ ಸವಾಲುಗಳನ್ನು ಸ್ವೀಕರಿಸಲು ನಾನು ಸಿದ್ಧಳಾಗಿದ್ದೇನೆ. ಇದು ನನಗೆ ದೊಡ್ಡ ಸವಾಲಿನ ಸಮಯ. ಅದು ಎಂದಿಗೂ ಸಾಕಾಗುವುದಿಲ್ಲ! ಆದರೆ ನಾನು ಈ ಸಮಯದಲ್ಲಿ ಏನು ಮಾಡುತ್ತಿದ್ದರೂ ಅದರಲ್ಲಿ ಆದ್ಯತೆ ನೀಡಲು ಮತ್ತು ಸಂಪೂರ್ಣವಾಗಿ ಇರಲು ಕಲಿಯುತ್ತಿದ್ದೇನೆ" ಎಂದು ಹೇಳಿದರು.

ಸ್ಯಾಂಡಲ್ ವುಡ್ ಗೆ ಎಂಟ್ರಿ?

ಇದೇ ವೇಳೆ ಕನ್ನಡದಲ್ಲಿ ಚಿತ್ರ ಮಾಡುವ ಕುರಿತು ಮಾತನಾಡಿದ ಆಲಿಯಾ, 'ಕರ್ನಾಟಕದಿಂದ ಹೊರಬರುವ ಕಥೆ ಹೇಳುವಿಕೆ ಮತ್ತು ಸೃಜನಶೀಲತೆಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ನಟಿಯಾಗಿ ಅಥವಾ ನಿರ್ಮಾಣದ ಕಡೆಯಿಂದಾಗಲಿ, ಯೋಜನೆಗಳನ್ನು ಅನ್ವೇಷಿಸುವುದು ಮತ್ತು ಸಹಕರಿಸುವುದು ಅದ್ಭುತವಾಗಿರುತ್ತದೆ. ಈ ನಿಟ್ಟಿನಲ್ಲಿ ನಾನೂ ಕಾರ್ಯ ನಿರ್ವಹಿಸುತ್ತಿದ್ದೇ ಎಂದರು.

ಬೆಂಗಳೂರಿನೊಂದಿಗೆ ವಿಶೇಷ ನಂಟು

ಇದೇ ವೇಳೆ ತಮಗೂ ಹಾಗೂ ಬೆಂಗಳೂರು ನಗರಕ್ಕೂ ವಿಶೇಷ ನಂಟಿದ್ದು, ಬೆಂಗಳೂರಿಗೆ ನನ್ನ ಭೇಟಿಗಳು ಚಿಕ್ಕದಾಗಿದ್ದರೂ, ಅವು ಪ್ರೀತಿಯಿಂದ ತುಂಬಿವೆ. ಈ ಉದ್ಯಾನ ನಗರವು ಯಾವಾಗಲೂ ಸ್ವಾಗತಾರ್ಹವಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

Ebola outbreak: ಮಾರಣಾಂತಿಕ ಎಬೋಲಾಗೆ 131 ಸಾವು, 500ಕ್ಕೂ ಹೆಚ್ಚು ಶಂಕಿತ ಕೇಸ್; ವಿಶ್ವಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ!

ದೇವಾಲಯಗಳ ಚಿನ್ನದ ಮೇಲೆ ಪ್ರಧಾನಿ ಮೋದಿ ಕಣ್ಣು?: ಕೇಂದ್ರ ಸರ್ಕಾರ ಹೇಳಿದ್ದೇನು?

ಆತ್ಮಹತ್ಯೆ ವದಂತಿ ಬೆನ್ನಲ್ಲೇ ಜೈಲಿಗೆ ತೆರಳಿ ನಟ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್

ಶಾಲೆಯಲ್ಲಿ ‘Yes Sir’ ಬದಲು ಜೈ ಶ್ರೀರಾಮ್: ಯತ್ನಾಳ್​​ ಹೇಳಿಕೆಗೆ ಜನಾರ್ದನ ರೆಡ್ಡಿ ಬೆಂಬಲ!

SCROLL FOR NEXT